ಹೊಸಶಕೆ ನ್ಯೂಸ್-ಕೊಪ್ಪಳ : ಜಿಲ್ಲೆಯ ಕಾರಟಗಿ, ಕನಕಗಿರಿ, ಹಾಗೂ ಕುಕನೂರ ತಾಲೂಕು ಆಡಳಿತಗಳಿಗೆ ಸುಸಜ್ಜಿತ ಹಾಗೂ ಸುವ್ಯವಸ್ಥಿತವಾದ “ತಾಲ್ಲೂಕು ಪ್ರಜಾಸೌಧ” ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಾದ ನಲೀನ್ ಅತುಲ್ ಅವರಿಗೆ ಹಸ್ತಾಂತರಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯ 3 ತಾಲ್ಲೂಕುಗಳು ಸೇರಿ 27 ಜಿಲ್ಲೆಗಳ 49 ಹೊಸ ತಾಲ್ಲೂಕು ಪ್ರಜಾಸೌಧ ಕಟ್ಟಡಗಳ ಮಂಜೂರಾತಿ ಪತ್ರವನ್ನು ಸಿಎಂ ಅವರು ಕೊಪ್ಪಳ ಜಿಲ್ಲಾಧಿಕಾರಿಗಳಾದ ನಲೀನ್ ಅತುಲ್ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಿದರು. ರಾಜ್ಯದಲ್ಲಿ ಒಟ್ಟು 240 ತಾಲ್ಲೂಕುಗಳಿದ್ದು, ಅವುಗಳ ಪೈಕಿ 63 ಹೊಸ ತಾಲ್ಲೂಕುಗಳಾಗಿರುತ್ತವೆ, ಸರ್ಕಾರದ ಆದೇಶ ಸಂ:ಕಂಇ:85 ಡಬ್ಲ್ಯೂಬಿಆರ್ 2025, ದಿನಾಂಕ: 05.10.2024 ರಲ್ಲಿ ತಾಲ್ಲೂಕು ಆಡಳಿತಸೌಧ ಎಂಬ ನಾಮಾಂಕಿತವನ್ನು : ತಾಲ್ಲೂಕು ಪ್ರಜಾಸೌಧ” ಎಂಬುದಾಗಿಯೂ ಹಾಗೂ ಜಿಲ್ಲಾ ಕಛೇರಿಗಳ ಸಂಕೀರ್ಣ ಕಟ್ಟಡ ಎಂ ನಾಮಾಂಕಿತವನ್ನು “ಜಿಲ್ಲಾ ಪ್ರಜಾಸೌಧ” ಎಂಬುದಾಗಿ ಬದಲಾಯಿಸಿ ಆದೇಶಿಸಲಾಗಿದೆ.
ಅಗ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ದೃಢವಾದ ಹೆಜ್ಜೆ ಇಟ್ಟದ್ದೇವೆ, ಹೊಸ ತಾಲ್ಲೂಕುಗಳ ಸಕ್ರಿಯ ಕಾರ್ಯನಿರ್ವಃಣಿಗೆ ಮತ್ತು ಆ ತಾಲ್ಲುಕುಗಳ ಜನರ ನಿರೀಕ್ಷೆಗಳನ್ನು ಈಡೇರಿಸಲು 49 ಬಾಕಿ ಯಿದ್ದ ತಾಲ್ಲೂಕುಗಳಿಗೂ ಪ್ರಜಾಸೌಧ ಮಂಜೂರು ಮಾಡಿರುವುದು ಸರ್ಕಾರದ ಬದ್ಧತೆಯ ಪ್ರತಿಕವಾಗಿದೆ, ಬೀದರ್ ಹಾಗೂ ವಿಜಯಪುರ ಜಿಲ್ಲಾ ಪ್ರಜಾಸೌಧವನ್ನು ರೂ. 48.32 ಕೋಟಿ ಹಾಗೂ 55.60 ಕೋಟಿಗಳ ಮೊತ್ತದಲ್ಲಿ ನಿರ್ಮಿಸಲು ಸರ್ಕಾರ ಆಡಳಿತಾತ್ಮಕ ನುಮೋದನೆಯನ್ನು ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.