Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಪ್ರಾದೇಶಿಕ

ಬಸವಲಿಂಗೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ

graochandan1 by graochandan1
February 5, 2025
in ಪ್ರಾದೇಶಿಕ, ಸುದ್ದಿ
0
ಬಸವಲಿಂಗೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ
Share on FacebookShare on Twitter

ಹೊಸ ಶಕೆ ನ್ಯೂಸ್,
ಯಲಬುರ್ಗಾ : ಶ್ರೀ ಮಠದಲ್ಲಿ ಬಸವತತ್ತ್ವಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸರ್ವಧರ್ಮ ಸಾಮೂಹಿಕ ವಿವಾಹ, ಗೋವುಗಳ ರಕ್ಷಣೆ, ಸಮ್ಮೇಳನ, ಪುರಾಣ, ಪ್ರವಚನ ನಡೆಸುವ ಮೂಲಕ ಸಾಹಿತ್ಯಾಸಕ್ತಿರಿಗೆ, ಸಂಗೀತಗಾರನ್ನು ಪೊಷಿಸುವ ಮೂಲಕ ಭಕ್ತ ಸಮೂಹದಲ್ಲಿ ಅಚ್ಚಳಿಯದೇ ಉಳಿದಿರುವ ಬಸವಲಿಂಗೇಶ್ವರ ಶ್ರೀಗಳ ಕಾರ್ಯ ಇಂದಿನ ಮಠಾಧೀಶರಿಗೆ ಸ್ಫೂರ್ತಿಯಾಗಿದೆ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ವೀರಣ್ಣ ಹುಬ್ಬಳ್ಳಿ ಹೇಳಿದರು.

ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳ ೨೩ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀ ವೀರಣ್ಣ ಹುಬ್ಬಳ್ಳಿ ಅವರ ಕುಟುಂಬಸ್ಥರಿಂದ ಶ್ರೀಗಳಿಗೆ ತುಲಾಭಾರ ಸೇವೆ ಸಲ್ಲಿಸಿ ಮಾತನಾಡಿದ ಅವರು,ಹಾನಗಲ್‌ ಕುಮಾರಸ್ವಾಮಿಯವರು ಶಿವಯೋಗ ಮಂದಿರದಲ್ಲಿ ಸ್ಥಾಪಿಸಿದ ಸಾಂಸ್ಕೃತಿ, ಆಧ್ಯಾತ್ಮಿಕ ಪಾಠಶಾಲೆಯ ಸಪ್ತ ಶಿಷ್ಯರಲ್ಲೊಬ್ಬರಾಗಿದ್ದರು. ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರವಲ್ಲದೇ, ಯೋಗಾಸನ,ಹಾಗೂ ಕೃಷಿ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ್ದಾರೆ. ಈ ಭಾಗದಲ್ಲಿ “ನಡೆದಾಡುವ ದೇವರು” ಎಂದೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಸವಲಿಂಗೇಶರ ಶ್ರೀಗಳು ಮಾತನಾಡಿ, ಯಾವುದೇ ಮಠಗಳು ಬೆಳೆದು ಸಮಾಜಮುಖಿಯಾಗಿ ನಿರ್ಮಾಣಗೊಂಡಲ್ಲಿ ಅದು ಸಮಾಜದ ಆಸ್ತಿಯಾಗುತ್ತದೆ. ಮಠಾಧೀಶರು ಹಾಗೂ ಭಕ್ತರು ಒಂದಾಗಿ ಮಠಗಳನ್ನು ಬೆಳೆಸುವ ಮೂಲಕ ಸಂಸ್ಕಾರವಂತ ಸಮಾಜ ನಿರ್ಮಿಸಲು ಸಾಧ್ಯ ಎಂದರು.

ತಾಲೂಕ ಕ.ಕಾ.ನಿ. ಪತ್ರಕರ್ತ ಸಂಘದಿಂದ ಶ್ರೀಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಗೇರಿಯ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿ, ಚಿಕ್ಕಮ್ಯಾಗೇರಿ ಭೂಕೈಲಾಸ ಮಠದ ಶ್ರೀ ಗುರು ಶಾಂತವೀರ ಸ್ವಾಮೀಜಿ,ಪಪಂ ಸದಸ್ಯ ಬಸಲಿಂಗಪ್ಪ ಕೊತ್ತಲ್, ಕಳಕಪ್ಪ ತಳವಾರ,ಶಕುಂತಲಾ ದೇವಿ ಮಾಲಿ ಪಾಟೀಲ, ಭವರಸಿಂಗ್ ರಾಜ ಪುರೋಹಿತ,ಮಂಜುನಾಥ ಪತಂಗರಾಯ, ಮಲ್ಲಪ್ಪ ಭೂತೆ, ಮಹೇಶ್ ಹುಬ್ಬಳ್ಳಿ , ಶರಣಪ್ಪ ದಿವಟರ, ಬಸವರಾಜ್ ಕೊಳ್ಳಿ ಸೇರಿದಂತೆ ಇತರರು ಇದ್ದರು.

Previous Post

ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ನರೇಗಾ ಹಬ್ಬದಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಶಸ್ತಿಗಳ ಗರಿ

Next Post

ರಾಜ್ಯದ ಪ್ರವಾಸೋದ್ಯಮ ನೀತಿಯಡಿ 28 ಪ್ರವಾಸೋದ್ಯಮ ಯೋಜನಾ ಪ್ರಸ್ತಾವಗಳಿಗೆ ಅನುಮೋದನೆ’ : ಸಚಿವ ಎಚ್.ಕೆ.ಪಾಟೀಲ

graochandan1

graochandan1

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!