ಹೊಸಶಕೆ ನ್ಯೂಸ್-ಕೊಪ್ಪಳ :
ನಾಡಿನ ಖ್ಯಾತ ಬರಹಗಾರ, ವಿದ್ಯಾ ವಾಚಸ್ಪತಿ ಎಂದೇ ಖ್ಯಾತರಾಗಿದ್ದ ಡಾ. ಪಂಚಾಕ್ಷರಿ ಹಿರೇಮಠ್ ರ ನಿಧನಕ್ಕೆ ಕೊಪ್ಪಳದ ಕವಿ ಸಮೂಹ ಬಳಗ ಸಂತಾಪ ವ್ಯಕ್ತಪಡಿಸಿದೆ.
ಕೇವಲ ಬರಹಗಾರರಾಗಿ ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಹೋರಾಟಗಾರರಾಗಿ ಶಿಕ್ಷಣ ಪ್ರೇಮಿಗಳಾಗಿ ಇಡೀ ನಾಡಿನಾದ್ಯಂತ ಹೆಸರುವಾಸಿಯಾಗಿದ್ದ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ಡಾ. ಪಂಚಾಕ್ಷರಿ ಹಿರೇಮಠ್ ಇವರನ್ನು ಕಳೆದುಕೊಂಡು ಇಡೀ ನಾಡು, ಸಾಹಿತ್ಯ ಲೋಕ ಬಡವಾಗಿದೆ. ಹಳೆಯ ತಲೆಮಾರಿನ ಕೊಂಡಿ ಒಂದು ಕಳಿಸಿಕೊಂಡಂತಾಗಿದೆ ಎಂದು ಕವಿ ಸಮೂಹ ಬಳಗ ಕಂಬನಿ ಮಿಡಿದಿದೆ.
ಇಳಿ ವಯಸ್ಸಿನಲ್ಲೂ ಸಾಹಿತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರೂ ಪ್ರೋತ್ಸಾಹಿಸುತ್ತಿದ್ದ ಪಂಚಾಕ್ಷರಿ ಹಿರೇಮಠ ಅವರು ಕೊಪ್ಪಳದ ಕೀರ್ತಿಯನ್ನು ಇಡೀ ನಾಡಿನಾದ್ಯಂತ ಪಸರಿಸಿದವರು ಅವರ ಹೆಸರು ಎಂದಿಗೂ ಅಜರಾಮರ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೊಪ್ಪಳದ ಕವಿ ಸಮೂಹ , ಬಹುತ್ವ ಭಾರತ ಬಳಗ ಸೇರಿದಂತೆ ಜಿಲ್ಲೆಯ ಸಾಹಿತ್ಯ ಬಳಗದ ಡಾ ಮಹಂತೇಶ್ ಮಲ್ಲನಗೌಡರ , ಅಲ್ಲಮಪ್ರಭು ಬೆಟ್ಟದೂರು, ಎ ಎಮ್ ಮದರಿ, ಈಶ್ವರ ಹತ್ತಿ, ಸಿರಾಜ್ ಬಿಸರಳ್ಳಿ, ವಿಜಯ್ ಅಮೃತ ರಾಜ್, ಮಹೇಶ್ ಬಳ್ಳಾರಿ, ಸಾವಿತ್ರಿ ಮುಜುದಾರ್, ಅನುಸೂಯ ಜಾಗೀರ್ದಾರ, ವಿಜಯಲಕ್ಷ್ಮಿ ಕೊಟಗಿ, ಶ್ರೀನಿವಾಸ್ ಚಿತ್ರಗಾರ್, ಎ ಪಿ ಅಂಗಡಿ, ಅಮರದೀಪ್ ಶಿವಪ್ರಸಾದ್ ಹಾದಿಮನಿ ಜಿಎಸ್ ಬಾರ್ಕೆರ್, ಪುಷ್ಪಲತಾ ಏಳು ಬಾವಿ, ಸಿದ್ದಲಿಂಗಪ್ಪ ಕೊಟ್ನೆಕಲ್ ಸೇರಿದಂತೆ ಕೊಪ್ಪಳದ ಸಾಹಿತಿಕ ಬಳಗವರು ಕಂಬನಿ ಮಿಡಿದಿದ್ದಾರೆ.