ಮನುಷ್ಯನ ಜೀವನದಲ್ಲಾಗಲಿ, ನಮ್ಮ ನಿಮ್ಮ ಬದುಕಿನಲ್ಲಾಗಲಿ ‘ಸೋಲು‘ ಮತ್ತು ‘ನೋವು‘ ಎನ್ನುವ ಪದಗಳು” ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ…” ಇವೆರಡು ಪರಸ್ಪರ ಒಂದನ್ನೊಂದು ಬಿಟ್ಟು ಇರಲಾರವು. ನಾವು ಎಲ್ಲಿ ಸೋಲು ಕಾಣುತ್ತೇವೆಯೋ; ಅಲ್ಲಿ ನೋವು ಸಹಜ. ಹಾಗಂತ ನಿಮ್ಮ ಕನಸನ್ನು ಹಿಂಬಾಲಿಸುವುದನ್ನು ಬಿಡದಿರಿ ಹಾಗೂ ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನವನ್ನು ಮೊಟುಕುಗೊಳಿಸದಿರಿ ಏಕೆಂದರೆ “ಸೋಲೇ ಗೆಲುವಿನ ಸೋಪಾನ“.
ಒಂದು ದೊಡ್ಡ ಮರವನ್ನು ಕತ್ತರಿಸಿದರೂ ಸಹ ಆ ಮರದ ಹಣ್ಣಿನ ಒಂದು ಸಣ್ಣ ಬೀಜ ಮೊಳಕೆಯೊಡೆದು ಗಿಡವಾಗಿ ,ಮರವಾಗಿನಂತರ ಹೆಮ್ಮರವಾಗಿ ಬೆಳೆಯುತ್ತದೆ. ಹಾಗೆಯೇ ನಮ್ಮ ಮನಸ್ಸಿನಲ್ಲಿ ಒಂದು ಸಣ್ಣ ಸೋಲು ಅಥವಾ ನೋವಿನ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸಿದರೆ, ಮತ್ತೆ ಅದು ನಮ್ಮ ಮನಸ್ಸಿಗೆ ದೊಡ್ಡದಾಗಿ ಪ್ರಭಾವ ಬೀರಿ, ನಮ್ಮ ಉತ್ಸಾಹವನ್ನು ಕಡಿಮೆ ಮಾಡಬಹುದು. ಆದ್ದರಿಂದ ಸೋಲು ಮತ್ತು ನೋವುಗಳನ್ನು ಮನದೊಳಗೆ ವಿಜೃಂಬಿಸಲು ಬಿಡದೆ ಸಾಧನೆಯ ಸಿಹಿ ಕನಸಿನೊಂದಿಗೆ ಮುನ್ನುಗ್ಗಿ….. ಸಾಧನೆಯ ಹಾದಿ ನಿಮಗೆ ಗೋಚರಿಸುತ್ತದೆ. ಹೀಗೆ ಸೋಲಿಗೂ ಅಂಜದೆ ನೋವಿಗೂ ಅಳುಕದೆ ಸಾಧಿಸಿ ಮುಗಿಲ ತರಕ್ಕೆ ಬೆಳೆದ ರ್ವ ಸಾಧಕರ ನೈಜ ಚರಿತ್ರೆ ಹೀಗಿದೆ.
ಅಮೆರಿಕಾದ ಓಹಿಯೋದ್ ಮಿಲನ್ ಎಂಬ ಸಣ್ಣ ಪಟ್ಟಣದಲ್ಲಿ ಮಧ್ಯಮ ರ್ಗದ ಕುಟುಂಬದ ದಂಪತಿಗಳಿಗೆ 1848 ಫೆಬ್ರವರಿ 11ರಂದು 7ನೇ ಮಗನಾಗಿ ಒಬ್ಬ ಬಾಲಕ ಜನಿಸುತ್ತಾನೆ. ತನ್ನ ಏಳನೇ ವಯಸ್ಸಿನಲ್ಲಿ ಆ ಬಾಲಕ ಶಾಲೆಗೆ ಸೇರುತ್ತಾನೆ. ಕೇವಲ ಮೂರು ತಿಂಗಳು ಮಾತ್ರ ಶಾಲೆಗೆ ಹೋದ ಆ ಬಾಲಕ ನಂತರ ಶಾಲೆಯನ್ನು ತ್ಯಜಿಸುತ್ತಾನೆ. ಏಕೆಂದರೆ ಅವನಿಗೆ ಓದಿನಲ್ಲಿ ಸಂಪೂರ್ಣ ನಿರಾಸಕ್ತಿ ಮತ್ತು ದೊಡ್ಡ ಬೌದ್ಧಿಕ ವಿಕಾರತೆ ಇತ್ತು.
ಇದರಿಂದಾಗಿ ಶಾಲಾ ಪ್ರಾಂಶುಪಾಲರು, ಶಿಕ್ಷಕರು ಇವನನ್ನು ಶಾಲೆಯಿಂದ ಹೊರ ಹಾಕುತ್ತಾರೆ. ಶಾಲೆಯಿಂದ ಹೊರ ಹಾಕುವ ಸಂರ್ಭದಲ್ಲಿ ಆ ಶಿಕ್ಷಕರು ಆ ಹುಡುಗನ ಕೈಯಲ್ಲಿ ಒಂದು ಪತ್ರವನ್ನು ಕೊಟ್ಟು, ತನ್ನ ತಾಯಿಗೆ ಕೊಡುವಂತೆ ತಿಳಿಸುತ್ತಾರೆ. ಮನೆಗೆ ಬಂದ ಬಾಲಕ ಶಿಕ್ಷಕರು ಕೊಟ್ಟ ಪತ್ರವನ್ನು ತನ್ನ ತಾಯಿಗೆ ಕೊಡುತ್ತಾನೆ. ಆ ಪತ್ರವನ್ನು ಓದಿದ ತಾಯಿ ಕಣ್ಣೀರು ಹಾಕುತ್ತಾಳೆ. ಏಕೆಂದರೆ ಆ ಪತ್ರದಲ್ಲಿ ಶಿಕ್ಷಕರು “ನಿಮ್ಮ ಮಗ ತುಂಬಾ ದಡ್ಡನಿದ್ದಾನೆ, ಶಾಲೆಗೆ ಕಳಿಸಬೇಡಿ” ಎಂದು ಬರೆಯಲಾಗಿತ್ತು.
ನಂತರ ತಾಯಿಯೇ ತನ್ನ ಮಗನಿಗೆ ಮನೆಯಲ್ಲಿಯೇ ದೊಡ್ಡ ದೊಡ್ಡ ವಿಜ್ಞಾನಿಗಳ ಬಗ್ಗೆ, ಸಾಧಕರ ಬಗ್ಗೆ ಪಾಠ ಮಾಡುತ್ತಾ ಮನೆಯಲ್ಲಿಯೇ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಭೂಗೋಳ ಶಾಸ್ತ್ರಗಳನ್ನು ಕಲಿಸಲು ಪ್ರಾರಂಭಿಸಿದರು.ಓದಲು ಸಾವಿರಾರು ವಿಜ್ಞಾನ ಪುಸ್ತಕಗಳನ್ನು ಕೊಟ್ಟರು. ಮನೆಯಲ್ಲಿಯೇ ಪ್ರಯೋಗ ಶಾಲೆಯನ್ನು ಸಹ ಮಾಡಿಕೊಟ್ಟರು. ಆ ಬಾಲಕನು ಅಮ್ಮನ ಕನಸಿನ ಪ್ರಕಾರ ಬೆಳೆಯತೊಡಗಿದ. ತನ್ನ ಜೀವನೋಪಾಯಕ್ಕಾಗಿ ಮನೆ-ಮನೆಗಳಿಗೆ ನ್ಯೂಸ್ ಪೇಪರ್ ಹಾಕಲು ಪ್ರಾರಂಭಿಸಿದ.
ಹಾಗೆಯೇ ತರಕಾರಿಯನ್ನು ಸಹ ಮಾರಲು ಪ್ರಾರಂಭಿಸಿದ. ಬೆಂಕಿ ಹೇಗೆ ಉರಿಯುತ್ತದೆ….? ಎಂದು ತಿಳಿಯುವ ಕುತೂಹಲದಿಂದ ಬಣವೆಗೆ ಬೆಂಕಿಯನ್ನು ಹಚ್ಚಿದ ಭೂಪ.ಹಾಗೆಯೇ ಮೊಟ್ಟೆ ಹೇಗೆ ಕಾವು ಕೊಟ್ಟರೆ ಮರಿಯಾಗುತ್ತದೆ…? ಎಂದು ತನ್ನ ಲ್ಯಾಬೋರೇಟರಿಯಲ್ಲಿ ಪ್ರಯೋಗವನ್ನು ಮಾಡಿದ. ಓದಿದ ವಿಷಯಗಳನ್ನು ಪ್ರಯೋಗಗಳ ಮೂಲಕ ಖಚಿತಪಡಿಸಿಕೊಳ್ಳುವುದು ಆ ಬಾಲಕನ ಸ್ವಭಾವವಾಗಿ ಬೆಳೆಯಿತು.ಸುಮಾರು 200 ಗಾಜಿನ ಬಾಟಲಿಗಳನ್ನು ತೆಗೆದುಕೊಂಡು ಅವುಗಳ ಒಳಗೆ ರಾಸಾಯನಿಕಗಳನ್ನು ತುಂಬಿ ಒಂದನ್ನೊಂದು ಬೆರೆಸಿ ಬಂದ ಫಲಿತಾಂಶವನ್ನು ಬರೆದಿಡುವಂತಹ ಬೌದ್ಧಿಕ ಪ್ರೌಢಿಮೆ ಬೆಳೆಯತೊಡಗಿತು.
ಹೀಗೆ ಪ್ರಯೋಗಗಳ ಮೂಲಕ ಬಾಲಕನೂ ಸಹ ಬೆಳೆದು ದೊಡ್ಡವನಾಗತೊಡಗಿದ.”ದಿ ವೀಕ್ಲಿ ಹೆರಲ್ಡ್(THE WEEKLY HERALD) ಎನ್ನುವ ಸಪ್ತಾಹಿಕವನ್ನು ಪ್ರಾರಂಭಿಸಿದ. ಮುದ್ರಕ ,ಸಂಪಾದಕ ,ಮಾರಾಟಗಾರ ಎಲ್ಲವೂ ಆದ ಪತ್ರಿಕೆ ಒಳ್ಳೆ ಹೆಸರು ಪಡೆಯಿತು. ಈ ಪತ್ರಿಕೆಯನ್ನು ಒಂದು ರೈಲು ಬೋಗಿಯೊಳಗೆ ಮುದ್ರಣ ಯಂತ್ರ ಇಟ್ಟು ಮುದ್ರಿಸುತ್ತಿದ್ದ . ಅಲ್ಲಿದ್ದ ಕೆಲವು ರಾಸಾಯನಿಕಗಳು ಚೆಲ್ಲಿ ರೈಲು ಭೋಗಿಗೆ ಬೆಂಕಿ ಹತ್ತಿಕೊಂಡು ನಂತರ ಅಲ್ಲಿಂದ ಹೊರ ದೂಡಲ್ಪಟ್ಟ. ಪತ್ರಿಕೆಯು ನಿಂತು ಹೋಯಿತು. ಆದರೂ ಈ ಸೋಲಿನಿಂದ ಕಂಗೆಡಲಿಲ್ಲ. ಈ ನೋವಿನಿಂದ ಬದುಕಿನ ದಿಕ್ಕು ಬದಲಿಸಲಿಲ್ಲ.
ಇಷ್ಟೆಲ್ಲಾ ಹಿನ್ನಡೆಯ ನಡುವೆಯೂ ತನ್ನ ಪ್ರಯೋಗಗಳನ್ನು ಮುಂದುವರೆಸಿ ಟೆಲಿಸ್ಕೋಪ್ ಕಂಡುಹಿಡಿದ.1869 ರಲ್ಲಿ ಬೂಸ್ಟನ್ನಿನ ಟೆಲಿಗ್ರಾಪ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ದೂರದ ಲೇಖನ, ಸುದ್ದಿಗಳನ್ನು ಬರೆದುಕೊಳ್ಳುವುದು ಇವನ ಕೆಲಸವಾಗಿತ್ತು.ರಾತ್ರಿ ವೇಳೆ ಕೆಲಸ ಮಾಡಿ, ಬೆಳಗಿನ ವೇಳೆ ಪ್ರಯೋಗಗಳನ್ನು ಮಾಡುತ್ತಿದ್ದ. “ನಾನು ಮಾಡುವ ಕೆಲಸ ಬಹಳಷ್ಟಿದೆ,ಆದರೆ ಇರುವ ಕಾಲ ಕಡಿಮೆ”. ನನ್ನ ಸಂಶೋಧನೆಗಳನ್ನು ಹೇಗದರೂ ಮಾಡಿ ಪೂರೈಸಬೇಕೆಂದು ಸಂಕಲ್ಪ ಮಾಡಿಕೊಂಡು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದ.
ತಾನೇ ತಯಾರಿಸಿದ ಟೆಲಿಸ್ಕೋಪ್ಮಾರಿ ಸ್ವಲ್ಪ ಹಣ ಸಂಗ್ರಹಿಸಿ ತನ್ನದೇ ಆದ ಒಂದು ಕರ್ಖಾನೆ ಮತ್ತು ಪ್ರಯೋಗಾಲಯವನ್ನು ಸ್ಥಾಪಿಸಿದ ಕೊನೆಗೆ ವಿದ್ಯುತ್ ದೀಪವನ್ನು ಕಂಡುಹಿಡಿಯಲು ಸುಮಾರು ಸಾವಿರಾರು ಬಾರಿ ಪ್ರಯತ್ನಿಸಿ…ಪ್ರಯತ್ನಿಸಿ ವಿಫಲನಾದ.ಕೊನೆಗೊಂದು ದಿನ ವಿದ್ಯುತ್ ಬಲ್ಬನ್ನು ಕಂಡುಹಿಡಿದ. ಜಗಕ್ಕೆಲ್ಲಾ ಬೆಳಕನ್ನು ನೀಡಿದ “ಆಧುನಿಕ ಸರ್ಯನಂತಾದ “ಇಂದು ನಾವು ನೀವೆಲ್ಲಾ ರಾತ್ರಿ ಸಮಯದಲ್ಲಿ ಕೇವಲ 15 ನಿಮಿಷ ಕರೆಂಟ್ ಹೋದರೆ ಸಾಕು “ಅಯ್ಯೋ ಯಾವನೋ ಕರೆಂಟ್ ತೆಗೆದುಬಿಟ್ಟ”.ಎಂದು ಬೈದುಕೊಳ್ಳುವುದು ಸಹಜ. ಆದರೆ ಇಂತಹ ಬೆಳಕನ್ನು ಕೊಟ್ಟ ಆ ವ್ಯಕ್ತಿಯ ಹೆಸರೇ”ಥಾಮಸ್ ಆಲ್ವಾ ಎಡಿಸನ್”.
ಆವತ್ತಿನ ಸಮಾಜದಿಂದ, ಶಿಕ್ಷಕರಿಂದ ತಿರಸ್ಕೃತನಾದ ವ್ಯಕ್ತಿ, ಇಂದು ಪ್ರತಿಯೊಬ್ಬರ ಬಾಯಲ್ಲಿ ಕೇಳುವ ಕಾಂತೀಯ ಕಿರಣವಾಗಿ ಬಿಟ್ಟ. ಈ ಮೂಲಕ “ಸೋಲುಗಳಿಂದ ಪಾಠ ಕಲಿತ;ನೋವುಗಳಿಂದ ಬದುಕನ್ನು ಅರಿತ” ವಿಶ್ವವಿಖ್ಯಾತಿಯಾದ ಆದ್ದರಿಂದ ಸೋಲುಗಳಿಗೆ ನೋವುಗಳಿಗೆ ಅಂಜದೆ ಮುನ್ನುಗ್ಗಿ ನಿಮ್ಮ ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಿ……. @ಸಿದ್ದೇಶ್ ಸಿದ್ದನ ಮಠ