Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಕಾರ್ಖಾನೆಗಳಿಂದ ಭೂಮಿ, ನೀರು, ಗಾಳಿ, ಆಹಾರ ಮಾಲಿನ್ಯ ಎಂಎಲ್ಸಿ ಹೇಮಲತಾ ನಾಯಕ

ಬಲ್ಡೋಟಾ ಉಕ್ಕು ಪ್ಯಾಕ್ಟರಿ ಸ್ಥಾಪನೆ ಪಕ್ಷದಲ್ಲಿ ಚರ್ಚಿಸಿ ಮುಂದಿನ ಹೋರಾಟ -ಡಾ.ಬಸವರಾಜ ಕ್ಯಾವಟರ್

Hosashake News by Hosashake News
February 13, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ
0
ಕಾರ್ಖಾನೆಗಳಿಂದ ಭೂಮಿ, ನೀರು, ಗಾಳಿ, ಆಹಾರ ಮಾಲಿನ್ಯ ಎಂಎಲ್ಸಿ ಹೇಮಲತಾ ನಾಯಕ

oppo_0

Share on FacebookShare on Twitter

ಹೊಸಶಕೆ ನ್ಯೂಸ್-ಕೊಪ್ಪಳ : ಕೊಪ್ಪಳ ತಾಲೂಕಿನಲ್ಲಿ ಕಾರ್ಖಾನೆಗಳು ಬಿಡುವ ವಿಷ ಅನಿಲಗಳ ಬಗ್ಗೆ ಯೋಚಿಸಿದರೆ ನಮ್ಮ ಬದುಕು ದುಸ್ತರವಾಗಲಿದೆ. ಇಂತಹದರಲ್ಲಿ ಸರ್ಕಾರ ಖಾಸಗಿ ಬಲ್ಡೋಟಾ ಉಕ್ಕು ಕಾರ್ಖಾನೆ ಸ್ಥಾಪನೆಗೆ ಅನುಮೋದನೆ ನೀಡಿರುವುದು ತುಂಬಾ ಆತಂಕದ ಸಂಗತಿಯಾಗಿದ್ದು, ಇದನ್ನು ವಿರೋಧಿಸುವದಾಗಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ಗುರವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ, ಅಲ್ಲಾನಗರ, ಹಾಲವರ್ತಿ, ಕುಣಿಕೇರಿ, ಕುಣಿಕೇರಿ ತಾಂಡಾ ಲಾಚನಕೇರಿ, ಕರ್ಕಿಹಳ್ಳಿ ಹ್ಯಾಟಿ ಮುಂಡರಗಿ ಈ ಎಲ್ಲಾ ಗ್ರಾಮಗಳು, ಅಪಾಯ ಮಟ್ಟ ಮೀರಿ ಹೊಗಿದೆ. ಸುಮಾರು 202 ಕಾರ್ಖಾನೆಗಳಿಂದ ವಾಯುವ್ಯ ಮಾಲಿನ್ಯವಾಗಿದೆ ಎಂದು ದೂರಿದರು.

ತಾಲೂಕಿನ ರೈತರ ಜೀವನ ಹಾಳಾದರೂ ಮತ್ತೇ ಬಟ್ಟೋಟಾ ಸಮೂಹ ಸಂಸ್ಥೆ ನಗರಕ್ಕೆ ಹತ್ತಿರದಲ್ಲಿ ಉಕ್ಕಿನ ಕಾರ್ಖಾನೆ ತೆಗೆಯಲು ಸರ್ಕಾರದಿಂದ ಒಪ್ಪಿಗೆ ಪಡೆದಿದೆ. ಇದು ನಿಜಕ್ಕೂ ಕೊಪ್ಪಳ ಜನತೆ ಬಯದಲ್ಲಿದ್ದಾರೆ, ರೂ: 54/- ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 10.05 ದಶ ಲಕ್ಷ ಟನ್ ಉತ್ಪಾದನೆ ಸಾಮಾರ್ಥ್ಯದಿಂದ ಇಂಟಿಗ್ರೇಟೇಡ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ಮುಂದಿನ ಹಂತದ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದರು

ಕೊಪ್ಪಳ ಜಿಲ್ಲೆ ಜನರ ಸಾದಾಕ ಬಾದಕಗಳ ಬಗ್ಗೆ ಸಂಪೂರ್ಣವಾಗಿ ಯೋಚಿಸಿ ನಮ್ಮ ಭಾವನೆಗಳ ಬಗ್ಗೆ ಮುಖ್ಯಮಂತ್ರಿಗಳು,  ಕೇಂದ್ರ ಕೈಗಾರಿಕೆ ಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ,  ಸಚಿವರಾದ ಎಮ್ ಬಿ ಪಾಟೀಲ್ ಈ ಖಾಸಗಿ ಉಕ್ಕು ಕಂಪನಿ (ಬಲ್ನೋಟಾ ಉಕ್ಕು ಕಾರ್ಖಾನೆ) ಸ್ಥಾಪಿಸದಿರಲು ಅವರಲ್ಲಿ ಒತ್ತಾಯ ಮಾಡುವದಾಗಿ ತಿಳಿಸಿದರು. ಬಲ್ಡೋಟಾ ಸ್ಟೀಲ್ ಕಂಪನಿ ಮತ್ತು ಪರ್ವ ಲೀಮಿಟೇಡ್ ಇದರಿಂದ ಕರ್ನಾಟಕದಲ್ಲಿ ಉಕ್ಕು ಉತ್ಪಾದನೆ ಹೆಚ್ಚಾಗಲಿದೆ. ಉದ್ಯೋಗ ಸೃಷ್ಟಿಯಾಗಲಿದೆ. ಎಂದು ಸರ್ಕಾರ ಮತ್ತು ಕಂಪನಿ ಹೇಳುತ್ತಿದೆ. ಆದರೆ ಇದರಿಂದ ಜನರ ಜೀವನ ಆರೋಗ್ಯ, ಬೇಳೆ ಎಷ್ಟು ನಷ್ಟವಾಗಲಿದೆ ಎಂದು ಅಂದಾಜಿನಲ್ಲಿ ಹೇಳುವುದಾದರೇ, ಈಗಾಗಲೇ ಮಹಿಳೆಯರು, ಮಕ್ಕಳು, ರೈತರು ಅನಾರೋಗ್ಯ ಆರ್ಥಿಕ ನಷ್ಟ ನಿರಾಸೆ ಹೊಂದಿದ್ದಾರೆಂದು ಗ್ರಾಮಗಳಿಗೆ ಹೋಗಿ ನೋಡಿ ಆಗ ತಿಳಿಯುತ್ತದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ.ಬಸವರಾಜ ಕ್ಯಾವಟರ್, ನೀಲಕಂಠಯ್ಯ ಹಿರೇಮಠ, ವಾಣಿಶ್ರೀ ಮಠದ, ಹುಲಗಪ್ಪ ಮೇಟಿ ಇತರರು ಇದ್ದರು.

== ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಮಕ್ಕಳಿಗೆ ಸತತವಾಗಿ ಶೀತ, ನೆಗಡಿ, ಕೆಮ್ಮು, ಅಸ್ತಮ, ಟಿ,ಬಿ, ಬಂಜೆತನ ಈ ಎಲ್ಲಾ ಸಮಸ್ಯೆಗಳಿಂದ ಸುತ್ತಮುತ್ತ ಗ್ರಾಮಗಳು ಅನುಭವಿಸುತ್ತಿರುವ ಕಷ್ಟುಗಳು ಹೇಳ ತೀರದು. ಇಂತಹ ಪರೀಸ್ಥಿತಿಯಲ್ಲಿ ಮತ್ತೊಂದು ಕಂಪನಿಗೆ ಅಂಕಿತ ಸರ್ಕಾರ ಒಪ್ಪಿಗೆ ಸೂಚಿಸಿರುವುದು ತುಂಬಾ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಈ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದರು.

2006-07ರಲ್ಲಿ ಕೆ.ಐ.ಎ.ಡಿ.ಬಿ ಮೂಲಕ ರೈತರಿಂದ 1010 ಎಕರೆ ಭೂಮಿ ಸ್ವಾಧೀನ ಪಡೆದುಕೊಂಡಿದೆ. (ಎಮ್ ಎಸ್ ಪಿ.ಎಲ್) ಮುಂದಿನ 2011-12 ರಲ್ಲಿ ಕೆವಲ 100 ಎಕರೆ ಯಲ್ಲಿ ಕಾರ್ಖಾನೆ ಆರಂಭಿಸಿದೆ, ಅನೇಕ ವರ್ಷದಿಂದ ಭೂಮಿ ಖಾಲಿ ಬಿಟ್ಟಿದ್ದರಿಂದ ರೈತರು ಭೂಮಿಯನ್ನು ವಾಪಸ್ಸು ನೀಡುವಂತೆ ರೈತರು ಕೊರ್ಟಗೆ ಹೋಗಿದ್ದರು. ಆದರೆ ರೈತರ ಹೋರಾಟದಲ್ಲಿ ಸೊಲಾಗಿದೆ, ಭೂಮಿ ಕಾರ್ಖಾನೆ ಪಾಲಾಗಿದೆ, 900 ಎಕರೆ ಭೂಮಿಯಲ್ಲಿ ಕಾರ್ಖಾನೆ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ಭೂಮಿ, ನೀರು, ಗಾಳಿ, ಆಹಾರ ಮಾಲಿನ್ಯ ಆಗುತ್ತಿದೆ. : ಹೇಮಲತಾ ನಾಯಕ, ಎಂಎಲ್ಸಿ

Previous Post

ಕೊಪ್ಪಳದಲ್ಲಿ ಪ್ರಸ್ರವಣ 2025 – ರಾಷ್ಟ್ರೀಯ ಆಯುರ್ವೇದ ಸಮ್ಮೇಳನ 

Next Post

ಅಲ್ಪಸಂಖ್ಯಾತರ ಅರ್ಹ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯ: ಜಿಲ್ಲಾಧಿಕಾರಿ ನಲಿನ್ ಅತುಲ್

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!