Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ದೇಶ

ವಕ್ಫ್‌ (ತಿದ್ದುಪಡಿ) ಮಸೂದೆಯ ಜಂಟಿ ಸಮಿತಿಯ ವರದಿ ಮಂಡನೆ

 ಇದು ಪ್ರಜಾಪ್ರಭುತ್ವ ವಿರೋಧಿ -ಮಲ್ಲಿಕಾರ್ಜುನ ಖರ್ಗೆ

Hosashake News by Hosashake News
February 14, 2025
in ದೇಶ
0
ವಕ್ಫ್‌ (ತಿದ್ದುಪಡಿ) ಮಸೂದೆಯ ಜಂಟಿ ಸಮಿತಿಯ ವರದಿ ಮಂಡನೆ
Share on FacebookShare on Twitter

 

ನವದೆಹಲಿ (ಪಿಟಿಐ): ವಕ್ಫ್‌ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿಯ ವರದಿಯನ್ನು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲದ ನಡುವೆ ಗುರುವಾರ ಮಂಡಿಸಲಾಯಿತು.

ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾದ ಕಾರಣಕ್ಕೆ ಕಲಾಪವನ್ನು ಅಲ್ಪ ಅವಧಿಗೆ ಮುಂದೂಡಬೇಕಾಯಿತು.

ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷಗಳ ಇತರ ಕೆಲವು ಸದಸ್ಯರು, ಭಿನ್ನ ಅನಿಸಿಕೆಗಳನ್ನು ವರದಿಯಿಂದ ಅಳಿಸಲಾಗಿದೆ ಎಂದು ದೂರಿದರು. ಆದರೆ ಈ ಆರೋಪವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅಲ್ಲಗಳೆದರು.

ಸಮಿತಿಯ ಸದಸ್ಯೆ, ಬಿಜೆಪಿಯ ಮೇಧಾ ವಿ. ಕುಲಕರ್ಣಿ ಅವರು ವಕ್ಫ್‌ (ತಿದ್ದುಪಡಿ) ಮಸೂದೆ ಕುರಿತ ವರದಿಯನ್ನು ಮಂಡಿಸಿದರು. ವರದಿಯ ಮಂಡನೆ ಆಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಆರಂಭಿಸಿದರು.

ರಾಷ್ಟ್ರ‍ಪತಿ ದ್ರೌಪದಿ ಮುರ್ಮು ಅವರಿಂದ ಬಂದ ಸಂದೇಶವೊಂದನ್ನು ಸಭಾಪತಿ ಜಗದೀಪ್ ಧನಕರ್ ಅವರು ಓದಲು ಯತ್ನಿಸಿದಾಗಲೂ ಗದ್ದಲ ಮುಂದುವರಿದಿತ್ತು. ‘ರಾಷ್ಟ್ರಪತಿ ಅವರಿಗೆ ಅಗೌರವ ತೋರಬೇಡಿ’ ಎಂದು ಹೇಳಿದ ಧನಕರ್, ವಿರೋಧ ಪಕ್ಷಗಳ ಸದಸ್ಯರು ತಮ್ಮ ಆಸನದಲ್ಲಿ ಕುಳಿಕೊಳ್ಳಲು ಸೂಚಿಸುವಂತೆ ಖರ್ಗೆ ಅವರಿಗೆ ಹೇಳಿದರು. ಗದ್ದಲ ಮುಂದುವರಿದ ಪರಿಣಾಮವಾಗಿ ಸದನವನ್ನು ತುಸು ಹೊತ್ತು ಮುಂದೂಡಲಾಯಿತು.

ಕಲಾಪ ಮತ್ತೆ ಆರಂಭವಾದಾಗಲೂ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿಯಿತು. ಕೆಲವು ಸದಸ್ಯರು ಸಭಾಪತಿ ಎದುರಿನ ಅಂಗಳಕ್ಕೆ ಇಳಿದರು. ಸಮೀರುಲ್ ಇಸ್ಲಾಂ, ನದೀಮುಲ್ ಹಕ್ ಮತ್ತು ಎಂ. ಮೊಹಮದ್ ಅಬ್ದುಲ್ಲಾ ಅವರು ಸದನದಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಧನಕರ್ ಹೇಳಿದರು.

ಭಿನ್ನ ಅಭಿಪ್ರಾಯಗಳನ್ನು ವರದಿಯಿಂದ ತೆಗೆಯಲಾಗಿದೆ ಎಂದು ಡಿಎಂಕೆ ಸದಸ್ಯ ತಿರುಚಿ ಶಿವ ಮತ್ತು ಎಎಪಿ ಸದಸ್ಯ ಸಂಜಯ್ ಸಿಂಗ್ ಅವರೂ ಆಕ್ಷೇಪ ವ್ಯಕ್ತಪಡಿಸಿದರು.

ವರದಿಯಿಂದ ಯಾವ ಅಂಶವನ್ನೂ ಅಳಿಸಿಲ್ಲ ಎಂದು ರಿಜಿಜು ಉತ್ತರಿಸಿದರು. ಆದರೆ ತಾವು ದಾಖಲಿಸಿದ್ದ ಭಿನ್ನ ಅಭಿಪ್ರಾಯವನ್ನು ವರದಿಯಿಂದ ತೆಗೆಯಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಸೈಯದ್ ನಾಸಿರ್ ಹುಸೇನ್ ದೂರಿದರು.

ಇದು ನಕಲಿ ವರದಿ  : ವಿರೋಧ ಪಕ್ಷಗಳ ಸದಸ್ಯರು ನೀಡಿದ್ದ ಭಿನ್ನ ಅಭಿಪ್ರಾಯಗಳಿಗೆ ವರದಿಯಲ್ಲಿ ಕತ್ತರಿ ಹಾಕಲಾಗಿದೆ. ಬಹುಮತ ಇರುವ ಪಕ್ಷದ ಸದಸ್ಯರ ಅಭಿಪ್ರಾಯವನ್ನು ಮಾತ್ರ ಇರಿಸಿಕೊಳ್ಳುವುದು ಸರಿಯಲ್ಲ. ಇದು ಖಂಡನಾರ್ಹ, ಇದು ಪ್ರಜಾತಂತ್ರ ವಿರೋಧಿ. ಇದು ನಕಲಿ ವರದಿ. ಈ ವರದಿಯನ್ನು ಸಮಿತಿಗೆ ವಾಪಸ್ ಕಳುಹಿಸಬೇಕು. ಇಲ್ಲಿ ಸದಸ್ಯರು ವೈಯಕ್ತಿಕ ಕಾರಣಗಳಿಗೆ ಪ್ರತಿಭಟನೆ ನಡೆಸುತ್ತಿಲ್ಲ. ಒಂದು ಸಮುದಾಯಕ್ಕೆ ಅನ್ಯಾಯವಾಗಿದೆ. ಹೀಗಾಗಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.– ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ

ಅಧ್ಯಕ್ಷರಿಗೆ ಅಧಿಕಾರವಿದೆ  :ಸಮಿತಿಯ ಕುರಿತಾಗಿ ಆರೋಪಗಳನ್ನು ಹೊರಿಸುವಂತಹ ಕೆಲವು ಭಾಗಗಳನ್ನು ಮಾತ್ರ ತೆಗೆದುಹಾಕಲಾಗಿದೆ. ಸಮಿತಿಯ ಬಗ್ಗೆಯೇ ಆರೋಪ ಹೊರಿಸುವಂತಹ ಅಂಶಗಳು ಇದ್ದರೆ, ಅದು ಸರಿಯಲ್ಲ ಎಂದು ಅಧ್ಯಕ್ಷರಿಗೆ ಅನ್ನಿಸಿದರೆ, ಅಂತಹ ಅಂಶಗಳನ್ನು ತೆಗೆಯುವ ಅಧಿಕಾರವು ಅಧ್ಯಕ್ಷರಿಗೆ ಇದೆ. ಇದು ನಿಯಮಗಳಲ್ಲಿ ಉಲ್ಲೇಖವಾಗಿದೆ.– ಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ

ತಿದ್ದೋಲೆಯನ್ನು ಮಂಡಿಸಲಾಗಿದೆ ಎಂದಾದರೆ ಸಚಿವರೊಬ್ಬರು ಸದನವನ್ನು ಈ ಮೊದಲು ತಪ್ಪುದಾರಿಗೆ ಎಳೆದಿರುವುದು ಸಾಬೀತಾಗಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಹೇಳಿದರು.

*ವಿರೋಧ ಪಕ್ಷಗಳ ಸದಸ್ಯರು ನೀಡಿದ್ದ ಭಿನ್ನ ಅಭಿಪ್ರಾಯಗಳಿಗೆ ವರದಿಯಲ್ಲಿ ಕತ್ತರಿ ಹಾಕಲಾಗಿದೆ. ಇದು ಖಂಡನಾರ್ಹ, ಪ್ರಜಾಪ್ರಭುತ್ವ ವಿರೋಧಿ. ಇದು ನಕಲಿ ವರದಿ.:ಮಲ್ಲಿಕಾರ್ಜುನ ಖರ್ಗೆರಾಜ್ಯಸಭೆಯ ವಿರೋಧ ಪಕ್ಷದ ನಾಯಕರು

Previous Post

ಕೊಪ್ಪಳ ವಿಶ್ವವಿದ್ಯಾಲಯ ಮುಚ್ಚುವುದು  ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ :ನವೀನಕುಮಾರ ಗುಳಗಣ್ಣನವರ್

Next Post

ಕೊಪ್ಪಳ ಸಮೀಪ ಬಂಕಾಪುರ ಧಾಮದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಮತ್ತೊಂದು ತೋಳ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!