Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಕಿರ್ಲೋಸ್ಕರ್-ವಸುಂಧರಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ -2025

ಪರಿಸರ, ವನ್ಯಜೀವಿ, ಶಕ್ತಿ, ಗಾಳಿ, ನೀರು ಕುರಿತು ಜಾಗೃತಿ : ಡಾ.ಪಿ.ನಾರಾಯಣ

Hosashake News by Hosashake News
April 19, 2025
in ಜಿಲ್ಲೆ, ದೇಶ, ಪರಿಸರ, ರಾಜ್ಯ, ಸಾಮಾಜಿಕ, ಸುದ್ದಿ
0
ಕಿರ್ಲೋಸ್ಕರ್-ವಸುಂಧರಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ -2025
Share on FacebookShare on Twitter

ಹೊಸಶಕೆ ನ್ಯೂಸ್ -ಕೊಪ್ಪಳ : ಪರಿಸರ ಸಂರಕ್ಷಿಸುವ ಕುರಿತು ಸೇವೆಯನ್ನು ಸಲ್ಲಿಸುವ ದೃಷ್ಠಿಯಿಂದ  ಪುಣೆಯಲ್ಲಿ ಸ್ಥಾಪನೆಗೊಂಡಿರುವ ವಸುಂಧರಾ ಕ್ಲಬ್ ಜೊತೆಗೂಡಿ ಕಿರ್ಲೋಸ್ಕರ್ – ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಜರುಗಲಿದೆ.

ಕಳೆದ ಐದಿನೈದು ವರ್ಷಗಳಿಂದ ದೇಶದ 7 ರಾಜ್ಯಗಳ 30 ನಗರಗಳಲ್ಲಿ ಈ ಚಲನ ಚಿತ್ರವನ್ನು ಆಯೋಜಿಸಿದ್ದು, ಈ ವರ್ಷವೂ ಸಹ ಈ ಚಲನಚಿತ್ರೋತ್ಸವವನ್ನು ಏ. 22 ರಿಂದ ಏ. 24 ರವರೆಗೆ ಆಯೋಜಿಸಲಾಗಿದೆ ಎಂದು ಕಿರ್ಲೋಸ್ಕರ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರು-ಮಾನವ ಸಂಪನ್ಮೂಲ ಮತ್ತು ಸಾ.ಆಡಳಿತ ಮತ್ತು ಉಪಾಧ್ಯಕ್ಷರು – ಕಿರ್ಲೋಸ್ಕರ್  ಡಾ. ಪಿ. ನಾರಾಯಣ ಅವರು ತಿಳಿಸಿದ್ದಾರೆ.

‘ಪೌಷ್ಠಿಕ ಆಹಾರ, ಸುಂದರ ಪ್ರಕೃತಿ ಮತ್ತು ಆರೋಗ್ಯಕರ ಸಮಾಜವನ್ನು ರೂಪಿಸುವುದು’ (‘Nutritious Food, Flourishing Nature and Healthy Society’) ಎಂಬುದು ಈ ವರ್ಷದ ಮುಖ್ಯ ವಿಷಯವಾಗಿದ್ದು, ಈ ಚಿತ್ರೋತ್ಸವದಲ್ಲಿ ಪರಿಸರ, ವನ್ಯಜೀವಿ, ಶಕ್ತಿ, ಗಾಳಿ, ನೀರು ಕುರಿತು ಜಾಗೃತಿ ಮೂಡಿಸುವ ದೇಶೀಯ ಹಾಗೂ ವಿದೇಶೀಯ ಖ್ಯಾತ ನಿರ್ದೇಶಕರು ತಯಾರಿಸಿದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ  ಪ್ರಶಸ್ತಿಗಳಿಸಿದ ಆಯ್ದ ಚಲನಚಿತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಈ ಚಿತ್ರೋತ್ಸವದ ಅಂಗವಾಗಿ ಸಿರಿ ದಾನ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿಶ್ವಾದ್ಯಾಂತ ಆಹ್ವಾನಿಸಿದ ಸುಮಾರು 10.000 ಅತ್ಯತ್ತಮ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೇ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾಕೂಟಗಳು, ಕಿರುನಾಟಕ ಸ್ಪರ್ಧೆ ಮತ್ತು ಘೋಷಣಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಪರಿಸರದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಚಲನಚಿತ್ರೋತ್ಸವದ ಅಂಗವಾಗಿ, ಪರಿಸರ, ವನ್ಯಜೀವಿ, ಕೃಷಿ ಇತ್ಯಾದಿ ವಿಭಾಗಗಳಲ್ಲಿ ಸಾಧನೆ ಮಾಡಿದ ಅಗ್ರಗಣ್ಯರಿಗೆ ವಸುಂಧರಾ ಮಿತ್ರ ಮತ್ತುವಸುಂಧರಾ ಸನ್ಮಾನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿರುವರು.

ಈ ಬಾರಿ, ಈ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭವನ್ನು ಏ. 22  ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಪಾನಘಂಟಿ ಭಾಗ್ಯಮ್ಮ ಭೀಮಸೇನಪ್ಪ ಮಂಗಳ ಭವನ, ಕೊಪ್ಪಳದಲ್ಲಿ ಆಯೋಜಿಸಲಾಗಿದೆ ಶಿರಿಸಿಯ ಡೀನ್ ಕಾಲೇಜ್ ಆಫ್ ಪಾರೆಸ್ಟ್ ನ ಡಾ. ವಾಸುದೇವ ಆರ್. ಮತ್ತು ಕೊಪ್ಪಳ ಉಪ ಆರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚರ್ತುವೇದಿ ಇವರು ಈ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಈ ಸಮಾರಂಭದಲ್ಲಿ ಯೂಥ್ ಫಾರ್ ಸೇವಾ ಬೆಂಗಳೂರು ಪರಿಸರ ಸಂಯೋಜಕ ಉಮಾಪತಿ ಗಜಾನನ ಭಟ್, ಇವರು ಪರಿಸರ ಸಂರಕ್ಷಣೆ ಕುರಿತು ಮಾಡಿದ ಅಮೋಘ ಸಾಧನೆಯನ್ನು ಗುರುತಿಸಿ “ವಸುಂಧರಾ ಸನ್ಮಾನ್” ನೀಡಿ ಗೌರವಿಸಲಾಗುವುದು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಹಣಕಾಸು ಆಧಿಕಾರಿಗಳಾದ ಆರ್. ಎಸ್. ಶ್ರೀವತ್ಸನ್ ಮತ್ತು ಡಾ. ಪಿ ನಾರಾಯಣ ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಮಾನವ ಸಂಪನ್ಮೂಲ ಮತ್ತು ಸಾ.ಆ ಹಾಗೂ ಉಪಾಧ್ಯಕ್ಷರು ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೊತ್ಸವ. ಈ ಚಲನಚಿತ್ರೋತ್ಸವದ ನಿರ್ದೇಶಕರಾದ ವಿರೇಂದ್ರ ಚಿತ್ರವ್, ವಸುಂಧರಾ ಕ್ಲಬ್ ಪುಣೆ ಇವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಚಲನಚಿತ್ರೋತ್ಸದ ಸಮಾರೋಪ ಸಮಾರಂಭವನ್ನು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಖಾನೆಯಲ್ಲಿ ಏ 24  ರಂದು ಸಾಯಂಕಾಲ 4.00 ಗಂಟೆಗೆ ಆಯೋಜಿಸಿದ್ದು, ಪರಿಸರ ಸಂರಕ್ಷಣೆಯ ಕುರಿತು ಅಮೋಘ ಸೇವೆ ಸಲ್ಲಿಸುತ್ತಿರುವ ಕೃಷಿಕರು ಮತ್ತು ಉತ್ಸಾಹಿ ಪರಿಸರವಾದಿ ವೇಣುಗೋಪಾಲ ನಾಯ್ಡು, ಇವರಿಗೆ ‘ವಸುಂಧರಾ ಮಿತ್ರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ವಿಜಯನಗರ ಮತ್ತು ಕಲಬುರಗಿ ವಿಭಾಗದ ಹಿರಿಯ ಪರಿಸರ ಅಧಿಕಾರಿ ಬಿ. ಎಸ್ ಮುರುಳಿಧರ್, ವಲಯ ಅರಣ್ಯ ಆಧಿಕಾರಿ ಸ್ವಾತಿ ಎಲ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಹಣಕಾಸು ಆಧಿಕಾರಿಗಳಾದ ಆರ್. ಎಸ್. ಶ್ರೀವತ್ಸನ್ ಮತ್ತು ಮಾನವ ಸಂಪನ್ಮೂಲ ಮತ್ತು ಸಾ.ಆ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಪಿ.ನಾರಾಯಣ, ನಿರ್ದೇಶಕರಾದ ವಿರೇಂದ್ರ ಚಿತ್ರವ್, ಇವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಚಲನಚಿತ್ರೋತ್ಸವ ಪೂರ್ವಭಾವಿಯಾಗಿ ಏ.20 ರಂದು ಹಂಪಿ ಹೆರಿಟೇಜ್ ವಾಕ್‌ ಹಂಪಿಯಲ್ಲಿ ಬೆಳಿಗ್ಗೆ 06-00 ಗಂಟೆಗೆಯಿಂದ 09:00 ಘಂಟೆಯವರೆಗೆ ನಡೆಯಲಿದ್ದು, ಸುಮಾರು 250 ಕ್ಕೂ ಅಧಿಕ ಪರಿಸರ ಪ್ರೇಮಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಿರ್ಲೋಸ್ಕರ್ ಲೇಡೀಸ್ ಕ್ಲಬ್ ಸದಸ್ಯೆಯರುಗಳು, ಕಾರ್ಖಾನೆಯ ಉದ್ಯೋಗಿಗಳು ಭಾಗವಹಿಸಲಿದ್ದಾರೆ. ಏ.23  ರಂದು ಹೊಸಪೇಟೆ ಮತ್ತು ಕೊಪ್ಪಳದ ವಿವಿಧ ಶಾಲಾ-ಕಾಲೇಜುಗಳಲ್ಲಿ ಪರಿಸರದ ಕುರಿತು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉದ್ದವಕುಲಕರ್ಣಿ – 9449253268 / 9742058423, ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಂಪನಿಯ ಸಾಂಸ್ಥಿಕ ಸಮಾಜಿಕ ಹೊಣೆಗಾರಿಕೆಯನ್ನು ಕ್ರಮಬದ್ಧವಾಗಿ ನೆಡೆಸಲು 2001 ರಲ್ಲಿ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟನ್ನು ಸ್ಥಾಪಿಸಲಾಗಿದ್ದು, ಈ ಟ್ರಸ್ಟ್ನ ಮುಖಾಂತರ ಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಇವುಗಳಿಗೆ ಒತ್ತುಕೊಟ್ಟು ವಾರ್ಷಿಕ ಯೋಜನೆಯನ್ನು ರೂಪಿಸಿ ಅದರಂತೆ ಕೆಲಸಗಳನ್ನು ಕೈಗೆತ್ತಿಗೆಕೊಳ್ಳುತ್ತಿದೆ. ಈ ಚಟುವಟಿಕೆಗಳಲ್ಲಿ ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ  ಚಲನ ಚಿತ್ರೋತ್ಸವವೂ ಒಂದಾಗಿದೆ : ಡಾ. ಪಿ. ನಾರಾಯಣ, ಕಾರ್ಯನಿರ್ವಾಹಕ ಉಪಾಧ್ಯಕ್ಷರು-ಮಾನವ ಸಂಪನ್ಮೂಲ ಮತ್ತು ಸಾ.ಆಡಳಿತ ಮತ್ತು ಉಪಾಧ್ಯಕ್ಷರು – ಕಿರ್ಲೋಸ್ಕರ್

Tags: Awareness on environmentbeautiful nature and creating a healthy societyenergyKirloskarKirloskar-Vasundhara International Film Festival -2025Koppal till April 24: Dr. P. NarayanaProgram on the theme of nutritious foodwater in Hospetwildlifewindಏ. 22 ರಂದು ಕಿರ್ಲೋಸ್ಕರ್-ವಸುಂಧರಾ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ -2025ಕೊಪ್ಪಳದಲ್ಲಿ ಏ.24 ರವರೆಗೆ ಪರಿಸರಗಾಳಿನೀರು ಕುರಿತು ಜಾಗೃತಿಪೌಷ್ಠಿಕ ಆಹಾರವನ್ಯಜೀವಿಶಕ್ತಿಸುಂದರ ಪ್ರಕೃತಿ ಮತ್ತು ಆರೋಗ್ಯಕರ ಸಮಾಜವನ್ನು ರೂಪಿಸುವುದು ವಿಷಯದ ಮೇಲೆ ಕಾರ್ಯಕ್ರಮ : ಡಾ.ಪಿ.ನಾರಾಯಣಹೊಸಪೇಟೆ
Previous Post

ಹೊಸಶಕೆ ದಿನಪತ್ರಿಕೆ

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!