Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಕಲೆ-ಸಾಹಿತ್ಯ-ಸಂಸ್ಕೃತಿ

ಕನ್ನಡ ಭಾಷೆಗೆ ಇರುವ ಶಕ್ತಿ ಅಗಾದವಾದದ್ದು:ನಾಡೋಜ ಕುಂ,ವೀರಭದ್ರಪ್ಪ

ಯುವ ಸಾಹಿತಿ ಎಂ,ಡಿ,ಅಲಿರಾಜ್ ಅವರ ಕಾರ್ಮೋಡ ಕೃತಿ ಲೋಕಾರ್ಪಣೆ 

Hosashake News by Hosashake News
May 27, 2025
in ಕಲೆ-ಸಾಹಿತ್ಯ-ಸಂಸ್ಕೃತಿ, ಜಿಲ್ಲೆ, ಪ್ರಾದೇಶಿಕ, ರಾಜ್ಯ, ಸಾಮಾಜಿಕ, ಸುದ್ದಿ
0
ಕನ್ನಡ ಭಾಷೆಗೆ ಇರುವ ಶಕ್ತಿ ಅಗಾದವಾದದ್ದು:ನಾಡೋಜ ಕುಂ,ವೀರಭದ್ರಪ್ಪ
Share on FacebookShare on Twitter

*ಕಲ್ಯಾಣ ಕರ್ನಾಟಕ ಸಾಹಿತ್ಯದಲ್ಲಿ ಶ್ರೀಮಂತಿಕೆ -ಪ್ರೋ.ಬಿ.ಕೆ.ರವಿ

ಹೊಸಶಕೆ ನ್ಯೂಸ್-ಯಲಬುರ್ಗಾ: 12ನೇ ಶತಮಾನದಲ್ಲಿ ಭಾರತಕ್ಕೆ ವಲಸೆ ಬಂದಂತಹ ಸೂಪಿ ಸಂತರು ಇಂದು ಅಪ್ಪಟ ಭಾರತೀಯರಾಗಿದ್ದಾರೆ ಎಂದು ಸಾಹಿತಿ,ನಾಡೋಜ ಕುಂ,ವೀರಭದ್ರಪ್ಪ ಹೇಳಿದರು

ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಸೋಮವಾರ ದಂದು  ಆರ್,ಸಂಕನೂರ ಏಜುಕೇಷನ್ ಪೌಂಡೇಷನ್ ಮತ್ತು ರೂರಲ್ ಡೆವಲಪಮೆಂಟ್ ಟ್ರಸ್ಟ್ (ರಿ) ಯಲಬುರ್ಗಾ,ರಾಜ ಪ್ರಕಾಶನ ಯಲಬುರ್ಗಾ ಆಯೋಜಿಸಿದ್ದ ಎಂ,ಡಿ,ಅಲಿರಾಜ್ ಅವರ ಕಾರ್ಮೋಡ ಕೃತಿ ಲೋಕಾರ್ಪಣೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯುವ ಸಾಹಿತಿ ಯಲಬುರ್ಗಾದ ಅಲಿರಾಜ್ ಅವರು ಇಂದು ಅತ್ಯಂತ ಸುಂದರವಾಗಿ ಕಾರ್ಮೋಡ ಕೃತಿಯನ್ನು ರಚಿಸಿದ್ದಾರೆ  ಯುವ ಸಾಹಿತಿಗಳು ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಲು ಅವರಿಗೆ ಪ್ರೋತ್ಸಾಹ ನೀಡಬೇಕು, ಗ್ರಾಮೀಣ ಭಾಗದಲ್ಲಿರುವ ಯವಕರು ಕನ್ನಡ ನಾಡಿನ ಅನೇಕ ಸಾಹಿತ್ಯವನ್ನು ಓದುವ ಮೂಲಕ ಕನ್ನಡ ಉಳಿಸಿ ಬೆಳಸುವವದರತ್ತ ಗಮನನೀಡಬೇಕೆಂದರು. ನಾವು ಬೇಂದ್ರೆಯವರು,ಕುವೆಂಪು, ರನ್ನ,ಪಂಪ ಸೇರಿದಂತೆ ಅನೇಕ ಮಹನೀಯರ ಕವಿತೆಗಳನ್ನ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಹಾಗೂ ಓದುವ ಹವ್ಯಾಸ ಕಡಿಮೆಯಾಗಿರುವದು ನೋವಿನ ಸಂಗತಿಯಾಗಿದೆ, ಮೊಬೈಲ್ ಬಂದಮೇಲೆ ಎಲ್ಲರ ಗಮನ ಅದರ ಮೇಲೆ ಇರುವದರಿಂದ ಯಾರು ಪುಸ್ತಕಗಳನ್ನು ಓದುತ್ತಿಲ್ಲಾ, ಪುಸ್ತಕಗಳನ್ನು ಓದುವದರಿಂದ ನಮಗೆ ಜ್ಞಾನ ಹಾಗೂ ಇತಿಹಾಸದ ಪರಿಚಯವಾಗುತ್ತದೆ ಎಂದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಬಿ,ಕೆ,ರವಿಯವರು ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತಿಗಳು, ಕವಿಗಳು ಹೆಚ್ಚಾಗಿ ಕಂಡು ಬರುತ್ತಿರುವದು ಸಂತಸದ ವಿಷಯವಾಗಿದೆ ಹಾಗೂ ನಾವು ಒಮ್ಮೆ ದಸರಾ ಕವಿಗೋಷ್ಠಿ ಏರ್ಪಡಿಸಿದ್ದು ಅದರಲ್ಲಿ 120 ಜನ ಕವಿಗಳು ಭಾಗವಹಿಸಿದ್ದು ಅತ್ಯಂತ ಖುಷಿಯ ವಿಷಯವಾಗಿದೆ.

ಅಕ್ಷರ ಹಾಗೂ ಅವಕಾಶ ವಂಚಿತ ಸಮುದಾಯದಿಂದ ಬಂದವರು ನಾವು ನಮ್ಮ ಭಾವನೆಗಳನ್ನ ನಮ್ಮ ವಿಚಾರಗಳನ್ನ ನಾವೇ ಬರೆಯಬೇಕಾಗಿದೆ ಡಾ.ಬಾಬಾ ಸಾಹೇಬರು ನೀಡಿದಂತಹ ಸಂವಿಧಾನದಿಂದ ನಾವು ಇಂದು ಜೀವನವನ್ನು ಸಾಗಿಸಲು ಸಾದ್ಯವಾಗಿದೆ ಅವರೆ ನಮಗೆ ಪ್ರೇರಣೆಯಾಗಿದ್ದಾರೆ ಎಂದರು,

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ರಾಜ ಪುರಸ್ಕಾರ ಪ್ರಶಸ್ತಿಯನ್ನು  ಶಿಕ್ಷಣ ಕ್ಷೇತ್ರ ಕೆ,ಎನ್,ರೇಣುಕಾ,ಕರ್ನಾಟಕ ರಾಜ್ಯದ ಪ್ರಥಮ ತೃತೀಯಲಿಂಗಿ ಅತಿಥಿ ಉಪನ್ಯಾಸಕರು ಬಳ್ಳಾರಿ, ಸಾಹಿತ್ಯ ಕ್ಷೇತ್ರ ಮುನವ್ವರ್ ಜೋಗಿಬೆಟ್ಟು,ಕಥೆಗಾರರು, ಸಾಮಾಜಿಕ ಕ್ಷೇತ್ರ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ ಸಿಂದನೂರ ಇವರಿಗೆ ನೀಡಿ ಗೌರವಿಸಲಾಯಿತು. ಬಳಿಕ ಅನೇಕ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನ ವಾಚಿಸಿದರು.

ಅಂಕಣಕಾರರಾದ ತೇಜವತಿ ಎಚ್,ಡಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಸಾಹಿತಿ ಅಲ್ಲಮಪ್ರಭು ಬೆಟದೂರ, ಪತ್ರಕರ್ತ ಹಾಗೂ ಸಾಹಿತಿ ಸಿರಾಜ್ ಬಿಸರಳ್ಳಿ, ಸಾಹಿತಿ ಅಕ್ಬರ್‌ ಕಾಲಿಮಿರ್ಚಿ, ಕಾರ್ಮೋಡ ಕೃತಿ ರಚನೆಕಾರ ಸಾಹಿತಿ  ಎಂ ಡಿ ಅಲಿ ಇತರರು ಇದ್ದರು.

Tags: Aliraj's Carmoda work lossDHosashake Yelburga Koppal newsKoppal The power of the power of Kannada language is the sake of: Nadajaj KumKoppal Young Sahiti MVeerabhadraYelburga koppal karnataka newsYelburga ಕನ್ನಡ ಭಾಷೆಗೆ ಇರುವ ಶಕ್ತಿ ಅಗಾದವಾದದ್ದು :ನಾಡೋಜ ಕುಂಅಲಿರಾಜ್ ಅವರ ಕಾರ್ಮೋಡ ಕೃತಿ ಲೋಕಾರ್ಪಣೆಡಿಯಲಬುರ್ಗಾ ಯುವ ಸಾಹಿತಿ ಎಂವೀರಭದ್ರಪ್ಪ
Previous Post

ಪ್ರವಾಹ, ಅತಿವೃಷ್ಟಿಯಿಂದ ಆಗುವ ಹಾನಿ ತಪ್ಪಿಸಲು ಕ್ರಮ ವಹಿಸಬೇಕು:ಸಚಿವ ಸಂತೋಷ ಎಸ್. ಲಾಡ್

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!