ಹೊಸಶಕೆ ನ್ಯೂಸ್ -ಕೊಪ್ಪಳ : ಪರಿಸರ ಸಂರಕ್ಷಿಸುವ ಕುರಿತು ಸೇವೆಯನ್ನು ಸಲ್ಲಿಸುವ ದೃಷ್ಠಿಯಿಂದ ಪುಣೆಯಲ್ಲಿ ಸ್ಥಾಪನೆಗೊಂಡಿರುವ ವಸುಂಧರಾ ಕ್ಲಬ್ ಜೊತೆಗೂಡಿ ಕಿರ್ಲೋಸ್ಕರ್ – ವಸುಂಧರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಜರುಗಲಿದೆ.
ಕಳೆದ ಐದಿನೈದು ವರ್ಷಗಳಿಂದ ದೇಶದ 7 ರಾಜ್ಯಗಳ 30 ನಗರಗಳಲ್ಲಿ ಈ ಚಲನ ಚಿತ್ರವನ್ನು ಆಯೋಜಿಸಿದ್ದು, ಈ ವರ್ಷವೂ ಸಹ ಈ ಚಲನಚಿತ್ರೋತ್ಸವವನ್ನು ಏ. 22 ರಿಂದ ಏ. 24 ರವರೆಗೆ ಆಯೋಜಿಸಲಾಗಿದೆ ಎಂದು ಕಿರ್ಲೋಸ್ಕರ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರು-ಮಾನವ ಸಂಪನ್ಮೂಲ ಮತ್ತು ಸಾ.ಆಡಳಿತ ಮತ್ತು ಉಪಾಧ್ಯಕ್ಷರು – ಕಿರ್ಲೋಸ್ಕರ್ ಡಾ. ಪಿ. ನಾರಾಯಣ ಅವರು ತಿಳಿಸಿದ್ದಾರೆ.
‘ಪೌಷ್ಠಿಕ ಆಹಾರ, ಸುಂದರ ಪ್ರಕೃತಿ ಮತ್ತು ಆರೋಗ್ಯಕರ ಸಮಾಜವನ್ನು ರೂಪಿಸುವುದು’ (‘Nutritious Food, Flourishing Nature and Healthy Society’) ಎಂಬುದು ಈ ವರ್ಷದ ಮುಖ್ಯ ವಿಷಯವಾಗಿದ್ದು, ಈ ಚಿತ್ರೋತ್ಸವದಲ್ಲಿ ಪರಿಸರ, ವನ್ಯಜೀವಿ, ಶಕ್ತಿ, ಗಾಳಿ, ನೀರು ಕುರಿತು ಜಾಗೃತಿ ಮೂಡಿಸುವ ದೇಶೀಯ ಹಾಗೂ ವಿದೇಶೀಯ ಖ್ಯಾತ ನಿರ್ದೇಶಕರು ತಯಾರಿಸಿದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿದ ಆಯ್ದ ಚಲನಚಿತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಈ ಚಿತ್ರೋತ್ಸವದ ಅಂಗವಾಗಿ ಸಿರಿ ದಾನ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿಶ್ವಾದ್ಯಾಂತ ಆಹ್ವಾನಿಸಿದ ಸುಮಾರು 10.000 ಅತ್ಯತ್ತಮ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇದಲ್ಲದೇ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಚರ್ಚಾಕೂಟಗಳು, ಕಿರುನಾಟಕ ಸ್ಪರ್ಧೆ ಮತ್ತು ಘೋಷಣಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಪರಿಸರದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಚಲನಚಿತ್ರೋತ್ಸವದ ಅಂಗವಾಗಿ, ಪರಿಸರ, ವನ್ಯಜೀವಿ, ಕೃಷಿ ಇತ್ಯಾದಿ ವಿಭಾಗಗಳಲ್ಲಿ ಸಾಧನೆ ಮಾಡಿದ ಅಗ್ರಗಣ್ಯರಿಗೆ ವಸುಂಧರಾ ಮಿತ್ರ ಮತ್ತುವಸುಂಧರಾ ಸನ್ಮಾನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿರುವರು.
ಈ ಬಾರಿ, ಈ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭವನ್ನು ಏ. 22 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಪಾನಘಂಟಿ ಭಾಗ್ಯಮ್ಮ ಭೀಮಸೇನಪ್ಪ ಮಂಗಳ ಭವನ, ಕೊಪ್ಪಳದಲ್ಲಿ ಆಯೋಜಿಸಲಾಗಿದೆ ಶಿರಿಸಿಯ ಡೀನ್ ಕಾಲೇಜ್ ಆಫ್ ಪಾರೆಸ್ಟ್ ನ ಡಾ. ವಾಸುದೇವ ಆರ್. ಮತ್ತು ಕೊಪ್ಪಳ ಉಪ ಆರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚರ್ತುವೇದಿ ಇವರು ಈ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಈ ಸಮಾರಂಭದಲ್ಲಿ ಯೂಥ್ ಫಾರ್ ಸೇವಾ ಬೆಂಗಳೂರು ಪರಿಸರ ಸಂಯೋಜಕ ಉಮಾಪತಿ ಗಜಾನನ ಭಟ್, ಇವರು ಪರಿಸರ ಸಂರಕ್ಷಣೆ ಕುರಿತು ಮಾಡಿದ ಅಮೋಘ ಸಾಧನೆಯನ್ನು ಗುರುತಿಸಿ “ವಸುಂಧರಾ ಸನ್ಮಾನ್” ನೀಡಿ ಗೌರವಿಸಲಾಗುವುದು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಹಣಕಾಸು ಆಧಿಕಾರಿಗಳಾದ ಆರ್. ಎಸ್. ಶ್ರೀವತ್ಸನ್ ಮತ್ತು ಡಾ. ಪಿ ನಾರಾಯಣ ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಮಾನವ ಸಂಪನ್ಮೂಲ ಮತ್ತು ಸಾ.ಆ ಹಾಗೂ ಉಪಾಧ್ಯಕ್ಷರು ಕಿರ್ಲೋಸ್ಕರ್ ವಸುಂಧರಾ ಅಂತಾರಾಷ್ಟ್ರೀಯ ಚಲನಚಿತ್ರೊತ್ಸವ. ಈ ಚಲನಚಿತ್ರೋತ್ಸವದ ನಿರ್ದೇಶಕರಾದ ವಿರೇಂದ್ರ ಚಿತ್ರವ್, ವಸುಂಧರಾ ಕ್ಲಬ್ ಪುಣೆ ಇವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಚಲನಚಿತ್ರೋತ್ಸದ ಸಮಾರೋಪ ಸಮಾರಂಭವನ್ನು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಕಾರ್ಖಾನೆಯಲ್ಲಿ ಏ 24 ರಂದು ಸಾಯಂಕಾಲ 4.00 ಗಂಟೆಗೆ ಆಯೋಜಿಸಿದ್ದು, ಪರಿಸರ ಸಂರಕ್ಷಣೆಯ ಕುರಿತು ಅಮೋಘ ಸೇವೆ ಸಲ್ಲಿಸುತ್ತಿರುವ ಕೃಷಿಕರು ಮತ್ತು ಉತ್ಸಾಹಿ ಪರಿಸರವಾದಿ ವೇಣುಗೋಪಾಲ ನಾಯ್ಡು, ಇವರಿಗೆ ‘ವಸುಂಧರಾ ಮಿತ್ರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ವಿಜಯನಗರ ಮತ್ತು ಕಲಬುರಗಿ ವಿಭಾಗದ ಹಿರಿಯ ಪರಿಸರ ಅಧಿಕಾರಿ ಬಿ. ಎಸ್ ಮುರುಳಿಧರ್, ವಲಯ ಅರಣ್ಯ ಆಧಿಕಾರಿ ಸ್ವಾತಿ ಎಲ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ಹಣಕಾಸು ಆಧಿಕಾರಿಗಳಾದ ಆರ್. ಎಸ್. ಶ್ರೀವತ್ಸನ್ ಮತ್ತು ಮಾನವ ಸಂಪನ್ಮೂಲ ಮತ್ತು ಸಾ.ಆ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಪಿ.ನಾರಾಯಣ, ನಿರ್ದೇಶಕರಾದ ವಿರೇಂದ್ರ ಚಿತ್ರವ್, ಇವರುಗಳು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.