ಬೆಂಗಳೂರು: ನಕ್ಸಲ್ ನಿಗ್ರಹ ದಳ ( ಎಎನ್ಎಫ್ ) ಮಾದರಿಯಲ್ಲಿ ಕರಾವಳಿ ಭಾಗದಲ್ಲಿಆ್ಯಂಟಿ ಕಮ್ಯೂನಲ್ ಪೋರ್ಸ್ ರಚನೆ ಮಾಡುವ ವಿಚಾರವಾಗಿ ಪ್ರಸ್ತಾವನೆ ಬಂದಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ನಾವು ಸರ್ಕಾರಕ್ಕೆ ಎಎನ್ಎಫ್ ರೀತಿ ಮಾಡಬೇಕು ಹೇಳಿದ್ದೇವೆ. ಅದನ್ನು ಇವತ್ತು ಪ್ರಸ್ತಾವನೆ ಮಾಡಿ ಕಳುಹಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ. ಎರಡು ಮೂರು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ, ಈ ಘಟಕ ಯಾವ ರೀತಿ ಇರಬೇಕು ಅಂತ ಡಿಜಿಯವರಿಗೆ ಹೇಳಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕ್ರಮಗಳ ಬಗ್ಗೆ ಮಾಡಲಾದ್ ಸಭೆಯಲ್ಲಿ ತುರ್ತು ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದ ಅವರು, ಟ್ರಂಪ್ ಅವರ ಕದನ ವಿರಾಮದ ಬಗ್ಗೆ ಅನೌನ್ಸ್ ಬಗ್ಗೆ ಟ್ವೀಟ್ ಬಂತು. ಆದರೆ ನಮ್ಮ ರಕ್ಷಣಾ ಸಚಿವರಿಂದ ಸ್ಪಷ್ಟನೆ ಬಂದಿಲ್ಲ. ಕಾದು ನೋಡೋಣ ಅಂತಾ ಸುಮ್ಮನೆ ಆದೆವು. ಆ ಮೇಲೆ ಐದು ನಿಮಿಷಕ್ಕೆ ಅಧಿಕೃತವಾಗಿ ಪ್ರಕಟವಾಯ್ತು. ಇದು ದೇಶದ ರಕ್ಷಣೆಯ ಪ್ರಶ್ನೆ. ಏನೇ ಆದರೂ ಪ್ರಧಾನ ಮಂತ್ರಿಗಳಿಗೆ ಗೊತ್ತಿರುತ್ತದೆ. ಅವರೇ ಎಲ್ಲವನ್ನೂ ತಿಳಿಸಬೇಕು ಎಂದು ಒತ್ತಾಯಿಸಿದರು.
ಜಾತಿ ಜನಗಣತಿ ವಿಚಾರವಾಗಿ ಕ್ಯಾಬಿನೆಟ್ ನಲ್ಲಿ ಏನು ಚರ್ಚೆ ಆಗಿಲ್ಲ. ಸಿಎಂ ಎಲ್ಲಾ ಸಚಿವರಿಂದ ಅಭಿಪ್ರಾಯ ಕೇಳಿದ್ದಾರೆ. ಸಚಿವರು ಕೂಡ ಅಭಿಪ್ರಾಯ ಗಳನ್ನು ಕೊಡ್ತಿದ್ದಾರೆ. ಎಲ್ಲರೂ ಕೊಟ್ಟ ನಂತರ ಸಿಎಂ ಒಂದು ನಿರ್ಧಾರ ಮಾಡುತ್ತಾರೆ, ಏಕಾನಾಮಿಕ್ ಸರ್ವೆ ರಿಪೋರ್ಟ್ ವಿಚಾರವಾಗಿ ಕ್ಯಾಬಿನೆಟ್ ನಲ್ಲಿ ಯಾವುದೇ ನಿರ್ಧಾರ ಆಗಿಲ್ಲ. ನಿಮ್ಮ ಅಭಿಪ್ರಾಯಗಳನ್ನು ಕೊಡಿ ಅಂತ ಹೇಳಿದ್ರು. ಎಲ್ಲ ಸಚಿವರಿಗೆ ಸಿಎಂ ಈ ಸೂಚನೆಯನ್ನು ಮಾಡಿದ್ದಾರೆ. ಮುಂದೆ ದಿನಾಂಕ ನಿಗದಿ ಮಾಡ್ತಾರೆ. ಇದಕ್ಕೆ ಸ್ವಲ್ಪ ಸಮಯ ಕೊಡಬೇಕು. ಬೇರೆ ಬೇರೆ ರೀತಿಯಲ್ಲಿ ಚರ್ಚೆಯಾಗಬೇಕು ಇವತ್ತಿನ ದಿನವೂ ಕೂಡ ಸಮೀಕ್ಷೆ ನಡೆಯುತ್ತಿದೆ. ಸಮಯ ಸಾಕಾಗಲ್ಲ, ಸಮಯ ವಿಸ್ತರಣೆ ಮಾಡಿ ಅಂತಾ ಕೇಳಿದ್ದಾರೆ. ನಾಗಮೋಹನ್ ದಾಸ್ ಅವರು ನಡೆಸ್ತಿರುವ ಸರ್ವೆ ಇದು ಎಂದು ಹೇಳಿದರು