Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ರೈಲು ಸಂಚಾರ ಆರಂಭಗೊಳ್ಳುವ ಐತಿಹಾಸಿಕ ಕಾರ್ಯಕ್ರಮ : ಶಾಸಕ ದೊಡ್ಡನಗೌಡ ಪಾಟೀಲ

Hosashake News by Hosashake News
May 14, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ
0
ರೈಲು ಸಂಚಾರ ಆರಂಭಗೊಳ್ಳುವ ಐತಿಹಾಸಿಕ ಕಾರ್ಯಕ್ರಮ : ಶಾಸಕ ದೊಡ್ಡನಗೌಡ ಪಾಟೀಲ
Share on FacebookShare on Twitter

ಹೊಸಶಕೆ ನ್ಯೂಸ್-ಕುಷ್ಟಗಿ:  ಗದಗ-ವಾಡಿ ನೂತನ ಮಾರ್ಗದಲ್ಲಿ ಮೆ. 15 ರಂದು ಗುರುವಾರ ಬೆಳಿಗ್ಗೆ ಪಟ್ಟಣದ ರೈಲು ನಿಲ್ದಾಣದಲ್ಲಿ 11 ಗಂಟೆಗೆ ರೈಲು ಸಂಚಾರ ಆರಂಭಗೊಳ್ಳುವ ಐತಿಹಾಸಿಕ ಕಾರ್ಯಕ್ರಮವು ಸ್ಮರಣೀಯವಾದುದ್ದು ಎಂದು ಇದಕ್ಕೆ ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ನಿಲ್ದಾಣದಲ್ಲಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿ ಇಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ  ನಡೆಸಿದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿಯೂ ರೈಲು ಸಂಚಾರ ಸೇವೆ ಆರಂಭಗೊಂಡಿರುವುದು ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದ್ದು ಇಂಥ ಅವಿಸ್ಮರಣೀಯ ಗಳಿಗೆಗೆ ಎಲ್ಲರೂ ಸಾಕ್ಷಿಯಾಗಬೇಕು ಎಂದರು.

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದು, ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ಎಂ.ಬಿ.ಪಾಟೀಲ ಹಾಗೂ ಜಿಲ್ಲೆಯ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ , ರೈಲ್ವೆ ಯು ಸಧ್ಯ ಹುಬ್ಬಳ್ಳಿವರೆಗೆ ಮಾತ್ರ ರೈಲು ಸಂಚರಿಸಲಿದ್ದು, ಬೆಂಗಳೂರಿಗೆ ಪ್ರತ್ಯೇಕ ರೈಲು ಸಂಚಾರಕ್ಕೆ ಅನುಮತಿಸುವಂತೆ ಕೋರಿ ರೈಲ್ವೆ ಸಚಿವರಿಗೆ ಮನವಿ  ಮಾಡಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ  ರೈಲ್ವೆ ಹೋರಾಟ ಸಮಿತಿಯ ವೀರೇಶ ಬಂಗಾರಶೆಟ್ಟರ, ಮುಖಂಡರಾದ ಫಕೀರಪ್ಪ ಚಳಗೇರಿ, ಭೀಮನಗೌಡ ಪಾಟೀಲ, ಹಂಪನಗೌಡ ಬಳೂಟಗಿ, ಸತ್ಯಪ್ಪ ಮಡಿವಾಳರ, ಬಾಬು ಘೋರ್ಪಡೆ, ಸಂಗನಗೌಡ ಪಾಟೀಲ, ಮಹಾಂತೇಶ ಬದಾಮಿ, ನಜೀರಸಾಬ್ ಮೂಲಿಮನಿ, ಪಾಂಡುರಂಗ ಆಶ್ರಿತ, ಮಹಾಂತಯ್ಯ ಅರಳೆಲೆಮಠ, ಶರಣಪ್ಪ ಹೂಗಾರ, ಸಯ್ಯದ್‌ ಮುರ್ತುಜಾ, ಪರಶುರಾಮ ನಿರಂಜನ, ಅಶೋಕ ಬಳೂಟಗಿ, ಶಶಿಧರ ಕವಲಿ, ಜಯತೀರ್ಥ ಸೌದಿ, ಕಂದಕೂರಪ್ಪ, ಮಹಾಂತೇಶ ಮಂಗಳೂರು, ಮುತ್ತಣ್ಣ ಬಾಚಲಾಪುರ, ಅನಿಲಕುಮಾರ ಆಲಮೇಲ ಸೇರಿದಂತೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Tags: Historic program of starting train service: MLA Dodna Gowda PatilKoppal Hosashake Kushatgi Newsರೈಲು ಸಂಚಾರ ಆರಂಭಗೊಳ್ಳುವ ಐತಿಹಾಸಿಕ ಕಾರ್ಯಕ್ರಮ : ಶಾಸಕ ದೊಡ್ಡನಗೌಡ ಪಾಟೀಲ
Previous Post

ಮೇ.21 ರಂದು ಶ್ರೀ ಹುಲಿಗೆಮ್ಮ ದೇವಿ ಮಹಾ ರಥೋತ್ಸವ

Next Post

ಶಾಸಕ ಸ್ಥಾನ ರದ್ದತಿ ತಡೆಗೆ ಕೋರ್ಟ್‌ ಮೊರೆ  – ಅರುಣಾ ಲಕ್ಷ್ಮಿ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಕುಕನೂರ, ಕನಕಗಿರಿ, ಕಾರಟಗಿ ತಾಲ್ಲೂಕುಗಳಿಗೆ “ತಾಲ್ಲೂಕು ಪ್ರಜಾಸೌಧ”  ನಿರ್ಮಾಣ

ಬಿಜೆಪಿ ನಾಯಕ ರವಿಕುಮಾರ, ನಾರಾಯಣಸ್ವಾಮಿ ವಿರುದ್ಧ ಕೊಪ್ಪಳದಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ

ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯಿಂದ ಜಾಗತಿಕ ಮಾನ್ಯತೆ, ಘನತೆ ಹೆಚ್ಚಿದೆ ಸಚಿವ ಶಿವರಾಜ ತಂಗಡಗಿ  

ಹೊಸಶಕೆ ದಿನಪತ್ರಿಕೆ

ಬಹದ್ದೂರಬಂಡಿ ಶಾಲೆಯಲ್ಲಿ ಹೂ, ಸಿಹಿ ನೀಡಿ ಡೊಳ್ಳು ಬಾರಿಸಿ, ಆರತಿಯೊಂದಿಗೆ ಮಕ್ಕಳಿಗೆ ಸ್ವಾಗತ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!