Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಆನೆಗುಂದಿಯಲ್ಲಿರುವ ಕೃಷ್ಣದೇವರಾಯ ಸಮಾಧಿ ಸ್ಥಳಕ್ಕೆ ಸಚಿವ ಎಚ್.ಕೆ ಪಾಟೀಲರ ಭೇಟಿ

ಇತಿಹಾಸ, ಪರಂಪರೆ ತಿಳಿಸುವ ಪ್ರಾಚ್ಯವಸ್ತು ಸ್ಥಳಗಳನ್ನು ನಾವು ಗೌರವಿಸಬೇಕಿದೆ

Hosashake News by Hosashake News
April 22, 2025
in ಜಿಲ್ಲೆ, ದೇಶ, ಪ್ರಾದೇಶಿಕ, ರಾಜಕೀಯ, ರಾಜ್ಯ, ಸಾಮಾಜಿಕ, ಸುದ್ದಿ
0
ಆನೆಗುಂದಿಯಲ್ಲಿರುವ ಕೃಷ್ಣದೇವರಾಯ ಸಮಾಧಿ ಸ್ಥಳಕ್ಕೆ ಸಚಿವ ಎಚ್.ಕೆ ಪಾಟೀಲರ ಭೇಟಿ
Share on FacebookShare on Twitter

*ಕೃಷ್ಣದೇವರಾಯ ಸಮಾದಿ ಐತಿಹಾಸಿಕ ಸ್ಥಳ ಇದು ಅಭಿಮಾನ,ಗೌರವದ ಸಂಗತಿ -ಪಾಟೀಲ್

ಹೊಸಶಕೆ ನ್ಯೂಸ್-ಗಂಗಾವತಿ : ಕೇವಲ ಹಂಪಿ ಉತ್ಸವ ಮಾಡಿದರೆ ಸಾಲದು ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸುವ ಪ್ರಾಚ್ಯವಸ್ತುಗಳನ್ನು ನಾವು ಗೌರವಿಸುವುದರ ಜೊತೆಗೆ ಅವುಗಳನ್ನು ಸಂರಕ್ಷಿಸಬೇಕಿದೆ ಎಂದು ಕಾನೂನು. ನ್ಯಾಯ. ಮಾನವ ಹಕ್ಕುಗಳು. ಸಂಸದೀಯ ವ್ಯವಹಾರ. ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು  ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದರು.

ಕಳೆದ ಎರಡು ‌ಮೂರು ದಿನಗಳ ಹಿಂದೆ  ಶ್ರೀಕೃಷ್ಣದೇವರಾಯ ಸಮಾಧಿ  ಸ್ಥಳದಲ್ಲಿ ಮಾಂಸ ಕತ್ತರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಆನೆಗುಂದಿಯಲ್ಲಿರುವ ಕೃಷ್ಣದೇವರಾಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೃಷ್ಣದೇವರಾಯ ಸಮಾದಿ 64 ಕಂಬಗಳಿಂದ ಕೂಡಿದ ಐತಿಹಾಸಿಕ ಸ್ಥಳ ಇದರ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಹಾಗೂ ಗೌರವದ ಸಂಗತಿ ಇಂತಹ ಸ್ಥಳದಲ್ಲಿ ಮಾಂಸ  ಮಾರಾಟ ನಡೆದಿದೆ ಎಂದರೆ ನೋವಿನ ಸಂಗತಿಯಾಗಿದೆ . ಇಲ್ಲಿಯ ಜನರು ಹೇಳುವ ಪ್ರಕಾರ ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು. ಆದರೆ ಇದನ್ನು ಲಘುವಾಗಿ ತಿಳಿದುಕೊಳ್ಳುವಂತಿಲ್ಲ. ಗಂಭೀರವಾಗಿ ತೆಗೆದುಕೊಳ್ಳಲಾಗುವುದು.

ಈಗಾಗಲೇ ಆನೆಗುಂದಿಯ 3 ಜನರ ಮೇಲೆ ಎಫ್.ಐ.ಆರ್ ಮಾಡಲಾಗಿದೆ.‌ ಕನ್ನಡಿಗರಾದ ನಾವು ನಮ್ಮ ‌ತನವನ್ನು ಗೌರವಿಸುವುದರ ಜೊತೆಗೆ ಪ್ರಾಚ್ಯವಸ್ತು ಅವಶೇಷಗಳನ್ನು ಕಾಪಾಡಲು ಪ್ರತಿಯೊಬ್ಬರು ಕೈಜೋಡಿಸಬೇಕಿದೆ. ಈ  ಪರಿಸರದ  ಸುತ್ತಲು ಸೌಂದರ್ಯ ಹೆಚ್ಚಿಸುವ ಕೆಲಸ ಈ ವರ್ಷದಿಂದಲೇ  ಮಾಡಲಾಗುವುದು.  ಕೃಷ್ಣದೇವರಾಯ ಸಮಾದಿ‌ 64 ಕಂಬಗಳ ಸಣ್ಣಪುಟ್ಟ  ರಿಪೇರಿ ಅವಶ್ಯಕತೆ ಇದೆ ಅದನ್ನು ಸರಿಪಡಿಸಲಾಗುವುದು.  ನಮ್ಮ ಐತಿಹಾಸಿಕ ಸ್ಥಳಗಳ ಸಂರಕ್ಷಣೆ  ಜವಾಬ್ದಾರಿ ಎಲ್ಲರ ಮೇಲಿದ್ದು ಇಂತಹ ಘಟನೆಗಳು  ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದು  ಹೇಳಿದರು. ಆನೆಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹುಲಿಗೆಮ್ಮ ಮಾತನಾಡಿ ಕೃಷ್ಣದೇವರಾಯ ಸಮಾಧಿಯ ಮೇಲೆ ಮಾಂಸ ಕತ್ತರಿಸಿ ಮಾರಾಟ ಮಾಡಿರುವುದು ಆಕಸ್ಮಿಕವಾಗಿ ನಡೆದ  ಘಟನೆಯಾಗಿದ್ದು ಇಂತಹ ಘಟನೆ‌ ಮರು ಕಳಿಸದಂತೆ ನೋಡಿಕೊಳ್ಳಲಾಗುತ್ತದೆ.  ವಿಜಯನಗರ ಸಾಮ್ರಾಜ್ಯದ ಅರಸ ಶ್ರೀ ಕೃಷ್ಣದೇವರಾಯ ನಮ್ಮ ಭಾಗದ ಹೆಮ್ಮೆಯ ಅರಸನಾಗಿದ್ದ  ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ. ವಿಜಯನಗರ ಸಾಮ್ರಾಜ್ಯದ ವಂಶಸ್ಥರಾದ ಲಲಿತಾರಾಣಿ ಹಾಗೂ ಶ್ರೀ ಕೃಷ್ಣದೇವರಾಯಲು. ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೆಶಕ  ಡಾ. ಆರ್. ಶಿಜೇಶ್ವರ್. ಸಹಾಯಕ ಆಯುಕ್ತ  ಕ್ಯಾ. ಮಹೇಶ್ ಮಾಲಗಿತ್ತಿ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ  ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags: a matter of pride and honor.Hampi-Anegondi Krishnadevaraya Samadhi is a historical placeMinister H.K. Patil visits Krishnadevaraya Samadhi site in AnegundiWe need to respect archaeological sites that reveal our history and heritage - Minister HK Patilಆನೆಗುಂದಿಯಲ್ಲಿರುವ ಕೃಷ್ಣದೇವರಾಯ ಸಮಾಧಿ ಸ್ಥಳಕ್ಕೆ ಸಚಿವ ಎಚ್.ಕೆ ಪಾಟೀಲರ ಭೇಟಿಕೃಷ್ಣದೇವರಾಯ ಸಮಾದಿ ಐತಿಹಾಸಿಕ ಸ್ಥಳ ಇದು ಅಭಿಮಾನಗೌರವದ ಸಂಗತಿನಮ್ಮ ಇತಿಹಾಸಪರಂಪರೆ ತಿಳಿಸುವ ಪ್ರಾಚ್ಯವಸ್ತು ಸ್ಥಳಗಳನ್ನು ನಾವು ಗೌರವಿಸಬೇಕಿದೆ- ಸಚಿವ ಎಚ್ ಕೆ ಪಾಟೀಲ್
Previous Post

ಕೊಪ್ಪಳ ಕ್ಷೇತ್ರದ ಏತ ನೀರಾವರಿ ಯೋಜನೆಗಳಿಗೆ ಪರಿಷ್ಕೃತ ಡಿಪಿಆರ್‌ : ಶಾಸಕ ರಾಘವೇಂದ್ರ ಹಿಟ್ನಾಳ

Next Post

ಯಶಸ್ವಿನಿ ಯೋಜನೆ : ದರ ಪರಿಷ್ಕರಣೆ ಸಮಿತಿಯಿಂದ  ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಸಲ್ಲಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!