ಹೊಸ ಶಕೆ ನ್ಯೂಸ್ ,ಯಲಬುರ್ಗಾ : ಸಂತ. ಸೇವಾಲಾಲರ ಜೀವನ ಮತ್ತು ಸಂದೇಶಗಳು ಮನುಕುಲದ ಏಳಿಗೆಗೆ ಪೂರಕ. ಎಲ್ಲರೂ ತಮ್ಮ ಜೀವನದಲ್ಲಿ ಅವರ ವಿಚಾರ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಾಲೂಕ ತಹಶೀಲ್ದಾರ್ ಬಸವರಾಜ್ ತೆನ್ನಳ್ಳಿ ಹೇಳಿದರು.
ಪಟ್ಟಣದ ಬಂಡಿ ರಸ್ತೆಯ ಸಂತ ಸೇವಾಲಾಲ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಮಾನಾಡಿದ ಅವರು,ಸೇವಾಲಾಲ್ ಮಹಾರಾಜರು ನಮಗೆ ಹಲವು ಆದರ್ಶಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಪಾಲಿಸಬೇಕು. ಅನ್ಯ ಸಮುದಾಯಗಳ ಜತೆಗೂಡಿ ಬಾಳಲು ಹಿರಿಯರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಹಿರಿಯ ಮುಖಂಡರಾದ ಬಸಲಿಂಗಪ್ಪ ಭೂತೆ ಹಾಗೂ ವೀರಣ್ಣ ಹುಬ್ಬಳ್ಳಿ ಮಾತನಾಡಿ,ಸೇವಾಲಾಲ್ ಅವರು ಆದರ್ಶ ವ್ಯಕ್ತಿಯಾಗಿದ್ದು, ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ.ಸಂತ ಶ್ರೀ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ. ಬಂಜಾರ (ಲಂಬಾಣಿ)ಸಮುದಾಯದಲ್ಲಿ ಬಡವರೇ ಹೆಚ್ಚಾಗಿದ್ದು,ಇವರು ಶ್ರಮ ಜೀವಿಗಳು.ಸೇವಾಲಾಲರಂತ ಸತ್ಪುರುಷರ ಜೀವನ ಚರಿತ್ರೆಯನ್ನು ಈಗಿನ ಯುವ ಪೀಳಿಗೆಯು ಅರಿತು,ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಹಾಗೂ ಯುವ ಮುಖಂಡ ಈಶ್ವರ ಅಟಮಾಳಗಿ ಮಾತನಾಡಿ,ಬಂಜಾರ ಸಮುದಾಯ ಹಿಂದುಳಿದ ಸಮುದಾಯವಾಗಿದ್ದು, ಸಮಾಜ ಕಟ್ಟುವಲ್ಲಿ ಯುವಕರು ಎಲ್ಲರೂ ಒಗ್ಗಟ್ಟಾಗಿ ಸಮುದಾಯ ಬೆಳೆಸಬೇಕಾಗಿದೆ. ನಾವೆಲ್ಲರೂ ಸ್ವಾಭಿಮಾನದಿಂದ ಬದುಕಬೇಕಾಗಿದ್ದು, ಸ್ವಾಭಿಮಾನದಿಂದ ಜೀವನ ಸಾಗಿಸಬೇಕಾಗಿದೆ ಎಂದು ಹೇಳಿದರು. ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ವಿದ್ಯೆಯಿಂದ ವಂಚನೆ ಮಾಡದೇ ಅವರಿಗೆ ಶಿಕ್ಷ ಣ ನೀಡುವ ಮೂಲಕ ಅವರನ್ನೆ ಆಸ್ತಿಯನ್ನಾಗಿಸಿಕೊಳ್ಳಬೇಕು. ಸರಕಾರದ ನಾನಾ ಸೌಲಭ್ಯ ಸವಲತ್ತು ಪಡೆದು ಸದ್ಭಳಕೆ ಮಾಡಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ತಾಲೂಕ ಅಧ್ಯಕ್ಷ ಸೀನಪ್ಪ ನಾಯಕ, ಪಪಂ ಮುಖ್ಯಾಧಿಕಾರಿ ನಾಗೇಶ, ಹನುಮಗೌಡ ಪಾಟೀಲ್,ಸದಸ್ಯರಾದ ವಸಂತಕುಮಾರ ಭಾವಿಮನಿ,ಬಸಲಿಂಗಪ್ಪ ಕೊತ್ತಲ,ಹನಮಂತ ಭಜಂತ್ರಿ,ಪ್ರಮುಖರಾದ ಲೋಕಪ್ಪ ನಾಯಕ, ಶಿವನಗೌಡ ದಾನರೆಡ್ಡಿ,ಶರಣಪ್ಪ ಗಾಂಜಿ,ಯಲ್ಲಪ್ಪ ನಾಯಕ,ಮಲ್ಲು ಜಕ್ಕಲಿ,ಅಚ್ಚಪ್ಪ ನಾಯಕ,ವೆಂಕಟೇಶ ನಾಯಕ,ಪರುಶುರಾಮ ಚೌಹಾಣ್,ಹನಮಂತ ರಾಠೋಡ,ಶಿವು ರಾಠೋಡ,ಎಂ.ಎನ್.ಜನಾದ್ರಿ,ಮಂಜು ಲಮಾಣಿ,ಪರುಶುರಾಮ ನಾಯಕ್ ಸೇರಿದಂತೆ ಇತರರು ಇದ್ದರು.