Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ದೇಶ

ವಕ್ಫ್ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಕೊಪ್ಪಳದಲ್ಲಿ ‌ ಬೃಹತ್ ಪ್ರತಿಭಟನೆ, ಸಮಾವೇಶ

ಸಂವಿಧಾನ ವಿರೋಧಿ ಕಾನೂನು ರದ್ದತಿಗೆ ಒಕ್ಕೂರಲಿನ ಆಗ್ರಹ

Hosashake News by Hosashake News
May 3, 2025
in ದೇಶ, ಪ್ರಾದೇಶಿಕ, ರಾಜಕೀಯ, ರಾಜ್ಯ, ಸಾಮಾಜಿಕ, ಸುದ್ದಿ
0
ವಕ್ಫ್ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಕೊಪ್ಪಳದಲ್ಲಿ ‌ ಬೃಹತ್ ಪ್ರತಿಭಟನೆ, ಸಮಾವೇಶ
Share on FacebookShare on Twitter

*ಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ಮೆರವಣಿಗೆ

ಹೊಸಶಕೆ ನ್ಯೂಸ್-ಕೊಪ್ಪಳ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ  ವಿರೋಧಿಸಿ ಹಾಗೂ ಇದನ್ನು ವಾಪಸ್ ಪಡೆಯಲು ಆಗ್ರಹಿಸಿ ಕೊಪ್ಪಳ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಚಳುವಳಿ ಹಾಗೂ ಸಮಾವೇಶ ನಡೆಸಲಾಯಿತು.

ಸಾವಿರಾರು ಸಂಖ್ಯೆಯ  ‌ಮುಸ್ಲಿಮ್ ಹೋರಾಟದಲ್ಲಿ ಕಾಂಗ್ರೆಸ್ ನ ಶಾಸಕರು, ಸಂಸದರು, ಇತರ ಜನಪ್ರತಿನಿಧಿಗಳು ಮತ್ತು ಪ್ರಗತಿಪರ ಸಂಘಟನೆಗಳು, ವಿವಿಧ ಸಮಾಜದ ಸಮುದಾಯದವರು ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿ, ಮುಸ್ಲಿಮ್ ಸಮುದಾಯಕ್ಕೆ ಅಪಾಯಕಾರಿ ಹಾಗೂ ಸಂವಿಧಾನ ವಿರೋಧಿ ಕಾನೂನು ಜಾರಿ ತಡೆಗೆ ಒತ್ತಾಯಿಸಿದರು.

ಗಡಿಯಾರ ಕಂಬದಿಂದ ಅಶೋಕ ವೃತ್ತದ ತನಕ ನಡೆದ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದವರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಸೇರಿದ್ದ ಯುವಕರು ಕೇಂದ್ರದ ನಡೆಯನ್ನು ಬಲವಾಗಿ ಖಂಡಿಸಿ, ವಕ್ಪ್ ಕಾಯ್ದೆ ತಿದ್ದುಪಡಿಯನ್ನು ತಕ್ಷಣ ಹಿಂದಕ್ಕೆ ಪಡೆದುಕೊಳ್ಳುವುಂತೆ ಹಾಗೂ ಮುಸ್ಲಿಮರ ಭಾವನೆಗಳಿಗೆ ದಕ್ಕೆ ಆಗುವುದನ್ನು ತಡೆಗಟ್ಟಲು ಆಗ್ರಹಿಸಿದರು.

ಅಶೋಕ ವೃತ್ತದ ಬಳಿ ನಡೆದ ಸಮಾವೇಶದಲ್ಲಿ ನಮ್ಮ ಆಸ್ತಿ ಉಳಿಸಿಕೊಳ್ಳಲು ದೇಶದಾದ್ಯಂತ ಹೋರಾಟ ಮಾಡುತ್ತಿದ್ದೇವೆ. ವಕ್ಫ್‌ ಕಾಯ್ದೆ ಲೋಪದೋಷಗಳಿಂದ ಕೂಡಿದೆ. ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರಿಗೂ ಅವಕಾಶ ಕೊಡುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಇದು ಸಂವಿಧಾನದ ವಿರೋಧಿ ನಡೆಯಾಗಿದೆ, ನಮ್ಮ ಆಸ್ತಿ ಲೂಟಿಗೆ ಬಿಜೆಪಿ ಸಂಚು ಮಾಡಿದೆ. ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುವವರೆಗೂ  ಹೋರಾಟ ನಿರಂತರವಾಗಿ ‌ಇರುತ್ತದೆ ಎಂದು ಸಮಾಜದ ಮುಖಂಡರು ಹೇಳಿದರು.

ಮುಸ್ಲಿಂ ಧರ್ಮಗುರು ಹಾಗೂ ಯುಸೋಪಿಯ ಮಸೀದಿಯ ಖತೀಬ್ ಇಮಾಮ ಮೌಲಾನ ಮುಪ್ತಿ ಮೊಹಮ್ಮದ್ ನಜೀರ್ ಅಹಮದ ಖಾದ್ರಿ ವ ತಸ್ಕಿನಿ ಮಾತನಾಡಿ, ಸಂವಿಧಾನದ ಮೂಲಭೂತ ಅಂಶಗಳ ವಿರುದ್ಧವಾಗಿ ಮುಸ್ಲಿಮರ ನ್ಯಾಯಯುತವಾದ ಆಸ್ತಿಗಳಾದ ಮಸ್ಟಿದ್, ದರ್ಗಾ, ಈದ್ಗಾ, ಖಬ್ರಸ್ಥಾನಗಳಿಗೆ ದಕ್ಕೆ ಮತ್ತು ಮುಸ್ಲಿಂರ ಭಾವನೆಗಳಿಗೆ ಘಾಷಿಯನ್ನುಂಟು ಮಾಡುವ ವಕ್ಸ್ ತಿದ್ದುಪಡಿ ಕಾಯಿದೆ 2025  ಯನ್ನು ಜಾರಿ ಮಾಡಿರವ ಕ್ರಮವು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಕಸಿದುಕೊಳ್ಳುವದಾಗಿದೆ ಇದನ್ನು ನಾವು ಬಲವಾಗಿ ಖಂಡಿಸಿ, ಇದರ ವಿರುದ್ಧ ಇನ್ನೂ ಗಟ್ಟಿ ಮತ್ತು ಬಲಿಷ್ಠವಾದ ಚಳುವಳಿ ಅನಿವಾರ್ಯ ಎಂದರು

==ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಕೆಂದ್ರ ಸರ್ಕಾರವು 2014 ರಿಂದ ಸತತವಾಗಿ ಮುಸ್ಲಿಮರಿಗೆ ತೊಂದರೆ ನೀಡಲು ಮತ್ತು ಮುಸ್ಲಿಮರ ಸಂವಿಧಾನಾತ್ಮಕವಾದ ಹಕ್ಕುಗಳನ್ನು ನಿರ್ನಾಮ ಮಾಡಲು ಸಂವಿಧಾನದ ಮೂಲಭೂತ ಹಕ್ಕುಗಳು ವಿರುದ್ಧವಾಗಿ ಹಲವಾರು ಕಾನೂನುಗಳನ್ನು ಅನ್ಯಾಯವಾಗಿ ಜಾರಿ ಮಾಡಿದೆ ಮತ್ತು ಪ್ರಸ್ತುತ ಜಾರಿ ಮಾಡಿದ ವಕ್ಸ್ ತಿದ್ದುಪಡಿ ಕಾಯಿದೆಯು ಸಂವಿಧಾನ ವಿರೋಧಿಯಾಗಿದೆ ಇದನ್ನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು. ==

==ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಭ್ರಷ್ಟಾಚಾರ ಕಾನೂನು ಬಾಹಿರ ಅಕ್ರಮಗಳ ನಿಗ್ರಹದಂತ ಧಾರ್ಮಿಕ ವ್ಯವಹಾರಗಳಿಗೆ ಸಂಬಂಧಪಡದ ವಿಷಯಗಳಲ್ಲಿ ಮಾತ್ರ ಅಸ್ಥಿತ್ವದಲ್ಲಿರುವ ಕಾನೂನಿನ್ವಯ ಸರ್ಕಾರ ಮಧ್ಯ ಪ್ರವೇಶ ಮಾಡಬಹುದು. ಒಂದು ವೇಳೆ ಮಧ್ಯ ಪ್ರವೇಶ ಮಾಡಿದರೂ ಆ ಸಂಸ್ಥೆಗಳ ಇತರ ಧಾರ್ಮಿಕ ವಿಷಯಗಳಲ್ಲಿ ಮೂಗು ತೂರಿಸುವಂತಿಲ್ಲ. ಆದರೆ ಹೊಸ ಕಾಯಿದೆ ಪ್ರಕಾರ ಮುಸ್ಲಿಮರಿಂದ ವಕ್ಸ್ ಮತ್ತು ವಕ್ಸ್ ನಿರ್ವಹಣೆಯನ್ನು ಕಸಿಯುವ ಕಾಯಿದೆ ಇದಾಗಿದೆ, ಕೇಂದ್ರ ಸರ್ಕಾರವು ತಕ್ಷಣ ವಕ್ಪ್ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಲು ಒತ್ತಾಯಿಸಿದರು.==

==ಮಾಜಿ ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಯಮನೂರಪ್ಪ ನಾಯಕ್, ಡಿ. ಹೆಚ್ ಪೂಜಾರ ಇತರರು ಮಾತನಾಡಿ, ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರವು ಮುಸ್ಲಿಂರನ್ನು ಗುರುಯಾಗಿರಿಸಿಕೊಂಡು ಧಮನೀಯಕ್ರಮಗಳನ್ನು ಕೈಗೊಂಡಿರುವುದು ಅತ್ಯಂತ ಖಂಡನೀಯವಾದುದ್ದು, ಇಂತಹ ಕ್ರಮಗಳು ದೇಶವಾಸಿಗಳ ಭಾವನೆಗಳಿಗೆ ಮಾತ್ರವಲ್ಲ, ಸಂವಿಧಾನದ ಹಕ್ಕು ಕಸಿದುಕೊಳ್ಳುವ ಸರ್ವಾಧಿಕಾರಿ ಧೋರಣೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ, ಸಂವಿಧಾನ ಹಾಗೂ ಅದರ ಹಕ್ಕುಗಳನ್ನು ಕಾಪಾಡಿಕೊಳ್ಳಲು ನಡೆಸಿರುವ  ಹೋರಾಟ ಮುಂದೆ ಯಶಸ್ಸು ಕಾಣಲಿದೆ ಎಂದರು.

==ವಕ್ಸ್ ಆಸ್ತಿ ಅಂದರೆ ದಾನಿಗಳು ಮುಸ್ಲಿಮ್ ಸಮುದಾಯದ ಸಾಮೂಹಿಕ ಕೆಲಸಗಳಿಗೆ ದಾನ ಮಾಡಿದ ಆಸ್ತಿಗಳು ಸದರಿ ಆಸ್ತಿಗಳನ್ನು ಯಾರು ದುರುಪಯೋಗ ಮಾಡಬಾರದು ಎಂದು ಸರ್ಕಾರದ ಅಡಿಯಲ್ಲಿ ಬರುವ ವಕ್ಸ್ ಮಂಡಳಿಯಲ್ಲಿ ನೊಂದಣಿ ಮಾಡಲಾಗುತ್ತದೆ ಮತ್ತು ಅದರ ನಿರ್ವಹಣೆಯನ್ನು ಮುಸ್ಲಿಮರೆ ಇಸ್ಲಾಂ ಧರ್ಮದ ಆಚರಣೆಗಳ ಅನುಗುಣವಾಗಿ ಮಾಡುತ್ತಾರೆ ಇದು ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಮೂಲಭೂತ ಹಕ್ಕು ಸಂವಿಧಾನದ ಆರ್ಟಿಕಲ್ 26 ರ ಪ್ರಕಾರ ಭಾರತದ ಯಾವುದೇ ಧರ್ಮೀಯರು ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹಾಗೂ ದತ್ತಿದಾನಗನ್ನು ಮಾಡಲು ತಮ್ಮದೇ ಆದ ಸಂಸ್ಥೆಗಳನ್ನು ರಚಿಸಿಕೊಂಡು ನಿರ್ವಹಣೆ ಮಾಡಿಕೊಳ್ಳಬಹುದು ಎಂದರು

====ಮೇಲ್ನೋಟಕ್ಕೆ ಸೆಕ್ಯುಲಾರ್ ಕ್ರಮವೆಂದು ಕಾಣುವ ಈ ತಿದ್ದುಪಡಿಗಳು ಅನ್ಯಾಕ್ರಮಣ ದುರುದ್ದೇಶವನ್ನೇ ಹೊಂದಿರುವುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದ ಕೋಮುವಾದಿ ಪಕ್ಷಪಾತ ಮತ್ತು ತಾರತಮ್ಯ ಎದ್ದು ಕಾಣುತ್ತದೆ. ಸ್ವಾತಂತ್ರ್ಯಾ ನಂತರದಲ್ಲಿ 1954 ರಲ್ಲಿ ವಕ್ಸ್ ಕಾಯಿದೆಯೊಂದು ಜಾರಿಯಾಯಿತು. ಅದಾದ ನಂತರದಲ್ಲಿ ಪ್ರಧಾನವಾಗಿ 1995 ರಲ್ಲಿ ಒಂದು ಸಮಗ್ರವಾದ ವಕ್ಸ್ ಕಾಯಿದೆ ಜಾರಿಯಾಯಿತು. ಇದು ಪ್ರಧಾನ ಕಾಯಿದೆಯಾಗಿದ್ದು ಮೋದಿ ಸರ್ಕಾರ ಈ ಕಾಯಿದೆಗೆ ಅಮೂಲಾಗ್ರವಾದ ತಿದ್ದುಪಡಿಯನ್ನು ತಂದಿದೆ ಎಂದು ನಗರಸಭೆ ಅಧ್ಯಕ್ಷ ಅಮ್ಜೆದ್ ಪಟೇಲ್ ಹೇಳಿದರು.==ತಿಭಟನಾ ಮೆರವಣಿಗೆ ಹಾಗೂ ಸಮಾವೇಶದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಅಂಜುಮನ್ ಕಮೀಟಿ ಅಧ್ಯಕ್ಷರಾದ ಎಂ.ಡಿ.ಆಸಿಫ್ ಕರ್ಕಿಹಳ್ಳಿ, ಮುಖಂಡರಾದ ಕಾಟನ್ ಪಾಶಾ, ನಗರಸಭೆ ಸದಸ್ಯರಾದ ರಾಜಶೇಖರ್ ಆಡೂರು, ರಮೇಶ ಗಿಣಿಗೇರಿ, ಯುವ ನಾಯಕರಾದ ಕೆ ಸೋಮಶೇಖರ ಹಿಟ್ನಾಳ, ಮಾನವಿ ಪಾಶಾ, ಪೀರಾ ಹುಸೇನ್‌ ಹೊಸಹಳ್ಳಿ, ಆಸೀಫ್ ಅಲಿ, ಸಲೀಂ ಮಂಡಲಗೇರಿ, ಸಲಿಂ ಗೊಂಡಬಾಳ, ಕೆ.ಎಂ. ಸಯ್ಯದ್, ಶರಣು ಗಡ್ಡಿ, ಮಂಜುನಾಥ ಜಿ. ಗೊಂಡಬಾಳ, ಆಸೀಪ್ ಖಾನ, ಅಬ್ದುಲ್ ಅಜೀಜ್ ಮಾನ್ವಿಕರ್, ಪ್ರಕೃದ್ದೀನ್ ನದಾಪ್, ಸೈಯದ್ ನಾಸೀರ ಕಂಠಿ, ಅಜೀಂ ಅತ್ತಾರ, ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಮುಖಂಡರು ಹಾಗೂ ಮೌಲ್ವಿಗಳು ಹಾಗೂ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು

Tags: *ಸಂವಿಧಾನ ವಿರೋಧಿ ಕಾನೂನು ರದ್ದತಿಗೆ ಒಕ್ಕೂರಲಿನ ಆಗ್ರಹA united demand for the repeal of unconstitutional lawsconvention in Koppal against amendment to Waqf ActMarch led by All India Muslim Personal Law Boardprotestಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿ ಕೊಪ್ಪಳ ವತಿಯಿಂದ ಹೋರಾಟವಕ್ಫ್ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆಸಮಾವೇಶ
Previous Post

ಹೊಸಶಕೆ ದಿನಪತ್ರಿಕೆ

Next Post

ಹೊಸಶಕೆ ದಿನಪತ್ರಿಕೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!