ಹೊಸಶಕೆ ನ್ಯೂಸ್-ಕುಷ್ಟಗಿ: ರೈಲ್ವೆ ಸುರಕ್ಷತಾ ಆಯಕ್ತರನ್ನು ಒಳಗೊಂಡ ತಜ್ಞರ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಗದಗ-ವಾಡಿ ನೂತನ ರೈಲ್ವೆ ಮಾರ್ಗದಲ್ಲಿ ಲಿಂಗನಬಂಡಿ ಕುಷ್ಟಗಿ ರೈಲು ನಿಲ್ದಾಣಗಳ ಮಧ್ಯೆ ಪರಿಶೀಲನೆ ನಡೆಸಿ, ಪ್ರಾಯೋಗಿಕ ರೈಲು ಸಂಚಾರವನ್ನು ಯಶಸ್ವಿಯಾಗಿ ಪರೀಕ್ಷಿಸಿದರು.
ಪ್ರತ್ಯೇಕ ಟ್ರಾಲಿಗಳಲ್ಲಿ ಹಳಿಗಳಗುಂಟ ಸಂಚರಿಸಿದ ತಂತ್ರಜ್ಞರು ಎಲ್ಲ ಹಂತದಲ್ಲೂ ಹಳಿಗಳ ಜೋಡಣೆಗೆ ಸಂಬಂಧಿಸಿದಂತೆ ಪ್ರತಿ ಅಂಶಗಳನ್ನು ಖುದ್ದಾಗಿ ಗಮನಿಸಿ, ನಿಲ್ದಾಣದಲ್ಲಿನ ವ್ಯವಸ್ಥೆ, ನಿಯಂತ್ರಣ ಕೇಂದ್ರ ಮತ್ತಿತರ ಕಾಮಗಾರಿಗಳನ್ನೂ ವೀಕ್ಷಿಸಿ ಮಾಹಿತಿ ಪಡೆದರು.
ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ, ಇತರೆ ಅಧಿಕಾರಿಗಳಾದ ರಾಮಮೋಹನ ರೆಡ್ಡಿ, ಮೀನಾ ಬೇಲಾ, ಪ್ರಸಾದ ಬಿರಾದಾರ, ಕಾರ್ತಿಕ್ ಹೆಗಡೆ, ಅರವಿಂದ ಹರ್ಲೆ, ಸತ್ಯನಾರಾಯಣ, ಸುರೇಶಕುಮಾರ, ಬಿ.ಎಂ. ಜಯಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮುದಗೌಡರ ಇತರ ಅಧಿಕಾರಿ, ಸಿಬ್ಬಂದಿಗಳು ಇದ್ದರು. ರೈಲ್ವೆ ಸುರಕ್ಷತಾ ಆಯುಕ್ತರ ತಂಡವು, ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಪ್ರಯಾಣಿಕರ ರೈಲು ಸಂಚಾರಕ್ಕೆ ಅನುಮತಿ ದೊರೆಯಲಿದೆ, ಅಂತಿಮ ಹಂತದ ಪ್ರಯೋಗಾರ್ಥ ಪಟ್ಟಣಕ್ಕೆ ಬಂದ ರೈಲು ನೋಡಲು ಇಲ್ಲಿಯ ನಿಲ್ದಾಣದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ವಿಕ್ಷಣೆ ಮಾಡಿ ಸಂತಸಪಟ್ಟರು
ಪ್ರದೇಶದಲ್ಲಿ ಪಟ್ಟಣದಲ್ಲಿ ರೈಲು ಸಂಚರಿಸುತ್ತದೆ ಎಂಬುದು ಕಲ್ಪನೆಗೂ ಮೀರಿದ ವಿಷಯವಾಗಿತ್ತು ಎಂದು ಪ್ರಮುಖರಾದ ವೀರೇಶ ಬಂಗಾರಶೆಟ್ಟರ, ಭರತೇಶ ಜೋಷಿ, ಜೆ.ಜಿ. ಆಚಾರ, ನಜೀರಸಾಬ್ ಮೂಲಿಮನಿ, ಮಹಾಂತಯ್ಯ ಅರಳೆಲೆಮಠ, ಘೋರ್ಪಡೆ, ನಿವೃತ್ತ ಎಎಸ್ಐ ದೊಡ್ಡಪ್ಪ ಇತರರು ಖುಷಿ ಹಂಚಿಕೊಂಡು, ರೈಲಿನ ಎಂಜಿನ್ಗೆ ಹೂಮಾಲೆ ಹಾಕಿ ಸ್ವಾಗತಿಸಿ ಸಂಭ್ರಮಿಸಿದರು.