Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ರಾಜ್ಯ

ರಾಜ್ಯದ ಪ್ರವಾಸೋದ್ಯಮ ನೀತಿಯಡಿ 28 ಪ್ರವಾಸೋದ್ಯಮ ಯೋಜನಾ ಪ್ರಸ್ತಾವಗಳಿಗೆ ಅನುಮೋದನೆ’ : ಸಚಿವ ಎಚ್.ಕೆ.ಪಾಟೀಲ

graochandan1 by graochandan1
February 5, 2025
in ರಾಜ್ಯ, ಸುದ್ದಿ
0
ರಾಜ್ಯದ ಪ್ರವಾಸೋದ್ಯಮ ನೀತಿಯಡಿ 28 ಪ್ರವಾಸೋದ್ಯಮ ಯೋಜನಾ ಪ್ರಸ್ತಾವಗಳಿಗೆ ಅನುಮೋದನೆ’ : ಸಚಿವ ಎಚ್.ಕೆ.ಪಾಟೀಲ
Share on FacebookShare on Twitter

*ರಾಜ್ಯದಲ್ಲಿ ಒಟ್ಟು 11 ರೋಪ್‌ವೇಗಳನ್ನು ನಿರ್ಮಿಸಲು ವ್ಯಾವಹಾರಿಕ ಸಲಹೆ ಹೊಣೆ ‘ರೈಟ್ಸ್’ ಸಂಸ್ಥೆಗೆ
ಬೆಂಗಳೂರು: ‘ರಾಜ್ಯದ ಪ್ರವಾಸೋದ್ಯಮ ನೀತಿಯಡಿ ಎರಡು ಮೆಗಾ ಸೇರಿ ಒಟ್ಟು 28 ಪ್ರವಾಸೋದ್ಯಮ
ಯೋಜನಾ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಉನ್ನತಮಟ್ಟದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘28 ಯೋಜನೆಗಳ ಪೈಕಿ ಒಂದಕ್ಕೆ ಮಾತ್ರ ಸ್ಥಳ ವೀಕ್ಷಣೆಯ ಷರತ್ತು ವಿಧಿಸಲಾಗಿದೆ. ಈ ಯೋಜನೆಗಳ ಮೂಲಕ ಒಟ್ಟು ₹793 ಕೋಟಿ ಬಂಡವಾಳ ಹೂಡಿಕೆ ಆಗಲಿದೆ. ನಾಲ್ಕು ಸಾವಿರ ನೇರ ಉದ್ಯೋಗಗಳು ಸೃಷ್ಟಿ ಆಗಲಿವೆ, ‘ಎರಡು ಮೆಗಾ ಯೋಜನೆಗಳಲ್ಲಿ ಹಂಪಿ ಬಳಿ 99 ವಸತಿ ಕೊಠಡಿಗಳನ್ನು ಹೊಂದಿದ ದೊಡ್ಡ ಹೋಟೆಲ್ ನಿರ್ಮಾ ಣವೂ ಸೇರಿದೆ. ಪೂರ್ಣ ಪ್ರಮಾಣದ ಬಂಡವಾಳ ಹೂಡುವ ಖಾಸಗಿ ಸಂಸ್ಥೆಗಳಿಗೆ ನೀತಿ ಪ್ರಕಾರ ಪ್ರೋತ್ಸಾಹ ಧನ ಮತ್ತಿತರ ಸವಲತ್ತುಗಳನ್ನು ಸರ್ಕಾರ ನೀಡಲಿದೆ’ ಎಂದರು.


‘ಉನ್ನತಮಟ್ಟದ ಸಮಿತಿಯು ಪ್ರಾಥಮಿಕ ತೀರುವಳಿ ಮತ್ತು ನೋಂದಣಿ ಪ್ರಸ್ತಾವಗಳಿಗೂ ಒಪ್ಪಿಗೆ ನೀಡಿದೆ. ಈ ಅರ್ಜಿಗಳು ಯಾವುದೇ ವರ್ಷದ್ದಾಗಿರಲಿ ಅನುಮತಿಯಂತೆ ಪ್ರವಾಸೋದ್ಯಮ ನೀತಿ ವ್ಯಾಪ್ತಿಗೆ ಒಳಪಡಲಿದ್ದು, ಪ್ರೋತ್ಸಾಹ ಧನ, ವಿನಾಯಿತಿ ಮತ್ತಿತರ ನೆರವು ಸಿಗಲಿದೆ’ ಎಂದು ಸಚಿವರು ಹೇಳಿದರು.
ವ್ಯಾವಹಾರಿಕ ಸಲಹೆ ಹೊಣೆ ‘ರೈಟ್ಸ್’ ಸಂಸ್ಥೆಗೆ: ‘ರಾಜ್ಯದಲ್ಲಿ ಒಟ್ಟು 11 ರೋಪ್‌ವೇಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಈ ಪೈಕಿ, ತುಮಕೂರು ಜಿಲ್ಲೆಯ ಮಧುಗಿರಿ, ಕೊಡಗು ಜಿಲ್ಲೆಯ ಮಲ್ಲಳ್ಳಿ ಫಾಲ್ಸ್ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಮೂರು ರೋಪ್‌ವೇ ಪ್ಯಾಕೇಜ್‌ಗಳಿಗೆ ವ್ಯಾವಹಾರಿಕ ಸಲಹೆಗಾರ ಹೊಣೆಯನ್ನು ‘ರೈಟ್ಸ್’ ಸಂಸ್ಥೆಗೆ ನೀಡಲಾಗಿದೆ’ ಎಂದು ಸಚಿವ ಪಾಟೀಲ ವಿವರಿಸಿದರು.


==‘ಬಜೆಟ್ ಹೋಟೆಲ್‌ಗಳಿಗೆ ₹5 ಕೋಟಿ ಬಂಡವಾಳ ಹೂಡಬೇಕಾಗುತ್ತದೆ. ಸರ್ಕಾರದಿಂದ ಶೇ 15ರಷ್ಟು ಅಥವಾ ಗರಿಷ್ಠ ₹2 ಕೋಟಿವರೆಗೆ ಸಹಾಯಧನ ಲಭಿಸಲಿದೆ. ಪ್ರೀಮಿಯಂ ಹೋಟೆಲ್‌ಗಳಿಗೆ ₹10 ಕೋಟಿ ಬಂಡವಾಳ ಹೂಡಿದರೆ ಸಹಾಯಧನದ ಮೊತ್ತ ಶೇ 15 ಅಥವಾ ಗರಿಷ್ಠ ₹5 ಕೋಟಿ ಲಭಿಸಲಿದೆ’ : ಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಸಚಿವರು==

Previous Post

ಬಸವಲಿಂಗೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ

Next Post

ಫೆ. 14 ರಂದು ಮೈಲಾರಲಿಂಗೇಶ್ವರ ಕಾರಣಿಕೋತ್ಸವ

graochandan1

graochandan1

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!