ಹೊಸಶಕೆ ನ್ಯೂಸ್-ಯಲಬುರ್ಗಾ: ಎಲ್ಲರ ಜೀವನ ಬೆಳಕಿನಂತೆ ನಿತ್ಯ ಪ್ರಜ್ವಲಿಸಲಿ ಎಂದು ಯಲಬುರ್ಗಾ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಷ.ಬ್ರ. ಶ್ರೀ ಗುರು ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಗ್ರಾಮ ಪಂಚಾಯತಿ ಅನುದಾನದಲ್ಲಿ ಅಳವಡಿಸಲಾದ ಹೈ ಮಾಸ್ಟ್ ಬೀದಿ ದೀಪಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ, ಮಾತನಾಡಿದರು. ಮನುಷ್ಯನಿಗೆ ಗಾಳಿ, ನೀರು, ಬೆಳಕು ಬಹಳ ಮುಖ್ಯವಾಗಿವೆ. ಗ್ರಾಮದ ಜನತೆಯ ಆಸೆಯನ್ನು ಅರಿತು ಗ್ರಾಮ ಪಂಚಾಯತಿ ಯಿಂದ ದೊಡ್ಡದಾದ ಬೀದಿ ದೀಪ ಅಳವಡಿಸಿರುವುದು ತುಂಬಾ ಶ್ಲಾಘನೀಯ ಎಂದರು.
ಗ್ರಾ.ಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ, ಸದಸ್ಯರಾದ ಶರಣಪ್ಪ ಕರಡದ, ಶರಣಪ್ಪ ಹಾದಿಮನಿ, ನಿವೃತ ಶಿಕ್ಷಕ ಸಕ್ರಪ್ಪ ಕುಂಟ್ರು, ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಈರಪ್ಪ ಕುಡಗುಂಟಿ, ಮುಖಂಡರಾದ ಶರಣಪ್ಪ ಮೆಣಸಿಗೇರಿ, ಶಾಂತಪ್ಪ ಅಂಗಡಿ, ಶರಣಪ್ಪ ಚವಡಿ, ಈರಣ್ಣ ಅಂಗಡಿ, ರಾಮಣ್ಣ ಹಿರೇಮನಿ, ಶರಣಪ್ಪ ಬೆಣಕಲ್, ಖಾಸೀಮ್ ಸಾಬ ನಧಾಪ್, ಬಾಳಪ್ಪ ಚವಡಿ, ಯಮನೂರಪ್ಪ ಕಡೇಮನಿ, ಸಿದ್ದಪ್ಪ ಚವಡಿ, ಮಾರುತೆಪ್ಪ ರ್ಯಾವಣಕಿ, ಬಸವರಾಜ ಸೋಂಪುರ, ಮಲ್ಲಪ್ಪ ರ್ಯಾವಣಕಿ, ಶರಣಪ್ಪ ಅಂಗಡಿ, ಹನುಮಪ್ಪ ಸೂಡಿ, ಶಿವಾನಂದ ಉಪ್ಪಾರ ಸೇರಿದಂತೆ ಗ್ರಾಮಸ್ಥರು ಇದ್ದರು