Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಗದಗ–ವಾಡಿ ನೂತನ ರೈಲು  ಮಾರ್ಗ- ಪ್ರಯೋಗಿಕ ಯಶಸ್ವಿ

ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ತಂಡದಿಂದ ಪರಿಶೀಲನೆ

Hosashake News by Hosashake News
March 29, 2025
in ಜಿಲ್ಲೆ, ದೇಶ, ಪ್ರಾದೇಶಿಕ, ರಾಜ್ಯ, ಸುದ್ದಿ
0
ಗದಗ–ವಾಡಿ ನೂತನ ರೈಲು  ಮಾರ್ಗ- ಪ್ರಯೋಗಿಕ ಯಶಸ್ವಿ
Share on FacebookShare on Twitter

ಹೊಸಶಕೆ ನ್ಯೂಸ್-ಕುಷ್ಟಗಿ: ರೈಲ್ವೆ ಸುರಕ್ಷತಾ ಆಯಕ್ತರನ್ನು ಒಳಗೊಂಡ ತಜ್ಞರ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಗದಗ-ವಾಡಿ ನೂತನ ರೈಲ್ವೆ ಮಾರ್ಗದಲ್ಲಿ ಲಿಂಗನಬಂಡಿ ಕುಷ್ಟಗಿ ರೈಲು ನಿಲ್ದಾಣಗಳ ಮಧ್ಯೆ ಪರಿಶೀಲನೆ ನಡೆಸಿ, ಪ್ರಾಯೋಗಿಕ ರೈಲು ಸಂಚಾರವನ್ನು ಯಶಸ್ವಿಯಾಗಿ ಪರೀಕ್ಷಿಸಿದರು.

ಪ್ರತ್ಯೇಕ ಟ್ರಾಲಿಗಳಲ್ಲಿ ಹಳಿಗಳಗುಂಟ ಸಂಚರಿಸಿದ ತಂತ್ರಜ್ಞರು ಎಲ್ಲ ಹಂತದಲ್ಲೂ ಹಳಿಗಳ ಜೋಡಣೆಗೆ ಸಂಬಂಧಿಸಿದಂತೆ ಪ್ರತಿ ಅಂಶಗಳನ್ನು ಖುದ್ದಾಗಿ ಗಮನಿಸಿ, ನಿಲ್ದಾಣದಲ್ಲಿನ ವ್ಯವಸ್ಥೆ, ನಿಯಂತ್ರಣ ಕೇಂದ್ರ ಮತ್ತಿತರ ಕಾಮಗಾರಿಗಳನ್ನೂ ವೀಕ್ಷಿಸಿ ಮಾಹಿತಿ ಪಡೆದರು.

ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ, ಇತರೆ ಅಧಿಕಾರಿಗಳಾದ ರಾಮಮೋಹನ ರೆಡ್ಡಿ, ಮೀನಾ ಬೇಲಾ, ಪ್ರಸಾದ ಬಿರಾದಾರ, ಕಾರ್ತಿಕ್ ಹೆಗಡೆ, ಅರವಿಂದ ಹರ್ಲೆ, ಸತ್ಯನಾರಾಯಣ, ಸುರೇಶಕುಮಾರ, ಬಿ.ಎಂ. ಜಯಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮುದಗೌಡರ ಇತರ ಅಧಿಕಾರಿ, ಸಿಬ್ಬಂದಿಗಳು ಇದ್ದರು. ರೈಲ್ವೆ ಸುರಕ್ಷತಾ ಆಯುಕ್ತರ ತಂಡವು, ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಪ್ರಯಾಣಿಕರ ರೈಲು ಸಂಚಾರಕ್ಕೆ ಅನುಮತಿ ದೊರೆಯಲಿದೆ, ಅಂತಿಮ ಹಂತದ ಪ್ರಯೋಗಾರ್ಥ ಪಟ್ಟಣಕ್ಕೆ ಬಂದ ರೈಲು ನೋಡಲು ಇಲ್ಲಿಯ ನಿಲ್ದಾಣದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ವಿಕ್ಷಣೆ ಮಾಡಿ ಸಂತಸಪಟ್ಟರು

ಪ್ರದೇಶದಲ್ಲಿ ಪಟ್ಟಣದಲ್ಲಿ ರೈಲು ಸಂಚರಿಸುತ್ತದೆ ಎಂಬುದು ಕಲ್ಪನೆಗೂ ಮೀರಿದ ವಿಷಯವಾಗಿತ್ತು ಎಂದು ಪ್ರಮುಖರಾದ ವೀರೇಶ ಬಂಗಾರಶೆಟ್ಟರ, ಭರತೇಶ ಜೋಷಿ, ಜೆ.ಜಿ. ಆಚಾರ, ನಜೀರಸಾಬ್ ಮೂಲಿಮನಿ, ಮಹಾಂತಯ್ಯ ಅರಳೆಲೆಮಠ, ಘೋರ್ಪಡೆ, ನಿವೃತ್ತ ಎಎಸ್‌ಐ ದೊಡ್ಡಪ್ಪ ಇತರರು ಖುಷಿ ಹಂಚಿಕೊಂಡು, ರೈಲಿನ ಎಂಜಿನ್‌ಗೆ ಹೂಮಾಲೆ ಹಾಕಿ ಸ್ವಾಗತಿಸಿ ಸಂಭ್ರಮಿಸಿದರು.

Tags: Gadag-Wadi new rail routeGadag-Wadi new rail route - trial run successfulಗದಗ–ವಾಡಿ ನೂತನ ರೈಲು  ಮಾರ್ಗ- ಪ್ರಯೋಗಿಕ ಯಶಸ್ವಿ
Previous Post

ನಾಡಿನ ನೆಲ, ಜಲ ರಕ್ಷಣೆ ಪ್ರತಿ ಕನ್ನಡಿಗನ ಆದ್ಯ ಕರ್ತವ್ಯ : ಸಚಿವ ಶಿವರಾಜ ತಂಗಡಗಿ

Next Post

ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ : ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!