ಹೊಸಶಕೆ ನ್ಯೂಸ್-ಕೊಪ್ಪಳ : ಕೊಪ್ಪಳ ಜಿಲ್ಲಾ ಯಾದವ್ ( ಗೊಲ್ಲ) ಸಮಾಜದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕುರಗೋಡ ರವಿ ಯಾದವ ಅವರು ಆಯ್ಕೆಗೊಂಡಿದ್ದಾರೆ
ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾಗಿ ರೇಣುಕಾ ಪೂಜಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ರಮೇಶ್ ಎನ್ ಯಾದವ್, ಹಾಗೂ ಉಳಿದ ಪದಾಧಿಕಾರಿಗಳನ್ನು ಸಮುದಾಯದ ಹಿರಿಯರ ಸಲಹೆ ಸಹಕಾರಗಳೊಂದಿಗೆ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಯಾದವ ಸಮುದಾಯದ ಮುಖಂಡರು, ಯುವ ಮಿತ್ರರು ಬಂಧುಗಳು ಉಪಸ್ಥಿತರಿದ್ದರು.
ಅಭಿನಂದನೆ :ಕೊಪ್ಪಳ ಜಿಲ್ಲಾ ಯಾದವ್ ( ಗೊಲ್ಲ) ಸಮಾಜದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕುರಗೋಡ ರವಿ ಯಾದವ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾಗಿ ರೇಣುಕಾ ಪೂಜಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ರಮೇಶ್ ಎನ್ ಯಾದವ್ ಆಯ್ಕೆಗೆ ಸಮಾಜದ ಗುರುಹಿರಿಯರು ಮುಖಂಡರು, ಯುವಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿರುವರು.