Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಕಲೆ-ಸಾಹಿತ್ಯ-ಸಂಸ್ಕೃತಿ

ಕೊಪ್ಪಳ ಜಿಲ್ಲಾ 13ನೇ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಡೆಸಲು ಸರ್ವ ಸಿದ್ಧತೆ: ಶಾಸಕ ಜನಾರ್ಧನ ರೆಡ್ಡಿ

ಸಮ್ಮೇಳನ  ಸರ್ವಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಅವರಿಗೆ ಅಧಿಕೃತ ಆಹ್ವಾನ

Hosashake News by Hosashake News
March 23, 2025
in ಕಲೆ-ಸಾಹಿತ್ಯ-ಸಂಸ್ಕೃತಿ, ಜಿಲ್ಲೆ, ಪ್ರಾದೇಶಿಕ, ರಾಜ್ಯ, ಸುದ್ದಿ
0
ಕೊಪ್ಪಳ ಜಿಲ್ಲಾ 13ನೇ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಡೆಸಲು ಸರ್ವ ಸಿದ್ಧತೆ: ಶಾಸಕ ಜನಾರ್ಧನ ರೆಡ್ಡಿ
Share on FacebookShare on Twitter

ಸಮ್ಮೇಳನವನ್ನು ನಾನು ನಾಡಿನ ಸಮಸ್ತ ಅನ್ನದಾತರಿಗೆ ಸಮರ್ಪಿಸುವೆ ಸಾಹಿತಿ ಆಲೂರು

ಹೊಸಶಕೆ ನ್ಯೂಸ್-ಗಂಗಾವತಿ:  ಕಳೆದ ಸಾಹಿತ್ಯ ಸಮ್ಮೇಳನಕ್ಕಿಂತ ಈ ವರ್ಷ ಹೆಚ್ಚು ಅರ್ಥಪೂರ್ಣ ಮತ್ತು ಅಚ್ಚುಕಟ್ಟಾಗಿ 13ನೇ ಕೊಪ್ಪಳ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಸಮ್ಮೇಳನ ಸ್ವಾಗತಿ ಸಮಿತಿ ಅಧ್ಯಕ್ಷ ಹಾಗೂ ಶಆಸಕ ಜಿ. ಜನಾರ್ದನರೆಡ್ಡಿ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಆಯೋಜನೆಗೆ ಅಲ್ಪ ಕಾಲದಲ್ಲಿಯೂ ಉತ್ತಮ ತಯಾರಿ ಭರದಿಂದ ಸಾಗಿದೆ. 27ರಂದು ಬೆಳಗ್ಗೆ 8 ಗಂಟೆಗೆ ಎಪಿಎಂಸಿಯಿಂದ ಸಮ್ಮೇಣದ ಸರ್ವಾಧ್ಯಕ್ಷರರ ಮೆರವಣಿಗೆ ನಡೆಯಲಿದೆ. 15ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಲಿವೆ. ನಗರ ಅಲಂಕಾರ ಸೇರಿದಂತೆ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡಲಾಗುವುದು, ಮುಖ್ಯವಾಗಿ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ನೀಡುವ ಉದ್ದೇಶಕ್ಕೆ ಕನ್ನಡ ಚಿತ್ರರಂಗದ ಕೆಲ ನಟ-ನಟಿಯರನ್ನು ಕರೆಯಿಸುವ ವಿಚಾರವಿದೆ. ಈ ಬಗ್ಗೆ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಚಚರ್ಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಸಮಯದ ಅಭಾವದಿಂದಾಗಿ ಕೇವಲ 20 ದಿನದಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಒಂದು ಸಮ್ಮೇಳನ ಆಯೋಜಿಸಲು ಕನಿಷ್ಠ 2-3 ತಿಂಗಳು ಕಾಲಾವಕಾಶ ಬೇಕು. ಈ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಯಾರದ್ದಾದರೂ ಹೆಸರು ಬಿಟ್ಟು ಹೋಗಿದ್ದರೆ, ಏನಾದರೂ ಲೋಪದೋಷಗಳಿದ್ದರೆ ಮಾಧ್ಯಮದ ಪ್ರತಿನಿಧಿಗಳು, ಸಂಘ-ಸಂಸ್ಥೆ ಮತ್ತು ಸಮುದಾಯದ ಪ್ರಮುಖರು ಗಮನಕ್ಕೆ ತರುವ ಮೂಲಕ ಸಹಕಾರ ನೀಡಬೇಕು, ಮುಕ್ತವಾಗಿ ತಾಯಿ ಭುವನೇಶ್ವರಿಯ ಅಕ್ಷರ ಜಾತ್ರೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಸಮ್ಮೇಳನಕ್ಕೆ ದಿವಂಗತ ಡಾ. ಪಂಚಾಕ್ಷರಿ ಹಿರೇಮಠ ಮಹಾಮಂಟಪ ಎಂತಲೂ, ಅಜಾತ ಶತೃ ದಿವಂಗತ ಶ್ರೀರಂಗದೇವರಾಯಲು ವೇದಿಕೆ ಎಂದು ನಾಮಕರಣ ಮಾಡಲಾಗಿದೆ. ಒಟ್ಟು 15 ಮಹಾದ್ವಾರ ನಿಮರ್ಾಣ ಮಾಡಲಾಗುತ್ತಿದೆ. ನಾಲ್ಕು ವಿಚಾರ ಗೋಷ್ಠಿ, ಎರಡು ಮಹಿಳಾ ಗೋಷ್ಠಿ ಇರಲಿದೆ ಎಂದರು. ಇನ್ನುಳಿದಂತೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಸಮ್ಮೇಳನ ಉದ್ಘಾಟನೆ, ಬಹಿರಂಗ ಅಧಿವೇಷನ, ಸಮಾರೋಪ ನಡೆಯಲಿವೆ. ಇದೇ ಮೊದಲ ಬಾರಿಗೆ ನ್ಯಾಯಾಧೀಶರಿಂದ ಒಂದು ಗೋಷ್ಠಿ ಏರ್ಪಡಿಸಲಾಗಿದೆ. ಇದು ಪರಿಷತ್ತಿನ ಸಮ್ಮೇಳನದ ಇತಿಹಾಸದಲ್ಲಿ ಮೊದಲು ಎಂದರು.

ಸಮ್ಮೇನಾಧ್ಯಕ್ಷ ಸಾಹಿತಿ ಲಿಂಗಾರೆಡ್ಡಿ ಆಲೂರು ಅವರಿಗೆ ಆಹ್ವಾನ:

ಇದೇ ವೇದಿಕೆಯಲ್ಲಿ ಸಮ್ಮೇಳನದ ಸವಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರು ಅವರಿಗೆ ಶಾಸಕ ಜಿ. ಜನಾರ್ಧನರೆಡ್ಡಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಶಾಲು ಹೊದಿಸಿ, ಸನ್ಮಾನಿಸಿ, ಪುಷ್ಪುವೃಷ್ಟಿಗೆರೆದು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲು ಅಧಿಕೃತ ಆಹ್ವಾನ ನೀಡಿದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಲಿಂಗಾರೆಡ್ಡಿ, ನನ್ನಂಥ ಸಣ್ಣ ಸಾಹಿತಿಗೆ ಇಂತಹ ದೊಡ್ಡ ಸ್ಥಾನಮಾನ ಸಿಕ್ಕಿರುವುದು ತಾಯಯಿ ಭುವನೇಶ್ವರಿಯ ಕೃಪಾಶೀವರ್ಾದಿಂದ. ನನ್ನ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ನಾನು ನಾಡಿನ ಸಮಸ್ತ ಅನ್ನದಾತರಿಗೆ ಸಮರ್ಪಿಸುತ್ತೇನೆ, ಸಮ್ಮೇಳನ ಅಧ್ಯಕ್ಷರಿಗೆ ಅವರ ಮನೆಗೆ ಹೋಗಿ ಕರೆಯುವ ಸಂಪ್ರದಾಯವಿದೆ. ಆದರೆ ಇಂದು ನಾನು ಕಸಾಪ ಭವನಕ್ಕೇ ಬಂದು ಆಹ್ವಾನ ಸ್ವೀಕರಿಸುತ್ತೇನೆ ಎಂದು ನನ್ನ ಮನವಿಗೆ ಸ್ಪಂದಿಸಿ ಕಸಾಪ ಪದಾಧಿಕಾರಿಗಳು ಇಲ್ಲಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಮೌಲಸಾಬ ಮುದ್ಗಲ್, ಕಸಾಪದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ರುದ್ರೇಶ ಆರ್ಹಾಳ, ಶ್ರೀನಿವಾಸ ಅಂಗಡಿ, ರಮೇಶ ಕುಲಕರ್ಣಿ, ಪ್ರಸನ್ನ ದೇಸಾಯಿ, ಶಿವಾನಂದ ತಿಮ್ಮಾಪೂರ, ಶ್ರೀನಿವಾಸ ಎಂ.ಜೆ, ಶ್ರೀದೇವಿ ಕೃಷ್ಣಪ್ಪ, ನಾಗರತ್ನ, ಮುರಳಿಧರ ಜೋಶಿ, ಪಂಪಣ್ಣ ನಾಯಕ್, ಚನ್ನಬಸವ ಜೇಕಿನ್, ಬಿಜೆಪಿಯ ಮನೋಹರಗೌಡ, ಯಮನೂರು ಚೌಡ್ಕಿ, ಡಿ.ಕೆ. ಆಗೋಲಿ ಇತರರು ಇದ್ದರು.

Tags: All preparations are in place to conduct the 13th Koppal Sahittya SameleanaGangavathi Hosashake NewsKoppal Dist News GangavathiOfficial invitation to the conference president Lingareddy Alurಕೊಪ್ಪಳ ಜಿಲ್ಲಾ 13ನೇ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಡೆಸಲು ಸರ್ವ ಸಿದ್ಧತೆ: ಶಾಸಕ ಜನಾರ್ಧನ ರೆಡ್ಡಿಸಮ್ಮೇಳನ  ಸರ್ವಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಅವರಿಗೆ ಅಧಿಕೃತ ಆಹ್ವಾನಸಮ್ಮೇಳನವನ್ನು ನಾನು ನಾಡಿನ ಸಮಸ್ತ ಅನ್ನದಾತರಿಗೆ ಸಮರ್ಪಿಸುವೆ ಸಾಹಿತಿ ಆಲೂರು
Previous Post

ಸೌಹಾರ್ದ ಸಂಸ್ಕೃತಿ ವಿಸ್ತರಣೆಗೆ ಸಾಹಿತ್ಯ ಸಮ್ಮೇಳನಗಳು ಅಗತ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!