Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಕಲೆ-ಸಾಹಿತ್ಯ-ಸಂಸ್ಕೃತಿ

13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಹೇರಳ ಅವಕಾಶ : ಎನ್.ಸೂರಿಬಾಬು

Hosashake News by Hosashake News
March 29, 2025
in ಕಲೆ-ಸಾಹಿತ್ಯ-ಸಂಸ್ಕೃತಿ, ಜಿಲ್ಲೆ, ದೇಶ, ಪ್ರಾದೇಶಿಕ, ಶಿಕ್ಣಣ-ಆರೋಗ್ಯ, ಸಾಮಾಜಿಕ, ಸುದ್ದಿ
0
13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಹೇರಳ ಅವಕಾಶ : ಎನ್.ಸೂರಿಬಾಬು
Share on FacebookShare on Twitter

* ಕೊಪ್ಪಳ ಜಿಲ್ಲೆಯ ಉದ್ಯಮ ಹಾಗೂ ಉದ್ಯೋಗಾವಕಾಶಗಳು- ಅಭಿವೃದ್ಧಿ ಗೋಷ್ಠಿ

ಹೊಸಶಕೆ ನ್ಯೂಸ್-ಗಂಗಾವತಿ: ಕೃಷಿ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯಮಿಯಾಗಿ ಬೆಳೆಯಲು ಯುವಜನತೆಗೆ ಹೇರಳ ಅವಕಾಶಗಳಿದ್ದು, ಪ್ರಾಮಾಣಿಕತೆ, ಶ್ರದ್ಧೆ, ಬದ್ದತೆಯಿಂದ ಕೆಲಸಮಾಡಬೇಕು ಎಂದು ವಿದ್ಯಾನಿಕೇತನ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎನ್. ಸೂರಿಬಾಬು ಹೇಳಿದರು.

ಪಂಚಾಕ್ಷರಿ ಹಿರೇಮಠ ಮಹಾಮಂಟಪದಲ್ಲಿ ಕ್ಷೇತ್ರದ ಮಾಜಿ ಶಾಸಕ ಅಜಾತ ಶತ್ರು ದಿ. ಶ್ರೀರಂಗದೇವರಾಯಲು ಹೆಸರಿನಲ್ಲಿ ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಭಿವೃದ್ಧಿ ಗೋಷ್ಠಿಯಲ್ಲಿ ‘ಕೊಪ್ಪಳ ಜಿಲ್ಲೆಯ ಉದ್ಯಮ ಹಾಗೂ ಉದ್ಯೋಗಾವಕಾಶಗಳು’ ಕುರಿತು ಮಾತನಾಡಿದರು.

ಉದ್ಯಮಿಯಾಗುವವರು ಮೊದಲು ಉದ್ಯಮದ ಬಗ್ಗೆ ಅಧ್ಯಯನ, ಪರಿಸರ, ಅವಕಾಶ, ಸಂಪನ್ಮೂಲ ಸದ್ಭಳಕೆ,  ಜನರಿಗೆ ಬೇಕಾಗುವ ಅಗತ್ಯತೆ, ಸಮಾಜ, ಮಾರುಕಟ್ಟೆ ಬಗ್ಗೆ ಮೂಲ ಮಾಹಿತಿ ಪಡೆದುಕೊಂಡು ಅದನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು. ಉದ್ಯಮ ಸ್ಥಾಪನೆಗೆ ಹಣವೇ ಮೊದಲು ಬೇಕು ಎನ್ನುವುದು ಎಲ್ಲರ ಲೆಕ್ಕಾಚಾರವಾಗಿದೆ. ಆದರೆ ಹಣ ಮಾತ್ರ ಮುಖ್ಯವಾಗುವುದಿಲ್ಲ. ಸ್ಪಷ್ಟ ಯೋಜನೆ ಮತ್ತು ಸಂಪನ್ಮೂಲ ಕ್ರೋಢಿಕರಣ ಅಗತ್ಯವಾಗಿದೆ ಎಂದರು.

ಹೋಟೆಲ್‌ ಉದ್ಯಮ ಆರಂಭಿಸಿ ಆನ್‌ಲೈನ್‌ ಮೂಲಕ ಊಟ ಸರಬರಾಜು, ಸಿರಿ ಧಾನ್ಯಗಳ ಮಾರಾಟ, ಆನ್‌ಲೈನ್‌ಗಳ ಮೂಲಕ ಶಿಕ್ಷಣ, ರಿಯಲ್‌ ಎಸ್ಟೇಟ್‌, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಪ್ರವಾಸೋದ್ಯಮ, ಪರಿಸರಕ್ಕೆ ಹಾನಿಕಾರವಲ್ಲ ಇಟ್ಟಂಗಿ ತಯಾರಿಕೆ ಹೀಗೆ ಸಾಕಷ್ಟು ಅವಕಾಶಗಳು ಇವೆ. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾದ ಯುವಕ ಛಲದಿಂದ ಕೆಲಸ ಮಾಡಿದರೆ ದೊಡ್ಡ ಸಾಧನೆ ಮಾಡಬಹುದು’ ಎಂದು ಹೇಳಿದರು.  ಹಿರಿಯ ಪತ್ರಕರ್ತ ಶರಣಬಸಪ್ಪ ಬಾಚಲಾಪೂರ ಅಧ್ಯಕ್ಷ ಭಾಷಣ ಮಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಜಿಲ್ಲೆಯ ಪ್ರವಾಸೋದ್ಯಮ ಸವಾಲು-ಸಾಧ್ಯತೆ ಬಗ್ಗೆ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಎಸ್.ಕೆ.ಆರ್.ಪಿ.ಯು ಕಾಲೇಜಿನ ಪ್ರಾಚಾರ್ಯ ಪ್ರೊ. ಶಿವಾನಂದ ಮೇಟಿ, ಜಗದೀಶಪ್ಪ ಸಿಂಗನಾಳ, ಲಿಂಗಪ್ಪ ಬೆನಕನಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಶ ಗೋನಾಳ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಉಮೇಶ ಸಿಂಗನಾಳ, ಪತ್ರಕರ್ತ ಸಂತೋಷ ದೇಶಪಾಂಡೆ, ದೇವರಾಜ, ವಸಂತಕುಮಾರ ಪಾಲ್ಗೊಂಡಿದ್ದರು.  ಪತ್ರಕರ್ತ ಪ್ರಸನ್ನ ದೇಸಾಯಿ ನಿರೂಪಿಸಿದರು. ಮಲ್ಲಿಕಾರ್ಜುನ ಆಡೂರ ಸ್ವಾಗತಿಸಿದರು. ಬಸವರೆಡ್ಡಿ ಆಡೂರ ವಂದಿಸಿದರು.

==ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾದ ಯುವಕನೂ ಛಲದಿಂದ ಉದ್ಯಮಿಯಾಗಬಹುದು. ಯುವಕರು ಸಣ್ಣ ಕೆಲಸವನ್ನೂ ಗೌರವಿಸಬೇಕು. ವಿದ್ಯಾವಂತರೆಂದು ಕೆಲಸ ಸಣ್ಣತನದಿಂದ ನೋಡಬಾರದು : ಎನ್.ಸೂರಿಬಾಬು, ಅಧ್ಯಕ್ಷರು, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳು ಗಂಗಾವತಿ.  

Tags: 13th District Kannada Sahitya Sammelana13th District Kannada Sahitya Sammelana: Abundant opportunities in agriculture13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಕೃಷಿAbundant opportunities in agricultureeducation: N. SuribabuGangavathi Hosashake Newshoasahake daily News gangavathi Koppalಕೊಪ್ಪಳ ಜಿಲ್ಲೆಯ ಉದ್ಯಮ ಹಾಗೂ ಉದ್ಯೋಗಾವಕಾಶಗಳು- ಅಭಿವೃದ್ಧಿ ಗೋಷ್ಠಿಶಿಕ್ಷಣ ಕ್ಷೇತ್ರದಲ್ಲಿ ಹೇರಳ ಅವಕಾಶ : ಎನ್.ಸೂರಿಬಾಬು
Previous Post

ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ : ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

Next Post

ಕುಷ್ಟಗಿವರೆಗೆ ಪ್ರಯೋಗಾರ್ಥ ರೈಲು ಸಂಚಾರ :ರೈಲ್ವೆ ಸಚಿವರನ್ನು ಭೇಟಿಯಾಗಿ ಅಭಿನಂದನೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!