ಹೊಸಶಕೆ ನ್ಯೂಸ್-ಯಲಬುರ್ಗಾ::: ಆರ್. ಸಂಕನೂರು ಏಜುಕೇಷನ್ ಫೌಂಡೇಷನ್ & ರೂರಲ್ ಡೆವಲಪ್ಮೆಂಟ್ ಟ್ರಸ್ಟ್ (ರಿ) ಯಲಬುರ್ಗಾ ಹಾಗೂ ರಾಜ ಪ್ರಕಾಶನ ಸಹಯೋಗದಲ್ಲಿ ಬಹುಮುಖ ಯುವ ಪ್ರತಿಭೆ, ಕವಿ, ಉಪನ್ಯಾಸಕ ಎಂ.ಡಿ. ಅಲಿರಾಜ್ ಅವರ ಕಾರ್ಮೋಡ ಕೃತಿ ಬಿಡುಗಡೆಯಾಗಲಿದೆ.
ಪ್ರಸಿದ್ಧ ಕವಿ, ಕತೆಗಾರ, ಕಾದಂಬರಿಕಾರರು, ನಾಡೋಜ ಕುಂ.ವೀರಭದ್ರಪ್ಪ ರವರು “ಕಾರ್ಮೋಡ” ಕೃತಿಯನ್ನು ಯಲಬುರ್ಗಾ ದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಮೇ.26 ರಂದು ಜರುಗುವ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಕಾರ್ಮೋಡ ಕೃತಿ ಬಿಡುಗಡೆ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ, ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತ ಕವಿಗಳು ತಮ್ಮ ಸ್ವರಚಿತ ಒಂದು ಕವಿತೆಯನ್ನು ಮೇ.15ರೊಳಗೆ ವಿಳಾಸದೊಂದಿಗೆ 8147631303 ಈ ನಂಬರ್ ಗೆ ಕಳುಹಿಸಬೇಕು. ಆಯ್ಕೆಯಾದ ಕವಿತೆಯ ಕವಿಗೆ ಪುಸ್ತಕ ಬಿಡುಗಡೆ ವೇದಿಕೆ ಮೇಲೆ ಕವಿತೆ ವಾಚಿಸಲು ಅನುಮತಿಸಲಾಗುವುದು ಮತ್ತು ಸಾಮಾಜಿಕ, ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ “ರಾಜ ಪುರಸ್ಕಾರ” ನೀಡಿ ಗೌರವಿಸಲಾಗುವುದು
ಪುಸ್ತಕ ಬಿಡುಗಡೆ ದಿ 26 ಮೇ, 2025 ಬೆಳಿಗ್ಗೆ : 10.30 ಗಂಟೆಗೆ ಪಟ್ಬಣದ ಬುದ್ಧ ಬಸವ ಅಂಬೇಡ್ಕರ ಭವನ ದಲ್ಲಿ ನಡೆಯಲಿದ್ದು, ಸರ್ವರಿಗೂ ಕಾರ್ಯಕ್ರಮಕ್ಕೆ ಆಮಂತ್ರಣವಿದ್ದು, ಬನ್ನಿ ಪಾಲ್ಗೊಂಡು ಯಶಸ್ವಿಗೊಳಿಸಲು ಹಾಗೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಸಂಘಟಿಕರು ಕೋರಿದ್ದಾರೆ