Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಭತ್ತದ ಬೆಳೆ ಹಾನಿ : ಬಿಜೆಪಿ ಮುಖಂಡರ ಭೇಟಿ, ಪರಿಹಾರಕ್ಕೆ ಒತ್ತಾಯ

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸ್ಗೂರ ನೇತೃತ್ವದಲ್ಲಿ ಕಾರಟಗಿ ತಾಲ್ಲೂಕಿನ ರೈತರೊಂದಿಗೆ ಚರ್ಚೆ

Hosashake News by Hosashake News
April 13, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ, ಸುದ್ದಿ
0
ಭತ್ತದ ಬೆಳೆ ಹಾನಿ : ಬಿಜೆಪಿ ಮುಖಂಡರ ಭೇಟಿ, ಪರಿಹಾರಕ್ಕೆ ಒತ್ತಾಯ
Share on FacebookShare on Twitter

ಹೊಸಶಕೆ ನ್ಯೂಸ್ -ಕಾರಟಗಿ: ಆಲಿಕಲ್ಲು  ಮಳೆಗೆ ಭತ್ತದ ಬೆಳೆ ಹಾನಿಯಾದ ತಾಲ್ಲೂಕಿನ ತಾಲ್ಲೂಕಿನ ಚಳ್ಳೂರಕ್ಯಾಂಪ್‍ನಿಂದ ಬೆಳೆ ವೀಕ್ಷಣೆ ಆರಂಭಿಸಿದ ತಂಡವು ಚಳ್ಳೂರು, ಹಗೇದಾಳ, ಸೋಮನಾಳ, ಸಿಂಗನಾಳ, ತೊಂಡಿಹಾಳ, 28ನೇ ಕಾಲುವೆ, ಹಣವಾಳ ಇತರಡೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ದಢೇಸೂಗೂರ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ್‌ ಕ್ಯಾವಟರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಭೇಟಿ ನೀಡಿ ಹಾನಿಗೀಡಾದ ಭತ್ತದ ಬೆಳೆಯನ್ನು ವೀಕ್ಷಿಸಿ, ರೈತರೊಂದಿಗೆ ಚರ್ಚಿಸಿದರು.

ಆಲಿಕಲ್ಲು ಮಳೆಯಿಂದ ಭತ್ತದ ಬೆಳೆಗೆ ಆಗಿರುವ ನಷ್ಟದ ಕುರಿತು ವಿವರಿಸುತ್ತಾ ಕಣ್ಣೀರು ಹಾಕಿದ ಅನೇಕ ರೈತರು, ಸರ್ಕಾರದಿಂದ ಪರಿಹಾರ ದೊರಕಿಸಬೇಕು ಎಂದು ಕೈಮುಗಿದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಬಿಜೆಪಿ ಮುಖಂಡರು, ನಾವು ನಿಮ್ಮ ಜತೆ ಇದ್ದೇವೆ. ನಮ್ಮ ಪಕ್ಷ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ಹೆಚ್ಚು ಪರಿಹಾರ ಕೊಡಿಸಲು ಯತ್ನಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರೈತರು ಕೇಳುವ ಮೊದಲು ಸರ್ಕಾರದಿಂದ ಪರಿಹಾರ ಘೋಷಣೆಯಾಗುವಂತೆ ಮಾಡಲು ಮುಂದಾಗಲಿ  ಎಂದು ಆಗ್ರಹಿಸಿದರು.

ಚಳ್ಳೂರುಕ್ಯಾಂಪ್‌ನ ಬಿ. ಗೋಪಾಲರಾವ್, ಈ.ಧರ್ಮರಾಜ್, ರಾಜೇಶ ಅಬ್ಬೀನ್, ನಾದೆಲ್ಲ ರಾಮಕೃಷ್ಣ, ಎಸ್. ಪ್ರಸಾದ, ಅಲ್ಲೂರಿ ಸುರೇಂದ್ರ, ಚಳ್ಳೂರು ಗ್ರಾಮದ ಶ್ರೀಶೈಲಗೌಡ ಪಾಟೀಲ್, ಸುರೇಶ ಚಿರ್ಚನಗುಡ್ಡ, ಪಂಪಾಪತಿ ಮೇಟಿ, ಚಂದ್ರಶೇಖರ ದೇಸಾಯಿ, ಮಹೇಶ ಮೇಟಿ, ರಾಘವೇಂದ್ರ ಮೇಟಿ, ಗಾದಿಲಿಂಗಪ್ಪ ತಳವಾರ, ಗುಂಡೂರಿನ ಎಚ್. ರಾಜಶೇಖರ ವಕೀಲ, ಸೋಮಶೇಖರ ಹೋಗಾರ, ವೀರೇಶ ಗುರಿಕಾರ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ ಎತ್ತಿನಮನಿ ಮುಖಂಡರಾದ ರಮೇಶ ನಾಡಿಗೇರ್ ಜೂರಟಗಿ, ಜಿ. ತಿಮ್ಮನಗೌಡ, ಪುರಸಭೆ ಸದಸ್ಯರಾದ ಆನಂದ ಮ್ಯಾಗಳಮನಿ, ಬಸವರಾಜ ಕೊಪ್ಪದ ಇತರರು ಇದ್ದರು.

ತಾಲ್ಲೂಕಿನಾದ್ಯಂತ ಸುರಿದ ಆಲಿಕಲ್ಲು ಮಳೆಯಿಂದ ಸುಮಾರು ರೂ 50 ಕೋಟಿಗೂ ಅಧಿಕ ನಷ್ಟವಾಗಿದೆ. ರೈತರು ಸಂಕಷ್ಟಕ್ಕೀಡಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾಧವ ರೆಡ್ಡಿ ಒತ್ತಾಯಿಸಿದರು.

ಸರ್ಕಾರ ರೈತರ ನೆರವಿಗೆ ತಕ್ಷಣ ಬರಬೇಕು. ವಿಳಂಬವಾದರೆ ರೈತರು ಸಾಲದ ಸುಳಿಯಲ್ಲಿ ಸಿಲುಕಿ, ಆತ್ಮಹತ್ಯೆಗೆ ಮುಂದಾಗುವ ಸಾಧ್ಯತೆ ಇದೆ’ ಎಂದರು. ರೈತ ಮುಖಂಡರಾದ ರಾಮನಗೌಡ, ಹನುಮಂತ ರೆಡ್ಡಿ, ಸುರೇಂದ್ರ, ಓಂ ಕಾರಿ, ವಿಶ್ವನಾಥ, ವೆಂಕನಗೌಡ ಆತಂಕ ವ್ಯಕ್ತಪಡಿಸಿದರು.

==ರೈತರಿಗೆ ಮೇಲಿಂದ ಮೇಲೆ ಸಂಕಷ್ಟಗಳು ಕಾಡುತ್ತಿವೆ. ಕೊಳವೆ ರೋಗ, ಅಕಾಲಿಕ ಆಲಿಕಲ್ಲು ಮಳೆ ಗಾಯದ ಮೇಲೆ ಬರೆ ಎಳೆ ದಂತಾಗಿದೆ. ರೈತರು ಕಣ್ಣೀರಲ್ಲಿ ಕೈತೊಳೆಯು ವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮುಖ್ಯಮಂತ್ರಿಗಳ ಮನವೊಲಿಸಿ ಎಕರೆಗೆ ಕನಿಷ್ಠ ₹ 50 ಸಾವಿರದಂತೆ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ, ರೈತರ ಜತೆ ಹೋರಾಟ ರೂಪಿಸಲಾಗುವುದು : ಬಸವರಾಜ ದಢೇಸೂಗೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ

Tags: demand compensationDiscussion with farmers of Karatagi taluk led by BJP District President Basavaraj DadesgurKaratagai Gangavathi News HOSASHAKEKaratagi Hosashake ಭತ್ತದ ಬೆಳೆ ಹಾನಿ : ಬಿಜೆಪಿ ಮುಖಂಡರ ಭೇಟಿRice crop damage: BJP leaders visitಪರಿಹಾರಕ್ಕೆ ಒತ್ತಾಯಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸ್ಗೂರ ನೇತೃತ್ವದಲ್ಲಿ ಕಾರಟಗಿ ತಾಲ್ಲೂಕಿನ ರೈತರೊಂದಿಗೆ ಚರ್ಚೆ
Previous Post

ಏ. 17 ರಂದು ಗಂಗಾವತಿಯಲ್ಲಿ ಬೃಹತ್ ಉದ್ಯೋಗ ಮೇಳ

Next Post

ಕಾರ್ಮಿಕರ ಕನಿಷ್ಠ ವೇತನ ರಾಜ್ಯ ಸರ್ಕಾರದಿಂದ ಪರಿಷ್ಕೃತ ಅಧಿಸೂಚನೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!