Hosashake News
No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ
Hosashake News
No Result
View All Result
Home ಜಿಲ್ಲೆ

ಕಳೆದುಕೊಂಡ ಮೊಬೈಲ್ ಗಳನ್ನು ಹಿಂತಿರುಗಿಸಿದ ಪಿ.ಐ.ಪ್ರಕಾಶ್ ಮಾಳೆ

ಗಂಗಾವತಿ ನಗರ ಠಾಣೆ ಯಿಂದ ಸಿ.ಈ.ಐ.ಆರ್. ಪೋರ್ಟಲ್ ಮುಖಾಂತರ ಕಳೆದು ಹೋದ ಮೊಬೈಲಗಳ ಪತ್ತೆ

Hosashake News by Hosashake News
March 17, 2025
in ಜಿಲ್ಲೆ, ಪ್ರಾದೇಶಿಕ, ರಾಜ್ಯ, ಸುದ್ದಿ
0
ಕಳೆದುಕೊಂಡ ಮೊಬೈಲ್ ಗಳನ್ನು ಹಿಂತಿರುಗಿಸಿದ ಪಿ.ಐ.ಪ್ರಕಾಶ್ ಮಾಳೆ
Share on FacebookShare on Twitter

ಹೊಸಶಕೆ ನ್ಯೂಸ್-ಗಂಗಾವತಿ: ನಗರದಲ್ಲಿರುವ ಸಾರ್ವಜನಿಕರು ತಮ್ಮ ಕೈಯಲ್ಲಿನ ದುಬಾರಿಗೆ ಬೆಲೆಬಾಳುವ ಮೊಬೈಲ್ ಗಳನ್ನು ಕಳೆದುಕೊಂಡು ಪಶ್ಚಾತಾಪ ಪಡುತ್ತಿರುವ ಈ ಸಂದರ್ಭದಲ್ಲಿ. ಸಾರ್ವಜನಿಕರು ಮೊಬೈಲ್ ಗಳನ್ನು ಕಳೆದುಕೊಂಡು ಗಂಗಾವತಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ನಗರ ಠಾಣೆಯ ಪಿ.ಐ.ಪ್ರಕಾಶ್ ಮಾಳೆ ಅವರು ಕಳೆದು ಹೋದ ಮೊಬೈಲಗಳನ್ನು ಸಿ.ಈ.ಐ.ಆರ್. (CEIR) ಪೋರ್ಟಲ್ ಮುಖಾಂತರ ಪತ್ತೆ ಮಾಡಿ 5 ಮೊಬೈಲಗಳನ್ನು ಕಳೆದುಕೊಂಡ ಸಂಬಂಧಪಟ್ಟವರಿಗೆ ಈ ದಿನ ಹಿಂತಿರುಗಿಸಿದರು.

ಮೊಬೈಲ್ ಗಳನ್ನು ಕಳೆದುಕೊಂಡ ಸಾರ್ವಜನಿಕರಿಗೆ ಪುನಹ ಮೊಬೈಲ್ ತಮ್ಮ ಕೈ ಸೇರಿದ ತಕ್ಷಣ ಖುಷಿಯಾಗಿದ್ದಾರೆ. ನಗರ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರು ಅತ್ಯಂತ ಸಂತಸ ಪಟ್ಟು ಇಲಾಖೆ ಯನ್ನು ಕೊಂಡಾಡಿದರು.   ಈ ಸಂದರ್ಭದಲ್ಲಿ  ನಗರ ಠಾಣೆಯ ಎ.ಎಸ್.ಐ. ಶಿವಶರಣಪ್ಪ, ಸಿಬ್ಬಂದಿಗಳಾದ ವಿಶ್ವನಾಥ, ಚಿರಚೀವಿ,ಮೈಲಾರಪ್ಪ, ಮಹೇಶ್,ಮರಿಶಾಂತಗೌಡ,ಗ್ಯಾನಪ್ಪ ಕುರಿ ಸೇರಿದಂತೆ ಇತರರು ಇದ್ದರು

ಸಾರ್ವಜನಿಕರು  ತಮ್ಮದು ಯಾವುದೇ ವಸ್ತು ಕಳವಾದಲ್ಲಿ ತಕ್ಷಣ ಇಲಾಖೆಗೆ ಬಂದು ದೂರನ್ನು ದಾಖಲಿಸಬೇಕು. ಜೊತೆಗೆ ಅಗತ್ಯ ದಾಖಲಾತಿಗಳನ್ನು ಸಹ ಹೊಂದಿರಬೇಕು. ಸಾರ್ವಜನಿಕರು ಯಾವತ್ತಿಗೂ ಕಾನೂನನ್ನು ಗೌರವಿಸಬೇಕು ಕಾನೂನು ಸಹ ಸಾರ್ವಜನಿಕರನ್ನು ಸದಾ ಗೌರವಿಸುತ್ತದೆ. ಪೊಲೀಸ ಇಲಾಖೆ ಅಂದರೆ ಭಯಪಡುವ ಅಗತ್ಯವಿಲ್ಲ. ಇದು ನಿಮ್ಮದೇ ಆದ ವಿಶ್ವಾಸನಿಯ ಇಲಾಖೆಯಾಗಿದ್ದು, ತಮ್ಮದು ಯಾವುದೇ ದೂರು ಇದ್ದರೂ ಸಹ ಬಂದು ಪ್ರೀತಿ ಸಹನೆಯಿಂದ ಹಂಚಿಕೊಳ್ಳಬಹುದು. ಸಾರ್ವಜನಿಕರ ಪ್ರತಿಯೊಂದು ಸಮಸ್ಯೆಗಳಿಗೆ ಕುಂದು ಕೊರತೆಗಳಿಗೆ ಪರಿಹಾರ ಇದ್ದೇ ಇರುತ್ತದೆ, ತಮಗೆ ಅಗತ್ಯ ಎನಿಸಿದಲ್ಲಿ ನಗರ ಠಾಣೆಗೆ ಬಂದು ವಿಷಯಗಳನ್ನು ಚರ್ಚಿಸಬಹುದು :.ಪ್ರಕಾಶ್ ಮಾಳೆ, ಪಿ.ಐ ನಗರ ಠಾಣೆ ಗಂಗಾವತಿ.

Tags: Gangavathi P.I. Prakash Male returned the lost mobile phonesGangavathi PoliceKoppal Gangavtahi PoliceP.I. Prakash Male returned the lost mobile phonesಪಿ.ಐ.ಪ್ರಕಾಶ್ ಮಾಳೆ
Previous Post

ಮಹಿಳೆಯರ ಸೀನಿಯರ್ ವುಶೂ ಲೀಗ್ ಸ್ಪರ್ಧೆ ಕು.ಐಶ್ವರ್ಯ, ಕು.ಆಶಾ ಆಯ್ಕೆ

Next Post

ಸಾಮಾಜಿಕ ಸೇವೆಗೆ ಡಾ.ಪುನೀತ್ ರಾಜಕುಮಾರ ಮಾದರಿ : ದೇವರಮನೆ

Hosashake News

Hosashake News

Leave a Reply Cancel reply

Your email address will not be published. Required fields are marked *

Archive

Most commented

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಪೊಲೀಸ್ ಇಲಾಖೆಯಿಂದ ಮೋರೆರ ಗುಡ್ಡ (ಹಿರೇ ಬೇಣಕಲ್ ಗುಡ್ಡ) ಬೆಟ್ಟದ ಚಾರಣ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

ಹೊಸಶಕೆ ದಿನಪತ್ರಿಕೆ

  • Facebook
  • Twitter
  • Instagram
Call us: +91 7026237749
Email: hosashakepress@gmail.com

© 2025 Hosashakenews - Powered by KIPL.

No Result
View All Result
  • Home
  • About Us
  • E-paper
  • ಸುದ್ದಿ
  • ದೇಶ
  • ರಾಜ್ಯ
  • ಜಿಲ್ಲೆ
  • ಪರಿಸರ
  • ಅವಲೋಕನ
  • ಶಿಕ್ಣಣ-ಆರೋಗ್ಯ
  • ಕ್ರೀಡೆ
  • ಕಲೆ-ಸಾಹಿತ್ಯ-ಸಂಸ್ಕೃತಿ
  • ರಾಜಕೀಯ
  • ಪ್ರಾದೇಶಿಕ

© 2025 Hosashakenews - Powered by KIPL.

error: Content is protected !!