*ಥೈಲ್ಯಾಂಡ್ ದೇಶದಿಂದ ತರಿಸಲಾಗಿದ್ದ ರೂ. 18.06 ಲಕ್ಷ ಹೈಡ್ರೋ ಗಾಂಜಾ ಜಪ್ತಿ : ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ
ಹೊಸಶಕೆ ನ್ಯೂಸ್-ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದಲ್ಲಿ ಆಕ್ರಮವಾಗಿ ತಮ್ಮ ವಶದಲ್ಲಿ ಹೈಡ್ರೋ ಗಾಂಜಾ ಮಾದಕ ವಸ್ತುವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದವರ ದಾಳಿ ಮಾಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ. 18.06 ಲಕ್ಷ ಬೆಲೆ ಬಾಳುವ ಗಾಂಜಾ, ಹಾಗೂ ಕಾರು, ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮೇ. 28, ಬುಧವಾರ ದಂದು ಗಂಗಾವತಿ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಂಗಾವತಿ ನಗರದಿಂದ ಸೂರ್ಯ ನಾಯಕ ತಾಂಡಕ್ಕೆ ಹೋಗುವ ರಸ್ತೆಯಲ್ಲಿ ಸರ್ಕಾರಿ ಐಟಿಐ ಕಾಲೇಜಿನ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ 02 ಕಾರಿನಲ್ಲಿರುವ ವ್ಯಕ್ತಿಗಳು ಅಕ್ರಮವಾಗಿ ಥೈಲಾಂಡ್ ದೇಶದಿಂದ ತರಿಸಲಾಗಿದ್ದ ಬೆಲೆ ಬಾಳುವ ಹೈಡೋ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುವ ಮಾಹಿತಿ ಬಂದ ಮೇರೆಗೆ ತಕ್ಷಣ ದಾಳಿ ನಡೆಸಿರುವ ಪೊಲೀಸರು 8ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಸದರಿ ಆರೋಫಿತರಲ್ಲಿ 03 ಜನ ಆರೋಪಿಗಳು ಕೇರಳ ರಾಜ್ಯದವರಾಗಿದ್ದು, ಥೈಲ್ಯಾಂಡ್ ದೇಶದಿಂದ ಅಕ್ರಮವಾಗಿ ಹೈಡ್ರೋ ಗಾಂಜಾವನ್ನು ತರಿಸಿಕೊಂಡು ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದು. 08 ಜನ ಆಪಾದಿತರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ-110/ 20(ಬಿ), 23(ಎ) ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತಕುಮಾರ ಆರ್. ಗಂಗಾವತಿ ಡಿ.ಎಸ್.ಪಿ ಸಿದ್ದಲಿಂಗಪ್ಪಗೌಡ ಆರ್ ಪಾಟೀಲ್, ಹಾಗೂ ಪಿಐ ಪ್ರಕಾಶ ಮಾಳಿ ರವರ ಮಾರ್ಗದರ್ಶನದಲ್ಲಿ ಡಿಸಿಆರ್ಬಿ ಪಿಐ ಶಿವರಾಜ, ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ನಾಗರಾಜ ಟಿ.ಜಿ, (ಕಾ.& ಸು) ಪಿ.ಎಸ್.ಐ ವೀರಭದ್ರಪ್ಪ, ಡಿಎಸ್ಬಿ ಘಟಕದ ಎಎಸ್ಐ ಹಾಗೂ ಸಿಬ್ಬಂದಿಯವರಾದ ಚಿರಂಜೀವಿ, ಮರಿಶಾಂತಗೌಡ, ವಿಶ್ವನಾಥ, ರಾಘವೇಂದ್ರ, ವಿಶ್ವನಾಥ, ಬೀಮಪ್ಪ, ಪರಶುರಾಮ, ಮೈಲಾರಪ್ಪ, ಶ್ರೀಕಾಂತ, ಮಂಜುನಾಥರವರನ್ನೊಳಗೊಂಡ ತಂಡವು ದಾಳಿ ಮಾಡಿ ಆಪಾದಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ ಎಂದು ಎಸ್ಪಿ ಡಾ. ಅರಸಿದ್ದಿ ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಹೇಮಂತಕುಮಾರ್ ಆರ್, ಗಂಗಾವತಿ ಡಿಎಸ್ಪಿ ಸಿದ್ಧಲಿಂಗಪ್ಪಗೌಡ ಆರ್ ಪಾಟೀಲ ಸೇರಿದಂತೆ ಇತರ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಇದ್ದರು.
ಆಕ್ರಮವಾಗಿ ಹೈಡ್ರೋ ಗಾಂಜಾ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಂಧಿತ ಆರೋಪಿತರು :
ಸೌಜೇಶ ಕೆಕೆ ತಂದೆ ಸುನೀಲ್ ಕೆಕೆ ವಯಾ:28 ವರ್ಷ ಸಾ: ಕುರುಕುತಿಯಲ್ ಅಂಗಡಿಕಾಡೆವು, ಆಯ್ಯನಕುನ್ನು, ಕಣ್ಣೂರು ಕೇರಳ, ಸಲಿಂ ಪಿ.ಪಿ ತಂದೆ ಇಬ್ರಾಹಿಂ ವಯಾ: 27 ವರ್ಷ ಸಾ| ತಟ್ಟಾನಕಂಡಿ ಕಾಕಯನಗಾಡು ಮುಜಾಖುನ್ನು ಕಣ್ಣೂರು ಕೇರಳ, ಬಿ ದುರ್ಗಾ ಪ್ರಸಾದ್ ತಂದೆ ಬಿ ಹುಲುಗಯ್ಯ ವಯಾ: 27 ವರ್ಷ ಸಾ: ದೇವಿ ನಗರ ಬಾಯ್ಸ್ ರಿಮಾಂಟ್ ಹೋಮ್ ಬಳ್ಳಾರಿ, ಬಾದಷಾ ತಂದೆ ನಾಸೀರ 32ವರ್ಷ ಸಾ:ರಾಯಮರೆಕಾರ್, ಹೌಸ್ ಪೋಸ್ಟ್ ಚಾವಕಾಡ್ ಪಾಲಿಯೋರ್ ತ್ರಿಶೂರ್ ಕೇರಳ. ಮದನ ತಂದೆ ನರಸಿಂರೆಡ್ಡಿ ವಯಾ: 26 ವಷ್ ಸಾ: ಮಹಾನಂದಿ ಕೋಟಮ್ ಲಾ ಕಾಲೇಜ್ ಹಿಂದೆ ಬಳ್ಳಾರಿ, ಸೂರ್ಯ ಪ್ರತಾಪ್ ರೆಡ್ಡಿ ತಂದೆ ಶೀನಿವಾಸ ರೆಡ್ಡಿ ವಯಾ:19 ವರ್ಷ ಸಾ: ತಿಲಕ ನಗರ, ಸಾಯಿಬಾಬಾ ಟೆಂಪಲ್ ಹತ್ತಿರ ಬಳ್ಳಾರಿ. ಮಹ್ಮದ ಅಮೀದ್ ತಂದೆ ಮಸ್ತಾನವಲಿ ವಯಾ: 22 ವರ್ಷ ಸಾ: ದೇವಿ ನಗರ 5 ನೇ ಕ್ರಾಸ್ ಬಳ್ಳಾರಿ, ಮಣಿಕಂಠ ತಂದೆ ಬೀಮಲಿಂಗ ವಯಾ: 23 ವರ್ಷ ಸಾ ಆವಂಬಾವಿ, ಆಂಜನೇಯ ಗುಡಿ ಹತ್ತಿರ ವಾಡ್ ನಂ 35 ಬಳ್ಳಾರಿ. ==
== ಗಂಗಾವತಿ ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲ ಪತ್ತೆ ಮಾಡಿ ಹೊರರಾಜ್ಯದ ಆಪಾದಿತ ವ್ಯಕ್ತಿಗಳ ಸಹಿತ 8 ಜನರನ್ನು ಬಂಧಿಸಿ 18,06,000-00 ರೂ ಬೆಲೆ ಬಾಳುವ ಒಟ್ಟು 1806 ಗ್ರಾಂ ತೂಕದ ಹೈಡ್ರೋ ಗಾಂಜಾ 02 ಕಾರುಗಳನ್ನು 08 ಮೊಬೈಲುಗಳನ್ನು ವಶಪಡಿಸಿಕೊಂಡು ಉತ್ತಮ ಪತ್ತೆ ಕಾರ್ಯ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಕ್ಕೆ ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಲಾಗಿದೆ : ಡಾ. ರಾಮ್ ಎಲ್. ಆರಸಿದ್ರಿ, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು ಕೊಪ್ಪಳ.==