* ಹಲಗೇರಿ ಗ್ರಾಮದಲ್ಲಿ ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನ ಭುವನೇಶ್ವರಿ ತಾಯಿ ಭವ್ಯ ಮೆರವಣಿಗೆ
*ಕೃತಿಗಳ ಬಿಡುಗಡೆ || ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ- ರಾಜಶೇಖರ ಹಿಟ್ನಾಳ ||
ಹೊಸಶಕೆ ನ್ಯೂಸ್-ರಾಜಶೇಖರ ಅಂಗಡಿ ವೇದಿಕೆ ,ಹಲಗೇರಿ : ಸೌಹಾರ್ದ,ಸಂಸ್ಕೃತಿ ಪರಸ್ಪರ ಹೆಚ್ಚಾಗಲು ಕನ್ನಡ ಸಾಹಿತ್ಯ ಚಟುವಟಿಕೆಗಳು ಸಮ್ಮೇಳನಗಳು ವೇದಿಕೆ ಒದಗಿಸುತ್ತವೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಹಲಗೇರಿ ಗ್ರಾಮದಲ್ಲಿ ಭಾನುವಾರ ಜರುಗಿದ ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಮಾತನಾಡಿದ ಅವರು, ಸಾವಿರಾರು ವರ್ಷಗಳ ಸಾಹಿತ್ಯ, ಸಾಂಸ್ಕೃತಿಕ ,ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದಲ್ಲಿ ಆ ಪರಂಪರೆಯನ್ನು ಗಟ್ಟಿಗೊಳಿಸಿ,ವಿಸ್ತರಿಸಲು ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಪರಿಸರದಲ್ಲಿ ಹೆಚ್ಚು ಹೆಚ್ಚು ನಡೆಯುವುದು ಉತ್ತಮ ಬೆಳವಣಿಗೆಗೆ ವೇದಿಕೆಯಾಗಲಿವೆ. ಸಮ್ಮೇಳನದ ನೆನಪಿಗೆ ಹಾಗೂ ಗ್ರಾಮದ ಸಂಘಟಕ
ರಾಜಶೇಖರ ಅಂಗಡಿ ಅವರ ಹೆಸರಿನಲ್ಲಿ ಹಲಗೇರಿಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಪ್ರಸಕ್ತ ವರ್ಷವೇ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಮ್ಮಿ,ಡ್ಯಾಡಿ ಸಂಸ್ಕೃತಿ ಇಂದಿ ಬಹಳ ಅಗಾಧವಾಗಿ ವ್ಯಾಪಿಸುತ್ತಿದೆ.ಇದು ಆತಂಕದ ಸಂಗತಿ, ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವುದು ಕೂಡ ಒಳ್ಳೆಯ ಬೆಳವಣಿಗೆಯಲ್ಲ. ಯಾವುದೇ ಆರ್ಥಿಕ ನೆರವು ನಿರೀಕ್ಷಿಸದೇ ಕನ್ನಡ ಸಾಹಿತ್ಯ ಸಮ್ಮೇಳನಗಳು ಹಳ್ಳಿ ಹಳ್ಳಿಗಳಲ್ಲಿ ಗ್ರಾಮಸ್ಥರೇ ನಡೆಸಬೇಕು.ಮುಂದಿನ ಪೀಳಿಗೆಗೆ ಕನ್ನಡ ನಾಡು, ನುಡಿ ಬೆಳವಣಿಗೆಯ ಇತಿಹಾಸ ಅರಿಯಲು ಸಮ್ಮೇಳನಗಳು ಅಗತ್ಯ , ಸಮ್ಮೇಳನಗಳಲ್ಲಿ ರಾಜಕಾರಣಿಗಳಿಗಿಂತ ಸಾಹಿತಿಗಳು,ಚಿಂತಕರು ,ಶಿಕ್ಷಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶರಣಪ್ಪ ಬಾಚಲಾಪೂರ ಅವರು, 10 ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಮಾಲಾ ಡಿ.ಬಡಿಗೇರ ಅವರಿಗೆ ಪರಿಷತ್ತಿನ ಧ್ವಜ ಹಸ್ತಾಂತರ ಮಾಡಿ,ಮಾತನಾಡಿ, ಇತಿಹಾಸ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಹೊಂದಿರುವ ಕೊಪ್ಪಳದ ಪರಿಸರ ಹಾಗೂ ಮಾಲಿನ್ಯ ಮುಕ್ತ ವಾತಾವರಣವನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು.
ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ ಮಾತನಾಡಿ, ಸಮುದಾಯದ ಕಾರ್ಯಗಳನ್ನು ಒಗ್ಗಟ್ಟಿನಿಂದ ನಿರ್ವಹಿಸುವ ಮನೋಭಾವದ ಹಲಗೇರಿ ಗ್ರಾಮಸ್ಥರು ಇಂದು ಅದೇ ಉತ್ಸಾಹದಿಂದ ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಮಾದರಿಯಾಗಿದೆ ಎಂದರು.
ಬಿಜೆಪಿ ಮುಖಂಡ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಕವಿರಾಜಮಾರ್ಗಕಾರನಿಂದ ತಿರುಳ್ಗನ್ನಡ ನಾಡು ಎಂದು ಬಣ್ಣಿಸಲ್ಪಟ್ಟಿದೆ.ಜಿಲ್ಲೆಯ ಸಾಹಿತ್ಯಿಕ ,ಸಾಂಸ್ಕೃತಿಕ ವಿಕಾಸಕ್ಕೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಾಹಿತಿಗಳು,ಪತ್ರಕರ್ತರು ಹಾಗೂ ಬರಹಗಾರರ ಕೊಡುಗೆ ದೊಡ್ಡದು ಎಂದರು.
ಕಾಂಗ್ರೆಸ್ ಧುರೀಣೆ ಮಂಜುಳಾ ಅಮರೇಶ್ ಕರಡಿ ಮಾತನಾಡಿ, ಜಿಲ್ಲೆಯಲ್ಲಿ ಪದ್ಮಶ್ರೀ ಭೀಮವ್ವ ಕಿಳ್ಳಿಕ್ಯಾತರ,ಹುಚ್ಚಮ್ಮ ಚೌಧರಿ,ಮಾಲಾ ಬಡಿಗೇರ ಅವರಂತಹ ಮಹಿಳೆಯರು ಸಾಧನೆಯ ಎತ್ತರಕ್ಕೇರಿರುವುದು ಸಂತಸದ ಸಂಗತಿ ಎಂದರು.
ಕೃತಿಗಳ ಬಿಡುಗಡೆ : ವೀರಣ್ಣ ವಾಲಿ ರಚಿತ “ಅವಿಭಜಿತ ಯಲಬುರ್ಗಾ ತಾಲೂಕಿನ ರಂಗಭೂಮಿ”,ರಮೇಶ ಬನ್ನಿಕೊಪ್ಪ ಅವರ ” ಹೊನ್ನುಡಿಯ ಓದು”, ಸಮ್ಮೇಳನ ಸ್ಮರಣ ಸಂಚಿಕೆ “ಕೊಪಣ ತೀರ್ಥ” ಸೇರಿದಂತೆ ವಿವಿಧ ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.
ಹಲಗೇರಿ ಗ್ರಾ.ಪಂ.ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ,ಉಪಾಧ್ಯಕ್ಷೆ ವಿರುಪವ್ವ ಹುಚ್ಚಪ್ಪ ಬೇಳೂರು,ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ,ಶಂಭುಲಿಂಗನಗೌಡ ಪಾಟೀಲ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಹಳ್ಳಿ,ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಮ್ಯಾಗಳಮನಿ, ವರುಣಕುಮಾರ ನಿಟ್ಟಾಲಿ, ಗವಿಸಿದ್ಧನಗೌಡ ಪಾಟೀಲ, ಬಸನಗೌಡ ಪಾಟೀಲ, ಕುಬೇರಪ್ಪ ಗೊರವರ, ಶರಣಪ್ಪ ಬಿನ್ನಾಳ, ಶಂಕ್ರಪ್ಪ ಅಂಗಡಿ, ಶರಣಬಸನಗೌಡ ಪಾಟೀಲ, ಹನುಮಂತಪ್ಪ ಹಳ್ಳಿಕೇರಿ, ಸಂತೋಷ ದೇಶಪಾಂಡೆ, ದೇವೇಂದ್ರಪ್ಪ ಬಡಿಗೇರ, ಸರೋಜ ಗೌಡರ್, ದೇವಪ್ಪ ಓಜನಹಳ್ಳಿ, ಈರಣ್ಣ ಕಂಬಳಿ, ಭೀಮಣ್ಣ ಗುಡ್ಲಾನೂರ, ರಾಮಚಂದ್ರಗೌಡ ಬಿ.ಗೊಂಡಬಾಳ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು. ವಿರೇಶ ಕೊಪ್ಪಳ, ರಮೇಶ ತುಪ್ಪದ ಕಾರ್ಯಕ್ರಮ ನಿರೂಪಿಸಿದರು.ಸಮ್ಮೇಳನಾಧ್ಯಕ್ಷೆ ಮಾಲಾ ಡಿ.ಬಡಿಗೇರ ನುಡಿಗಳು : * ಹಣ್ಣುಗಳ ಸಂಗ್ರಹಣೆ ಮತ್ತು ಸಂಸ್ಕರಣೆ ಘಟಕ ಸ್ಥಾಪಿಸಿ ಫ್ರುಟ್ಸ್ ಪಾರ್ಕ್ ಸ್ಥಾಪಿಸಬೇಕು : ಪಾರಂಪರಿಕ ಹಾಗೂ ಆಧುನಿಕ ಹಣ್ಣು ಬೆಳೆಗಳನ್ನು ಬೆಳೆಯುವ ಕೃಷಿಕರನ್ನು ಪ್ರೋತ್ಸಾಹಿಸಲು ಇಲ್ಲಿ ಹಣ್ಣುಗಳ ಸಂಗ್ರಹಣೆ ಮತ್ತು ಸಂಸ್ಕರಣೆ ಘಟಕ ಸ್ಥಾಪಿಸಿ ಫ್ರುಟ್ಸ್ ಪಾರ್ಕ್ ಸ್ಥಾಪಿಸಬೇಕು ಎಂದು ಹತ್ತನೇ ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಮಾಲಾ ಡಿ.ಬಡಿಗೇರ ಒತ್ತಾಯಿಸಿದರು.
ಹಲಗೇರಿ ಗ್ರಾಮದಲ್ಲಿ ನಡೆದ ಸಮ್ಮೇಳನದ ಸರ್ವಾಧ್ಯಕ್ಷೆ ಭಾಷಣ ಮಾಡಿದ ಅವರು, ಪ್ರಮುಖವಾಗಿ ಒಣ ಬೇಸಾಯದ ಪ್ರದೇಶವಾಗಿರುವ ಕೊಪ್ಪಳ ತಾಲೂಕು ಕೆಂಪು ಹಾಗೂ ಕಪ್ಪು ಮಣ್ಣು ಪ್ರದೇಶವಾಗಿದೆ. ಈ ಭಾಗದಲ್ಲಿ ಪಪ್ಪಾಯ, ಚಿಕ್ಕು, ದ್ರಾಕ್ಷಿ, ಮಾವು, ಬಾಳೆ, ಅಂಜೂರು, ಬೋರೆಹಣ್ಣು , ಡ್ರ್ಯಾಗನ್ ಫ್ರೂಟ್ , ವೀಳ್ಯದೆಲೆ ಬೆಳೆಯುವ ಪ್ರವೃತ್ತಿ, ಪ್ರಯೋಗಕ್ಕೆ ನಮ್ಮ ರೈತರು ತೆರೆದುಕೊಳ್ಳುತ್ತಿರುವ ಈ ತಾಲ್ಲೂಕನ್ನು ಹಣ್ಣು ಬೆಳೆಯುವ ತಾಲೂಕು ಸರ್ಕಾರ ಘೋಷಿಸಿ ಫ್ರುಟ್ಸ್ ಪಾರ್ಕ್ ಸ್ಥಾಪಿಸಬೇಕು ಎಂದರು.
ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಡಿ ಇಡಬೇಕು. ತುಂಗಭದ್ರಾ ಜಲಾಶಯದ ನೀರಿನ ಸಾಮರ್ಥ ಸರಿದೂಗಿಸಲು ನವಲಿ ಬಳಿ 25,601 ಕೋಟಿ ರೂ.ವ್ಯಯದಲ್ಲಿ ಸಮಾನಾಂತರ ಜಲಾಶಯ ಸ್ಥಾಪನೆಯನ್ನು ಮುಖ್ಯಮಂತ್ರಿಯವರು ಆಯವ್ಯಯದಲ್ಲಿ ಘೋಷಿಸಿರುವುದನ್ನು ಸ್ವಾಗತಿಸುವಿದಾಗಿ ತಿಳಿಸಿದರು.
ಶಾಸನಗಳಲ್ಲಿ ಉಲ್ಲೇಖವಾಗಿರುವ ಹಲಗೇರಿ ಗ್ರಾಮದ ಶಾಂಭವಿ ಸನ್ನಿಧಿ,ಕೊಪಣದ ಇತಿಹಾಸ,ಧಾರ್ಮಿಕ ಕ್ಷೇತ್ರ,ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಕೊಪ್ಪಳದ ಸಾಹಿತ್ಯ ಸೇವೆ,ಬರಹಗಾರರು, ಸಂಘಟನೆಗಳು, ಪತ್ರಿಕೋದ್ಯಮ, ಜನಪರ ಚಳವಳಿಗಳು,ಶಿಕ್ಷಣ ಕ್ಷೇತ್ರ, ಸಂಗೀತ,ರಂಗಭೂಮಿ, ಚಲನಚಿತ್ರ ಹಾಗೂ ಕಿರುಚಿತ್ರ ಕ್ಷೇತ್ರದಲ್ಲಿ ಕೊಪ್ಪಳದ ಸಾಹಿತಿಗಳು, ಕಲಾವಿದರ ಕೊಡುಗೆಗಳನ್ನು ಸಮ್ಮೇಳನಾಧ್ಯಕ್ಷರು ತಮ್ಮ ಮಾತುಗಳಲ್ಲಿ ಸ್ಮರಿಸಿದರು.
ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಡಿ ಇಡಬೇಕು. ತುಂಗಭದ್ರಾ ಜಲಾಶಯದ ನೀರಿನ ಸಾಮರ್ಥ ಸರಿದೂಗಿಸಲು ನವಲಿ ಬಳಿ 25,601 ಕೋಟಿ ರೂ.ವ್ಯಯದಲ್ಲಿ ಸಮಾನಾಂತರ ಜಲಾಶಯ ಸ್ಥಾಪನೆಯನ್ನು ಮುಖ್ಯಮಂತ್ರಿಯವರು ಆಯವ್ಯಯದಲ್ಲಿ ಘೋಷಿಸಿರುವುದನ್ನು ಸ್ವಾಗತಿಸುವಿದಾಗಿ ತಿಳಿಸಿದರು.
ಕನ್ನಡ ಭಾಷೆಯ ಬಗ್ಗೆ ಅಭಿಮಾನವಿರಲಿ- ಸಂಸದ ರಾಜಶೇಖರ ಹಿಟ್ನಾಳ : ಕನ್ನಡಮ್ಮ ಸುದ್ದಿ-ಕೊಪ್ಪಳ : ಕನ್ನಡಿಗರಾದ ನಾವು ಮಾತನಾಡುವಾಗ ನಮ್ಮ ಭಾಷೆಗೆ ಮೊದಲು ಆದ್ಯತೆ ನೀಡುವುದು ಅವಶ್ಯವಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಕೊಪ್ಪಳ ತಾಲೂಕು 10 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಲಗೇರಿ ಗ್ರಾಮದಲ್ಲಿ ರಾಷ್ಟ್ರ ದ್ವಜಾರೋಹನ ಮಾಡಿ ಮಾತನಾಡಿದ ಅವರು ಸಂಸತ್ತಿನಲ್ಲಿರುವ ಸದಸ್ಯರಿಗೆ ಇಂಗ್ಲಿಷ್. ಹಿಂದಿ ಭಾಷೆ ಬರುತ್ತಿದ್ದರೂ ಅವರು ಮೊದಲು ತಮ್ಮ ಭಾಷೆಯನ್ನು ಮಾತನಾಡುತ್ತಾರೆ. ಅವರ ಮಾತೃ ಭಾಷೆಯ ಅಭಿಮಾನ ನಮ್ಮಲ್ಲಿಯೂ ಬರಲಿ. ಕನ್ನಡ ಶಾಲೆಗಳು. ಕನ್ನಡ ಭಾಷೆಗೆ ನಾವೆಲ್ಲರೂ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಚರ್ಚೆ ನಡೆಯಲಿ ಎಂದರು.
ಕೊಪ್ಪಳ ತಾಲೂಕು 10 ನೆಯ ಕನ್ನಡ ಸಾಹಿತ್ಯ ಸಮ್ಮೇಳ ದ್ವಾರಗಳ ಉದ್ಘಾಟನೆ : ಕೊಪ್ಪಳ ತಾಲೂಕಿನ 10 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಇತ್ತೀಚಿಗೆ ನಿಧನರಾದ ಹಿರಿಯ ಗಣ್ಯರ ಹೆಸರಿನ ಮಹಾದ್ವಾರಗಳನ್ನು ಸ್ಥಾಪಿಸಲಾಗಿದ್ದು. ದ್ವಾರಗಳ ಉದ್ಘಾಟನೆಯನ್ನು ಜಿಲ್ಲಾ ಕಂದಾಯ ಇಲಾಖೆಯ ಅಧ್ಯಕ್ಷರಾದ ಮಂಜುನಾಥ ಮ್ಯಾಗಳಮನಿ, ಹಾಗು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಂಬುಲಿಂಗಗೌಡ ಪಾಟೀಲ ನೆರವೇರಿಸಿದರು.
ಡಾ ಪಂಚಾಕ್ಷರಿ ಹಿರೇಮಠದ ಮಹಾಧ್ವಾರ. ಮೂರ್ತಿಗೌಡ ಅಬ್ಬಿಗೇರಿ, ಪರಮೇಶಗೌಡ ಪಾಟೀಲ, ಹನುಮಂತಪ್ಪ ಅಂಡಗಿ. ವಿಮಲಾಬಾಯಿ ಇನಾಂದಾರ. ಚನ್ನಬಸಪ್ಪ ಬನ್ನಿಕೊಪ್ಪ. ನರಸಿಂಹರಾವ್ ಕುಲಕರ್ಣಿ ಹೆಸರಿನಲ್ಲಿ ದ್ವಾರಗಳನ್ನು ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಸಮ್ಮೇಳನಾಧ್ಯಕ್ಷೆ ಶ್ರೀಮತಿ ಮಾಲಾ ಬಡಿಗೇರ, ಇದ್ದರು. ಶರಣಬಸಪ್ಪ ಮಾಗಳದ ನಿರೂಪಣೆ ಮಾಡಿದರು. ಕೊಟ್ರಪ್ಪ ಸ್ವಾಗತಿಸಿದರು. ಶರಣಬಸವರಾಜ ವಂದನೆ ಮಾಡಿದರು. ಭುವನೇಶ್ವರಿ ತಾಯಿ ಭವ್ಯ ಮೆರವಣಿಗೆ : ಕೊಪ್ಪಳ ತಾಲೂಕು 10 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶ್ರೀಮಾಲಾ ಬಡಿಗೇರ ಹಾಗು ಭುವನೇಶ್ವರಿ ತಾಯಿ ಭವ್ಯ ಮೆರವಣಿಗೆ ನಡೆಯಿತು. ಅಲಂಕೃತ ಸಾರೋಟದಲ್ಲಿ ಶ್ರೀಮಾಲಾ ಬಡಿಗೇರ ಹಾಗು ಡಿ ಎಂ ಬಡಿಗೇರರ ಕುಳ್ಳರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಹಲಗೇರಿಯ ಶ್ರೀಹಮ್ಮಿಗೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಗೆ ಹಿರಿಯ ಸಾಹಿತಿ ಈಶ್ವರ ಹತ್ತಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಗ್ರಾಮದ ಸುಮಾರು 20 ಕ್ಕೂ ಹೆಚ್ಚು ಎತ್ತಿನ ಬಂಡಿಗಳು ಮೆರವಣಿಗೆ ಇದ್ದವು. ಎತ್ತು ಹಾಗು ಬಂಡಿಯನ್ನು ಅಲಂಕಾರಗೊಳಿಸಿದ್ದರು. ಇದೇ ವೇಳೆ ಶಾಂಭವಿ ಡೊಳ್ಳಿನ ಸಂಘ. ಹಣವಾಳದ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಳವಂಡಿಯ ಕಸ್ತೂರಿಬಾ ವಸತಿ ಶಾಲೆ ಮಕ್ಕಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿಯೋಜನೆಗೊಂಡಿರುವ ಹುಬ್ಬಳ್ಳಿಯ ಜಗ್ಗಲಗಿ. ಧಾರವಾಡದ ಲೇಹಿಂಗಿ ನೃತ್ಯ. ಕಲಘಟಗಿಯ ಕಲಾವಿದರಿಂದ ಲಂಬಾಣಿ ನೃತ್ಯ , ಚಳ್ಳಿಕೇರಿ ನಾಶಿ ಡೋಲ್ ಹಾಗು ಗರಡುಗೊಂಬೆ ಕಲಾವಿದರ ಭಾಗಿಯಾಗಿದ್ದರು.