ಹೊಸಶಕೆ ನ್ಯೂಸ್-ಕುಕನೂರ:
ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದಢವಾಗಿರುತ್ತದೆ. ಸೋಲು -ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಫರೀದಾಬೇಗಂ ಹೇಳಿದರು.
ಕುದರಿಮೋತಿ ಗ್ರಾಮದಲ್ಲಿ ಭಾನುವಾರ ಕುದರಿಮೋತಿ ಪ್ರೀಮಿಯರ ಲೀಗ್ 2025 ಕೆ.ಪಿ.ಸಿ.ಸಿ.ವತಿಯಿಂದ ಮೂರನೇ ವರ್ಷದ ಟೆನ್ನಿಸ್ ಹಾರ್ಡ್ ಕ್ರಿಕೆಟ್ ಪಂದ್ಯಾವಳಿ ಸೀಸನ್ 3. ರ ಮೂರನೇ ವರ್ಷದ ಕ್ರಿಕೆಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ಕ್ರಿಕೆಟ್ ಆಟಗಾರರಾದ ದಾನನಗೌಡ ಪೊ.ಪಾಟೀಲ್ ಮಾತನಾಡಿ ಕ್ರೀಡೆಯು ದೈಹಿಕ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಕ್ರೀಡೆಗಳನ್ನು ಆಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶರಣಯ್ಯಸ್ವಾಮಿ ಜಂಗಮೂರು, ರವಿ ಕಟ್ಟಿಗಿ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದ್ಯಾಮಣ್ಣ ಉಚ್ಚಲಕುಂಟಿ,ವಿಜಯಕುಮಾರ್ ದಾಸರ್,
ದುರಗಪ್ಪ ದೂಪಂ,ಅಮರೇಶ ತಲ್ಲೂರು,ಗವಿಸಿದ್ದಪ್ಪ ದೊಡ್ಡಮನಿ,ಪ್ರಶಾಂತ ಅಬಕಾರಿ, ಶಂಕ್ರಪ್ಪ ದೊಡ್ಡಮನಿ,ಭೀಮಣ್ಣ ಕಾಳಿ, ನಾಗರಾಜ ಕೆಂಗಾರ,
ದೇವಪ್ಪ ಹೊಸಮನಿ,ಕ್ರಿಕೆಟ್ ಟೀಮ್ ಮ್ಯಾನೇಜರ್ ಮಂಜುನಾಥ ವೀರಟ್ ಕೋಲಿ,ಬುಡ್ನೇಸಾಬ ನವಲಿ,ಸೈಲಾನ್,ಹನುಮೇಶ ಗಟ್ಟೆಪ್ಪನವರ್,, ಪಂಪನಗೌಡ ಮಾ.ಪಾಟೀಲ,ಮುತ್ತಣ್ಣ ಹನಮಣ್ಣನವರ್,ಸೇರಿದಂತೆ ಇತರರು ಇದ್ದರು