Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಯುವಕನ ಕೊಲೆ ಪ್ರಕರಣ : ಕೊಪ್ಪಳ ಬಂದ್ ಗೆ ಜೆಡಿಎಸ್ ಬೆಂಬಲ – ರಮೇಶ ಡಂಬ್ರಳ್ಳಿ

Hosashake News by Hosashake News
August 6, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ
0
ಯುವಕನ ಕೊಲೆ ಪ್ರಕರಣ : ಕೊಪ್ಪಳ ಬಂದ್ ಗೆ ಜೆಡಿಎಸ್ ಬೆಂಬಲ – ರಮೇಶ ಡಂಬ್ರಳ್ಳಿ
Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ: ನಗರದಲ್ಲಿ ಹಿಂದೂ ವಾಲ್ಮೀಕಿ ಯುವಕನ ಕೊಲೆ ಮಾಡಿದ ಸಾಧಿಕ್ ಕೊಲ್ಕಾರ ಮತ್ತು ಅವರ ಸಂಗಡಿಗರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಜೆಡಿಎಸ್ ಪರಿಶಿಷ್ಟ ಪಂಗಡದ ಜಿಲ್ಲಾ ಅಧ್ಯಕ್ಷ ರಮೇಶ ಡಂಬ್ರಳ್ಳಿ ಆಗ್ರಹ ಪಡಿಸಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೊಲೆ ಮಾಡಿದ ಯುವಕರ ಗುಂಪು ಗಾಂಜ ಸೇವನೆ. ಬೈಕ್ ವೀಲಿಂಗ್. ಇನ್ನಿತರ ಅಪರಾಧ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಕೊಲೆಗಾರರ ಅಪರಾಧ ಮನೋಭಾವನೆ ತೋರುತ್ತದೆಎಂದರು.

ಜಿಲ್ಲೆಯಲ್ಲಿ ಇಂಥ ಘೋರ ಘಟನೆ. ಹತ್ಯೆ, ಕೊಲೆ ಹಿಂದೆಂದೂ ನಡೆದಿರಲಿಲ್ಲ. ಕಾರಣ ಏನೇ ಇದ್ದರೂ ಕೊಲೆ ಮಾಡುವಂಥ ಘಟನೆ ಅಗಬಾರದಿತ್ತು. ಕುಟುಂಬದಲ್ಲಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಅವರೆಲ್ಲ ಅನಾಥರಾಗಿದ್ದಾರೆ. ಎರಡು ಕೋಮಿನ ಜನರು ಶಾಂತಿ ಕಾಪಾಡಬೇಕು. ಮುಂದೆ ಇಂತಹ ಯಾವುದೇ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಬೇಕು ಎಂದು ಹೇಳಿದರು.

ಯುವಕನ ಕೊಲೆ ಪ್ರಕರಣ ಸಂಬಂಧಿಸಿದಂತೆ ಆ.8 ರಂದು ನಡೆಯುವ ಕೊಪ್ಪಳ ಬಂದ್ ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಲು ತೀರ್ಮಾನಿಸಿದ್ದೇವೆ ಎಂದರು.  ಈ ಸಂಧರ್ಭದಲ್ಲಿ ಮುಖಂಡರಾದ ಶರಣಪ್ಪ ಜಡಿ,  ಮಂಜುನಾಥ ಸೊರಟುರು, ಸೋಮನಗೌಡ ಹೊಗರನಾಳ, ರವಿಕುಮಾರ್ ಮೇದಾರ ಇತರರು ಇದ್ದರು

Tags: ಯುವಕನ ಕೊಲೆ ಪ್ರಕರಣ : ಕೊಪ್ಪಳ ಬಂದ್ ಗೆ ಜೆಡಿಎಸ್ ಬೆಂಬಲ - ರಮೇಶ ಡಂಬ್ರಳ್ಳಿ
Previous Post

ಕೆ-ರಿಡೇ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಗೋವಿಂದ ರೆಡ್ಡಿ ನೇಮಕ

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ‌ ದಿನಪತ್ರಿಕೆ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಸೂಚನೆ

ಹೊಸಶಕೆ ದಿನಪತ್ರಿಕೆ

ಯುವಕನ ಕೊಲೆ ಪ್ರಕರಣ : ಕೊಪ್ಪಳ ಬಂದ್ ಗೆ ಜೆಡಿಎಸ್ ಬೆಂಬಲ – ರಮೇಶ ಡಂಬ್ರಳ್ಳಿ

ಕೆ-ರಿಡೇ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಗೋವಿಂದ ರೆಡ್ಡಿ ನೇಮಕ

ನ್ಯಾಯಯುತ ತನಿಖೆ ಸೇರಿ ಸರ್ಕಾರದಿಂದ ಸೂಕ್ತ ರಕ್ಷಣೆ  ಸಚಿವ ಶಿವರಾಜ ತಂಗಡಗಿ ಭರವಸೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!