ಹೊಸಶಕೆ ನ್ಯೂಸ್-ಗಂಗಾವತಿ:ಸಾಮಾಜಿಕ ಸೇವೆಯಲ್ಲಿ ನಟ ದಿವಂಗತ ಡಾ.ಪುನೀತ್ ರಾಜಕುಮಾರ ಅವರು ಮಾದರಿಯಾಗಿದ್ದಾರೆ. ಯುವಕರು ಡಾ.ಪುನೀತ್ ಅವರಂತೆ ಬಾಳಿ ಬದುಕುವಂತೆ ಹವ್ಯಾಸಿ ಹಾಡುಗಾರ ಪರಶುರಾಮ ದೇವರಮನೆ ಹೇಳಿದರು.
ನಗರದ ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಸಂಗೀತ ಸ್ವರಾಂಜಲಿ ಕರೋಕೆ ಕಲಾ ತಂಡದ ವತಿಯಿಂದ ಏರ್ಪಡಿಸಿದ್ದ ಡಾ.ಪುನೀತ್ ರಾಜಕುಮಾರ ಅವರ 50 ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿಷ್ಕಿಂಧಾ ಅಂಜನಾದ್ರಿಯ ಬಗ್ಗೆ ವಿಶೇಷ ಭಕ್ತಿ ಇತ್ತು ಈ ಭಾಗದಲ್ಲಿ ಸಿನೆಮಾ ಶೂಟಿಂಗ್ ಸಂದರ್ಭದಲ್ಲಿ ಆನೆಗೊಂದಿ ಭಾಗದಲ್ಲಿ ಸುತ್ತಾಟ ಮಾಡಿ ಜನರೊಂದಿಗೆ ಬೆರೆಯುತ್ತಿದ್ದರು.ಇಲ್ಲಿಯ ಶಾಲೆಗಳಿಗೆ ಕಂಪ್ಯೂಟರ್, ವಿಜ್ಞಾನ ವಿಷಯಗಳ ಸಲಕರಣೆಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಶಿಕ್ಷಣ ಸೇವೆ ಮಾಡಿದ್ದಾರೆ. ಇದನ್ನು ನಮ್ಮ ಯುವಕರು ರೂಢಿಸಿಕೊಂಡು ಡಾ.ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಕರೋಕೆ ಕಲಾವಿದರಾದ ಅಂಬಿಕಾ,ಸುಧಾ ಆನೆಗೊಂದಿ, ವಿಜಯಲಕ್ಷ್ಮಿ, ಗಿರಿಜಮ್ಮ,ಲಲಿತಮ್ಮ,ಹನುಮಂತಪ್ಪ ಹುಲಿಹೈದರ್,ಮಂಜುನಾಥ ಗೋಡಿನಾಳ,ವಿಕ್ರಂ ಬೆಂಗಳೂರು, ತಟ್ಟಿ ಶಾಮಣ್ಣ,ತಿಪ್ಪೇಸ್ವಾಮಿ ಹೊಸಮಠ,ಪಪ್ತಿ ವಿರೇಶ,ಧೂಳು ವೆಂಕಟೇಶ, ಛತ್ರಪ್ಪ ತಂಬೂರಿ, ಐಲಿ ರಮೇಶ,ಕುರುಗೋಡು ವೆಂಕಟೇಶ, ಕೃಷ್ಣವೇಣಿಕಬ್ಬೇರ್, ವೀರಭದ್ರಪ್ಪ, ವಿರೂಪಾಕ್ಷಪ್ಪ ಶಿರವಾರ,ಪೋಲಕಾಲ್ ಯಲ್ಲಪ್ಪ,ಕಾಜಾಹುಸೇನ ಮಳ್ಳೂರ,ಅಲಿ ಹಾಜಿ ಇತರರು ಪಾಲ್ಗೊಂಡಿದ್ದರು.