ಹೊಸಶಕೆ ನ್ಯೂಸ್-ಕೊಪ್ಪಳ: ಬಿಜೆಪಿಯ ವರಿಗೆ ಪ್ರತಿಭಟನೆ ಮಾಡೋಕೆ ಯಾವ ನೈತಿಕತೆ ಇಲ್ಲ, ಬಿಜೆಪಿಯವರು ತುಮಕೂರಲ್ಲಿ ಪ್ರತಿಭಟನೆ ಮಾಡೋ ಬದಲು, ವಿಜಯೇಂದ್ರ ಅವರು ತುಮಕೂರಲ್ಲಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಮೋದಿ ಮನೆಯಲ್ಲಿ ಪ್ರತಿಭಟನೆ ಮಾಡಲಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಮಂಗಳವಾರ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಅವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ, ಅವರು ಯಾವ ಮುಖ ಇಟ್ಕೊಂಡು ಪ್ರತಿಭಟನೆ ಮಾತಾಡುತ್ತಾರೆ ಅವರಿಗೆ ಸರ್ಕಾರದ ಸಿಸ್ಟಂ ಗೊತ್ತಿಲ್ಲ, ವ್ಯವಸ್ಥೆನೂ ಗೊತ್ತಿಲ್ಲ ಎಂದು ವ್ಯಂಗವಾಡಿದರು.
ಯಾರೂ ಯೂರಿಯಾ ಸಪ್ಲೈ ಮಾಡೋದು, ರಾಜ್ಯ ಸರ್ಕಾರನಾ…? ಕರ್ನಾಟಕದಲ್ಲಿ ಇದೆಯಾ …? ಈ ವರ್ಷ ರಾಜ್ಯದಲ್ಲಿ ಒಂದುವರೆ ತಿಂಗಳೂ ಬಿತ್ತನೆ ಬೇಗ ಆಗಿದ್ದು, ಅಗಷ್ಟ್ ನಲ್ಲಿ ಬರಬೇಕಾದ ಕೋಟಾ ಇನ್ನೂ ಇದೆ, ರಾಜ್ಯದ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಅವರು ಮಾಡುತಿದ್ದಾರೆ ಜನರಿಗೆ ಸುಳ್ಳು ಹೇಳ್ತಿದ್ದಾರೆ, ಬಿಜೆಪಿ ಅವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಬಿಜೆಪಿ ಅವರು ಹೇಳಿದ್ದು ನಂಬಬೇಡಿ ಬಿಜೆಪಿ ಸುಳ್ಳಿ ಹೇಳಿ ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಮಳೆ ಬೇಗ ಆಗಿದೆ, ಯೂರಿಯಾ ಬೇಕು ಅಂತ ವರದಿ ಕೊಟ್ಟರು, ಕೇಂದ್ರ ಸಪ್ಲೈ ಮಾಡಿಲ್ಲ, ರೈತರ ವಿಚಾರದಲ್ಲಿ ರಾಜಕಿಯ ಮಾಡೋದು ಬಿಡಬೇಕು ನಾವು ರೈತರನ್ನ ಪ್ರೀತಿ ವಿಶ್ವಾಸದಿಂದ ಕಾಣ್ತಿವಿ ರೈತರನ್ನ ಮನವಿ ಮಾಡ್ತಿವಿ, ಒಂದು ದಿನ ಲೇಟ್ ಆದ್ರೂ ರೈತರಿಗೆ ಗೊಬ್ಬರ ಕೊಡ್ತಿವಿ ಎಂದು ಹೇಳಿದರು.