Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಶಾಸಕ ಸ್ಥಾನ ರದ್ದತಿ ತಡೆಗೆ ಕೋರ್ಟ್‌ ಮೊರೆ  – ಅರುಣಾ ಲಕ್ಷ್ಮಿ

ಗಂಗಾವತಿಯಲ್ಲಿ  ಜನಾರ್ದನ ರೆಡ್ಡಿ ಅಭಿಮಾನಿ ಬಳಗದ  ವಿಶೇಷ ಸಭೆ

Hosashake News by Hosashake News
May 14, 2025
in ಜಿಲ್ಲೆ, ಪ್ರಾದೇಶಿಕ, ರಾಜಕೀಯ, ರಾಜ್ಯ, ಸುದ್ದಿ
0
ಶಾಸಕ ಸ್ಥಾನ ರದ್ದತಿ ತಡೆಗೆ ಕೋರ್ಟ್‌ ಮೊರೆ  – ಅರುಣಾ ಲಕ್ಷ್ಮಿ
Share on FacebookShare on Twitter

ಹೊಸಶಕೆ ನ್ಯೂಸ್-ಗಂಗಾವತಿ:  ಜನಾರ್ದನರೆಡ್ಡಿ ಅಭಿಮಾನಿಗಳು ಎದೆಗುಂದಬೇಕಿಲ್ಲ. ನಮಗೆ ರಾಜಕೀಯ ಅಧಿಕಾರ ಇಲ್ಲದಿದ್ದರೂ ನಾವು ಕಾರ್ಯಕರ್ತರ, ಅಭಿಮಾನಿಗಳ ಪರ ಇರುತ್ತೇವೆ. ಸಿಬಿಐ ಪ್ರಕರಣದ ಶಿಕ್ಷೆಯ ನಂತರ ಶಾಸಕ ಸ್ಥಾನ ರದ್ದಾಗಿದ್ದು, ಸ್ಥಾನ ಉಳಿಸಿಕೊಳ್ಳಲು ಹೈಕೋರ್ಟ್, ಸುಪ್ರೀಂಕೋರ್ಟ್ ಮೊರೆ ಹೋಗಿ, ಹೋರಾಟ ಮಾಡುತ್ತೇವೆ ಎಂದು ಎಂದು ಜಿ.ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಹೇಳಿದರು.  ನಗರದ ಚನ್ನಬಸವ ತಾತನ ಕಲಾ ಮಂದಿರದಲ್ಲಿ ಜಿ.ಜನಾರ್ದನರೆಡ್ಡಿ ಅಭಿಮಾನಿ ಬಳಗದಿಂದ ನಡೆದ ವಿಶೇಷ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ರೆಡ್ಡಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು. ಓಬಳಾಪುರಂ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರಿಗೆ ವಿಧಿಸಲಾದ ಜೈಲು ಶಿಕ್ಷೆಯು ರಾಜಕೀಯ ಕುತಂತ್ರದಿಂದ ನಡೆದ ಘಟನೆಯಾಗಿದೆ ಎಂದರು.

ನ್ಯಾಯಾಲಯಗಳಲ್ಲಿ ಶಾಸಕ ಸ್ಥಾನ ರದ್ದತಿಗೆ ತಡೆ ಬಂದಲ್ಲಿ ಸ್ಥಾನ ಉಳಿಯುತ್ತದೆ. ಈ ಹಿಂದೆ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯವೊಂದು ಶಿಕ್ಷೆ ನೀಡಿದಾಗ ಸಂಸದ ಸ್ಥಾನ ರದ್ದಾಗಿತ್ತು. 5 ತಿಂಗಳ ಬಳಿನ ಸುಪ್ರೀಂಕೋರ್ಟ್ ತಡೆ ನೀಡಿದಾಗ ಸಂಸದ ಸ್ಥಾನ ಮರಳಿ ಬರುತ್ತದೆ, ತಮಿಳುನಾಡಿನ ಪೆನ್ಮುಡಿ ಎಂಬ ಶಾಸಕರು ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು. 3 ತಿಂಗಳ ನಂತರ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಶಾಸಕ ಸ್ಥಾನ ಉಳಿದಿದೆ.

ಕಾರವಾರ ಶಾಸಕ ಸತೀಶ್ ಸೈಲ್‌ ಸಿಬಿಐ ಕೋರ್ಟ್‌ನಿಂದ 6 ಪ್ರಕರಣಗಳಲ್ಲಿ ತಲಾ 7 ಶಿಕ್ಷೆಗಳಿಗೆ ಗುರಿಯಾಗಿದ್ದರು. 1 ತಿಂಗಳ ನಂತರ ಅವರ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮತ್ತೆ ಅವರಿಗೆ ಶಾಸಕ ಸ್ಥಾನ ಲಭಿಸಿದೆ. ಹಾಗಾಗಿ ಜೈಲುಶಿಕ್ಷೆ ವಿಚಾರದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ದುಃಖ ಪಡುವಂತಿಲ್ಲ. ರೆಡ್ಡಿ ಸಾರ್ವಜನಿಕ ಬದುಕಿನಲ್ಲಿ ಯಾರಿಗೂ ಮೋಸ ಮಾಡಿಲ್ಲ. ಧರ್ಮ ಆಧಾರಿತ ರಾಜಕೀಯ ಮಾಡಿಲ್ಲ, ನಾವೆಲ್ಲರೂ ಒಗ್ಗಟ್ಟಿನಿಂದ ಇರೋಣ, ನಾವು ಸದಾ ಜನರೊಂದಿಗೆ ಇರುತ್ತೇನೆ, ಎಲ್ಲರನ್ನೂ ಭೆಟಿ ಮಾಡುವೆ  ಎಂದು ಹೇಳಿದರು.

Tags: Koppal Gangavthi Aruna Lakshmi moves court to stop cancellation of MLA seatKoppal Special meeting of Janardhana Reddy fan club in Gangavathiಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಅಭಿಮಾನಿ ಬಳಗದ ವಿಶೇಷ ಸಭೆಶಾಸಕ ಸ್ಥಾನ ರದ್ದತಿ ತಡೆಗೆ ಕೋರ್ಟ್‌ ಮೊರೆ  - ಅರುಣಾ ಲಕ್ಷ್ಮಿ
Previous Post

ರೈಲು ಸಂಚಾರ ಆರಂಭಗೊಳ್ಳುವ ಐತಿಹಾಸಿಕ ಕಾರ್ಯಕ್ರಮ : ಶಾಸಕ ದೊಡ್ಡನಗೌಡ ಪಾಟೀಲ

Next Post

ಗದಗ-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಬಹದ್ದೂರಬಂಡಿ ಶಾಲೆಯಲ್ಲಿ ಹೂ, ಸಿಹಿ ನೀಡಿ ಡೊಳ್ಳು ಬಾರಿಸಿ, ಆರತಿಯೊಂದಿಗೆ ಮಕ್ಕಳಿಗೆ ಸ್ವಾಗತ

ಹೊಸಶಕೆ ದಿನಪತ್ರಿಕೆ

ತುಂಗಭದ್ರಾ ಜಲಾಶಯದ ಎಲ್ಲಾ ಗೇಟ್ ಗಳ ಜೋಡಣೆಗೆ ರೂ.52 ಕೋಟಿ ಮೊತ್ತದ ಟೆಂಡರ್ – ರಾಜಶೇಖರ್ ಹಿಟ್ನಾಳ

ಹೊಸಶಕೆ ದಿನಪತ್ರಿಕೆ

ಗಂಗಾವತಿಯಲ್ಲಿ ಅಕ್ರಮವಾಗಿ ಹೈಡ್ರೋ ಗಾಂಜಾ ಮಾದಕ ವಸ್ತು ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!